Grace of Mercury: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು.
KSRTC : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಸಂಬಂಧಿಸಿದಂತೆ, ಇದೇ ಮೇ 15ರಿಂದ ದಾಖಲಾತಿ ಪರಿಶೀಲನೆ ಮತ್ತು ದೈಹಿಕ ದಾರ್ಢ್ಯತಾ ಪರೀಕ್ಷೆಗಳು ನಡೆಯಲಿವೆ.
Kalaburagi Women and Child Development Department Job Openings:ಒಂದು ಜಿಲ್ಲಾ ಮಿಷನ್ ಕೋಆರ್ಡಿನೇಟರ್ ಹುದ್ದೆ ಮತ್ತು ಒಂದು ಸ್ಪೆಷಲಿಸ್ಟ್ (ಫೈನಾನ್ಶಿಯಲ್ ಲಿಟರಸಿ & ಅಕೌಂಟೆಂಟ್) ಹುದ್ದೆ ಖಾಲಿ ಇವೆ.
Hassan Gram Panchayat Recruitment 2024: ಹಾಸನ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಲೈಬ್ರರಿ ಸೈನ್ಸ್ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಪೂರ್ಣಗೊಳಿಸಿರಬೇಕು.
ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
ನಿಯಮಾವಳಿಗಳ ಪ್ರಕಾರ, ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡ ಕುಟುಂಬಗಳ ಅರ್ಹರಿಗೆ ಉದ್ಯೋಗ ನೀಡುವುದು ಕಡ್ಡಾಯವಾಗಿದೆ. ಈಗ ಸಂಕಷ್ಟಕ್ಕೆ ಸಿಲುಕಿರುವವರ ಬದುಕನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ಮಂಗಳೂರು ಎಸ್ಇಜೆಡ್ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ.
Job opportunities: ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಸೂಚ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 8, 2024ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
Ayodhya Ram Mandir: ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಇಲ್ಲಿ ದೊಡ್ಡ ದೊಡ್ಡ ಕಂಪನಿಗಳು ಸ್ಥಾವರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ್ದು, ಭವಿಷ್ಯದಲ್ಲಿ ಅಯೋಧ್ಯೆ ಉದ್ಯೋಗ ಕೇಂದ್ರವಾಗಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ 5ನೇ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ. ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ಈ ಬಗ್ಗೆ ಡಿಟೇಲ್ಸ್ ನಿಮ್ಮ ಮುಂದೆ.
Yuva Nidhi: 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಯುವನಿಧಿ ಯೋಜನೆ ಸಿಗಲಿದೆ. ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾದ ಅಗತ್ಯ ಇಲ್ಲ.
Make In India: ಯುಪಿಎ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿನ ಅಭಿವೃದ್ಧಿಯ ಕಾರಣದಿಂದ, ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು. ಕಾರ್ಖಾನೆಗಳಲ್ಲಿನ ಉದ್ಯೋಗ ದರ ವಾರ್ಷಿಕವಾಗಿ 6.2% ಹೆಚ್ಚಳ ಕಂಡಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಈ ಉದ್ಯೋಗ ದರ 2.8%ಕ್ಕೆ ಕುಸಿತ ಕಂಡಿದೆ. ಅದೇ ರೀತಿ, ಯುಪಿಎ ಆಡಳಿತದ ಅವಧಿಯಲ್ಲಿ ಉದ್ಯೋಗಿಗಳ ಸಂಬಳ ವಾರ್ಷಿಕವಾಗಿ 17.1% ದರದಲ್ಲಿ ಹೆಚ್ಚುತ್ತಿದ್ದರೆ, 2014ರ ಬಳಿಕ ಸಂಬಳ ಹೆಚ್ಚಳದ ದರ 8.4%ಗೆ ಇಳಿಕೆ ಕಂಡಿದೆ.
ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಬದಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗ ಕಲ್ಪಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 91 ಯೋಜನೆಗಳ ಒಟ್ಟು 7,660 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. ಇದ್ರಿಂದ 13 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಈ ಬಗ್ಗೆ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.
