ಗದಗ, ಶಿವಮೊಗ್ಗ, ವಿಜಯಪುರದಲ್ಲಿ ಧಾರಾಕಾರ ಮಳೆಯಾಗಿದೆ.. ಗದಗ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಮೇತ ಧಾರಾಕಾರ ಮಳೆಯಾಗಿದೆ. ಶಿವಮೊಗ್ಗ ಗ್ರಾಮೀಣ ಭಾಗಗಳಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ & ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಇವುಗಳ ಸಹಯೋಗದೊಂದಿಗೆ ನಡೆಯುವ ಹುಲಕೋಟಿ ಆರ್ ಸೆಟಿ ಸಂಸ್ಥೆಯಲ್ಲಿ ದಿನಾಂಕ 22 ಏಪ್ರಿಲ್ 2022 ರಂದು ಉಚಿತ ಊಟ-ವಸತಿಯೊಂದಿಗೆ ಕಂಪ್ಯೂಟರ್ ಹಾರ್ಡ್ವೇರ್ ಮತ್ತು & ನೆಟವರ್ಕಿಂಗ್, ಫೋಟೋಗ್ರಫಿ & ವಿಡಿಯೋಗ್ರಫಿ ಮತ್ತು ಪ್ಲ್ಯೂಮ್ಬಿಂಗ್ ಮತ್ತು ಸಾನಿಟರಿ ವರ್ಕ್ಸ್ ಉದ್ಯೋಗ ತರಬೇತಿಗಳು ಪ್ರಾರಂಭವಾಗಲಿದೆ.18 ವರ್ಷದಿಂದ 45 ವರ್ಷದ ವಯೋಮಿತಿಯ ಆಕಾಂಕ್ಷಿಗಳು ಕೆಳಗಿನ ನೀಡಿರುವ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು!!!
ವಿಧಾನಸೌಧದಲ್ಲಿ ಅಧಿವೇಶನ ನಡೆದಾಗ ಮೊಬೈಲ್ ನಲ್ಲಿ ಏನ್ ನೋಡಿದ್ರಿ ಅನ್ನೋದನ್ನ ಇಡೀ ಜಗತ್ತಿಗೆ ಗೊತ್ತಿದೆ. ಯಾವ ನೈತಿಕೆಯ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ರಿ ಅನ್ನೋದನ್ನ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸಿಸಿ ಪಾಟೀಲ್ ಗೆ ಟಾಂಗ್ ನೀಡಿದರು.
ನಿಮ್ಮ ಋಣ ನಾ ಎಂದೂ ಮರೆಯಲ್ಲ..ನನಗೆ ರೊಟ್ಟಿ ಕೊಟ್ರಿ, ಮಲಗೋಕೆ ಕಟ್ಟೆ ಜಾಗ ಕೊಟ್ರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನರಗುಂದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾವುಕರಾದರು.
ಈ ಮಣ್ಣಿನ ಕಣ ಕಣದಲ್ಲಿಯೂ ಶಿವಾಜಿ ರಕ್ತ ಇದೆ. ಓವೈಸಿ ಒಬ್ಬ ನಾಯಿ, ಬೋಸಿಡಿಕೆ, ನಿನ್ನಂತವರನ್ನ ಬಹಳ ಜನರನ್ನ ನೋಡಿವಿ. ನಾವು 20 ಕೊಟಿ ಮುಸ್ಲಿಂರು 100 ಕೋಟಿ ಹಿಂದುಗಳನ್ನು ನಾಶ ಮಾಡುತ್ತೇವೆ ಅಂತಾನೆ. ಟಿಪ್ಪು ಸುಲ್ತಾನ, ಗೋರಿ, ಘಜನಿ, ಬಾಬಾರ್ ನನ್ನ ಗೋರಿ ಕಟ್ಟಿದ್ದೇವೆ ಎಂದು ಮುತಾಲಿಕ್ ಗುಡುಗಿದ್ದಾರೆ.
ನಡೆದಾಡುವ ದೇವರು, ಅಂಧ ಆನಾಥರ ಆಶ್ರಯದಾತ, ಗಾನ ಗಂಧರ್ವ, ಪದ್ಮಭೂಷಣ ಎಂದೇ ಜನ ಮಾನಸದಲ್ಲಿ ಅಜರಾಮರವಾಗಿರುವ ಪುಟ್ಟರಾಜ ಗವಾಯಿಗಳು ಇಂದು ಬದುಕಿದ್ದರೆ ಅವರಿಗೆ 108 ವರ್ಷಗಳು ತುಂಬಿರುತ್ತಿತ್ತು.
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದಿಂದ 2021-22 ನೇ ಸಾಲಿನ ಧಾರವಾಡ ಜಿಲ್ಲಾ ವ್ಯಾಪ್ತಿಯ ಹೋಟೆಲ್, ಲಾಡ್ಜಸ್, ರೆಸಾರ್ಟ, ರೆಸ್ಟೋರೆಂಟ್ ಮತ್ತು ಮನೋರಂಜನಾ ಪಾರ್ಕ್ನ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ಹಾಗೂ 3 ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್, ಫಿಕ್ಸೆಡ್ ಡೆಪಾಸಿಟ್ ಮನ್ನಾ ಸೌಲಭ್ಯವನ್ನು ಒದಗಿಸಲಾಗಿದೆ.
ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಜನರು ಅವರ ಸ್ಥಾನವನ್ನು ತೋರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ವಾಗ್ದಾಳಿ ನಡೆಸಿದರು.
ಗಾನಯೋಗಿ ಪಂಡಿತ್ ಪುಟ್ಟರಾಜ್ ಗವಾಯಿಗಳು ಅಂದ ಅನಾಥರಿಗೆ ಬೆಳಕಾದವರು ಸಂಗೀತದ ಮೂಲಕ ಅವರೆಲ್ಲರಿಗೂ ಮಾರ್ಗವನ್ನು ತೊರಿಸಿದವರು ಇಂತಹ ಮಹಾನ್ ಗುರುಗಳು ಇಂದಿಗೆ ತೀರಿಕೊಂಡು 11 ವರ್ಷಗಳಾಗುತ್ತಾ ಬಂತು, ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿಗೂ ಕೂಡ ವೀರೇಶ್ವರ ಪುಣ್ಯಾಶ್ರಮ ಅಂದ ಅನಾಥರ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲಿ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲಿ ಅಧಿಕೃತವಾಗಿ 5 G ನೆಟ್ ವರ್ಕ್ ಗೆ ಇನ್ನೂ ಚಾಲನೆ ದೊರೆತಿಲ್ಲ, ಆಗಲೇ 5G ಸ್ಮಾರ್ಟ್ ಫೋನ್ ಹೇಗೆ ಬಂತು ಅಂತೀರಾ.ಹೌದು ನೀವು ನಂಬಲೇ ಬೇಕು, ಹಳ್ಳಿಮಕ್ಕಳು ಈಗ ತಮ್ಮದೇ ಮಾದರಿಯಲ್ಲಿ 5 ಜಿ ಫೋನ್ ವೊಂದನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದಲ್ಲಿಂದು ಸಂವಿಧಾನದ ಮೌಲ್ಯಗಳನ್ನು ಸಾರುವ ಮದುವೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮಕ್ಕೆ ಭಾವಸಂಗಮ ವಿವಾಹ ವೇದಿಕೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ,ಲಡಾಯಿ ಪ್ರಕಾಶನ,ದಲಿತ ಕಲಾ ಮಂಡಳಿ ಗದಗ ನಂತಹ ಸಂಘಟನೆಗಳು ಸಾಕ್ಷಿಯಾದವು.
ಕೇಂದ್ರ ಸರಕಾರ ಜಾರಿಮಾಡಲು ಹೊರಟಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭಾರತದ ಭವಿಷ್ಯ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ತುರ್ತಾಗಿದೆ ಎಂದು ಸಿ.ಐ.ಟಿ.ಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಅಭಿಪ್ರಾಯಪಟ್ಟರು.
ಸಂವಿಧಾನದ ಆಶಯದಂತೆ ಎಲ್ಲರಿಗೂ ಶಿಕ್ಷಣದ ಹಕ್ಕು ಜಾರಿಯಾಗಬೇಕು.ಗುಣಾತ್ಮಕ ಶಿಕ್ಷಣ ದೊರೆತಾಗ ಮಾತ್ರ ತಳಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತೆಲಂಗಾಣ ರಾಜ್ಯ ಪೊಲೀಸ್ ಆಯುಕ್ತ ಹಾಗೂ ಕಾರ್ಯದರ್ಶಿ ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ವಸತಿಶಾಲೆ ಶಿಕ್ಷಣ ಸಂಸ್ಥೆಗಳ ಸೊಸೈಟಿ,ಅಧ್ಯಕ್ಷ ಸ್ವೆರೋಸ್ ನೆಟ್ವರ್ಕ್ ನ ಡಾ.ಆರ್.ಎಸ್.ಪ್ರವೀಣಕುಮಾರ (IPS) ಹೇಳಿದರು.
ಆ ಯುವಕನಿಗೆ ತಾನು ಶಿಕ್ಷಕನಾಗಿ ಗ್ರಾಮದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕೆನ್ನುವ ಕನಸಿತ್ತು, ಆದರೆ ಆಗ ಅವನಿಗೆ ಆರ್ಥಿಕ ಪರಿಸ್ಥಿತಿ ಇದಕ್ಕೆ ಕೈಹಿಡಿದಿರಲಿಲ್ಲ, ಹೀಗಾಗಿ ಆತ ಕೊನೆಗೆ ತನ್ನ ಬದುಕನ್ನು ಅಗ್ನಿಶಾಮಕ ದಳ ಮತ್ತು ರೈಲ್ವೆ ಇಲಾಖೆಯಲ್ಲಿ ಕಂಡುಕೊಂಡ. ಇಷ್ಟೆಲ್ಲದರ ನಡುವೆಯೂ ಕೂಡ ತಾನು ಶಿಕ್ಷಕನಾಗಬೇಕೆನ್ನುವ ಉತ್ಸಾಹವನ್ನು ಮಾತ್ರ ಎಂದಿಗೂ ಕಳೆದುಕೊಂಡಿರಲ್ಲಿಲ್ಲ. ಹೀಗಾಗಿ ತನ್ನ ಬಾಲ್ಯದ ಕನಸನ್ನು ನನಸು ಮಾಡಲು ಈ ಯುವಕ ಈಗ ಸ್ವಂತ ಶಾಲೆಯನ್ನೇ ನಿರ್ಮಿಸಿದ್ದಾನೆ..!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.