ಉದ್ಯೋಗದ ಆಮಿಷ ತೋರಿಸಿ ಕುವೇತ್ಗೆ ಹೋಗಿದ್ದ ವಿಜಯಪುರದ ಯುವಕರು ಕಣ್ಣೀರು ಹಾಕುವಂತಾಗಿದೆ. ಸಚಿನ್ ಜಂಗಮ್ ಶೆಟ್ಟಿ, ವಿಶಾಲ್ ಶ್ರೀಕಾಂತ್ ಎಂಬ ಯುವಕರು ಏಜೆಂಟ್ ವ್ಯಕ್ತಿ ಸಹಾಯದಿಂದ ಕುವೇತ್ಗೆ ಹೋಗಿ ಅಲ್ಲಿ ಹೇಳಿದ ಉದ್ಯೋಗ ಸಿಗದೆ, ಊಟ ವಸತಿ ಕಲ್ಪಿಸದೆ ಅಲ್ಲಿನವರು ಹಿಂಸೆ ನೀಡಿದ್ದಾರೆ.
ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆಗೊಳಿಸಿದ 2021ರ ಜಾಗತಿಕ ಸ್ಪರ್ಧಾತ್ಮಕ ವರದಿಯಲ್ಲಿ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಲಭ್ಯತಾ ಪಟ್ಟಿಯಲ್ಲಿ ಭಾರತ 141 ರಾಷ್ಟ್ರಗಳಲ್ಲಿ 57ನೇ ಸ್ಥಾನ ಹೊಂದಿದೆ. ಈ ವರದಿಯ ಪ್ರಕಾರ, ಭಾರತೀಯ ಉದ್ಯೋಗಿಗಳು ನಾಲ್ಕನೇ ಔದ್ಯಮಿಕ ಕ್ರಾಂತಿ ನಡೆಯಲು ಬೇಕಾಗಿರುವ ಕೌಶಲಗಳನ್ನು ಹೊಂದಿಲ್ಲ.
5ನೇ ರಾಷ್ಟ್ರ ಮಟ್ಟದ ರೋಜಗಾರ್ ಮೇಳದಲ್ಲಿ ಅವರು ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಯುಷ್ ಇಲಾಖೆಯ ಸಚಿವರಾದ ಡಾ.ಮುಂಜಪರಾ ಮಹೇಂದ್ರಭಾಯಿ ಕಲುಭಾಯಿ, ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮುಂದಿನ ಒಂದು ವರ್ಷದಲ್ಲಿ ಸುಮಾರು 10 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಗುರಿಯನ್ನು ಹೊಂದಿದ್ದಾರೆ. ದೇಶದ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು.
Indian Railways: ಪ್ರಧಾನಿ ಮೋದಿಯ ವರು ರೈಲ್ವೆ ಉದ್ಯೋಗಕ್ಕೆ ಅರ್ಹತೆ ಪಡೆದವರಿಗೆ ಒಂದೇ ಸ್ಥಳದಲ್ಲಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದು, ಉಳಿದ ಕೇಂದ್ರ ಸಚಿವರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಪತ್ರಗಳನ್ನು ವಿತರಿಸಲಿದ್ದಾರೆ.
ಅಮಾಯಕರು ಮೊಬೈಲ್ ಸಂದೇಶವನ್ನು ನೋಡಿ ಕರೆಮಾಡಿ ತಗಲಾಕೊಂಡ್ರೆ ಮುಗಿತು, ಖದೀಮರು ನಿಮ್ಮ ಬಳಿ ಹಣ ಪೀಕಲು ಶುರು ಮಾಡ್ತಾರೆ. ಇನ್ನು ವಾಟ್ಸಪ್ ನಲ್ಲಿ ಹೆಚ್ ಎ ಎಲ್ ಶಾಖಾ ವ್ಯವಸ್ಥಾಪಕ ಶಿವಕುಮಾರ್ ಎಂಬ ನಕಲಿ ಹೆಸರಲ್ಲಿ ಮೇಸೇಜ್ ಕಳುಹಿಸಿ ಹರಿಬಿಟ್ಟಿರುವ ಖದೀಮರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.