ಅತ್ಯುತ್ತಮ ಗುಣಮಟ್ಟದ ಭಾರತೀಯ ಕೂದಲು "ರೆಮಿ ಹೇರ್" ಎಂದು ಜನಪ್ರಿಯವಾಗಿದ್ದು, ದಕ್ಷಿಣ ಭಾರತದ ದೇಗುಲಗಳಿಂದ ಸಂಗ್ರಹಿಸಲಾಗುತ್ತದೆ. ಅಲ್ಲಿ ಮಹಿಳೆಯರೂ ಹರಕೆಯ ರೂಪದಲ್ಲಿ ತಮ್ಮ ಮುಡಿಯನ್ನು ಅರ್ಪಿಸುತ್ತಾರೆ. ರೆಮಿ ಕೂದಲಿನ ಹೊರಪೊರೆ ಯಾವುದೇ ಹಾನಿಗೊಳಗಾಗಿರದಿರುವುದರಿಂದ, ಈ ಕೂದಲು ಹೆಚ್ಚು ನೈಸರ್ಗಿಕವಾಗಿ ಕಾಣುತ್ತದೆ ಮತ್ತು ದೀರ್ಘಕಾಲ ಬಾಳಿಕೆಗೆ ಬರುತ್ತದೆ.
India Becomes World's Most Populous Country: ಈ ಅಪಾರ ಪ್ರಮಾಣದ ಜನಸಂಖ್ಯೆಯ ಲಾಭ ಪಡೆಯಬೇಕಾದರೆ, ಭಾರತ ದುಡಿಯುವ ವಯಸ್ಸಿನ ಯುವಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ, ಭಾರತದಲ್ಲಿ ಉದ್ಯೋಗ ಮಾಡುವ ವಯಸ್ಸಿನ ಯುವಕರಲ್ಲಿ 40% ಮಾತ್ರವೇ ಉದ್ಯೋಗದಲ್ಲಿದ್ದಾರೆ ಅಥವಾ ಕೆಲಸ ಮಾಡುವ ಹಂಬಲ ಹೊಂದಿದ್ದಾರೆ.
India-China Border Dispute: ಡೊಮಿನಿಕನ್ ರಿಪಬ್ಲಿಕ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಯಾಂಟೋ ಡೊಮಿಂಗೊಗೆ ಆಗಮಿಸಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಾರತ - ಚೀನಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಈ ದೀಪಾವಳಿಯ ಗುರುವಾರ ಮಧ್ಯಾಹ್ನದವರೆಗೆ ದೇಶದಲ್ಲಿ ಸುಮಾರು 1.25 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಸಿಎಐಟಿಯ ಆಂತರಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ. ಹೆಚ್ಚಿನ ಜನರು, ಯಾವುದೇ ವಸ್ತುವನ್ನು ಖರೀದಿಸುವಾಗ, ಅದು ಚೀನಾದಲ್ಲಿ ಅಥವಾ ಚೀನಾದ ಕಂಪನಿಯಿಂದ ತಯಾರಿಸಲ್ಪಟ್ಟಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ.
ಕುತಂತ್ರಿ ಚೀನಾಕ್ಕೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಭಾರತವು ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ (Hasimara Airbase) ಯುದ್ಧ ವಿಮಾನ ರಫೇಲ್ ಅನ್ನು ನಿಯೋಜಿಸಿದೆ. ಸರ್ಕಾರದ ಈ ಕ್ರಮದಿಂದ, ದೇಶದ ಪೂರ್ವ ಗಡಿಯಲ್ಲಿ ಬಲವಾದ ಮೇಲ್ವಿಚಾರಣೆ ನಡೆಯಲಿದೆ ಮತ್ತು ಇಲ್ಲಿಂದ ಚೀನಾದ ಮೇಲೆ ನಿಗಾ ಇಡಬಹುದಾಗಿದೆ.
ಈ ಆಧುನಿಕ ದೋಣಿಗಳನ್ನು ಗೋವಾದಲ್ಲಿ ನಿರ್ಮಿಸಲಾಗುವುದು ಮತ್ತು ಇವು ವಿಶೇಷ ಸೌಲಭ್ಯಗಳೊಂದಿಗೆ ವಿಶ್ವದ ಆಯ್ದ ವಿಹಾರ ನೌಕೆಗಳಲ್ಲಿ ಒಂದಾಗಲಿದೆ. ಪಗೋಂಗ್ ಸರೋವರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ಸೇನೆಯು ಖರೀದಿಸುತ್ತಿರುವ ದೋಣಿಗಳನ್ನು ಕಾರ್ಯತಂತ್ರದ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
FAU-G (Fearless and United Guards) ಆಟದ ನಿರೀಕ್ಷೆಗೆ ಶೀಘ್ರವೇ ತೆರೆಬೀಳಲಿದೆ. PUBG Mobile Indiaಗೆ ಪೈಪೋಟಿ ನೀಡಲು ಬರುತ್ತಿರುವ ಈ ಆಪ್ ನ ಮುಂಚಿತ ನೋಂದಣಿ ಕಾರ್ಯಕ್ರಮಕ್ಕೆ ಭಾರಿ ಪ್ರತಿಕ್ರಿಯೆ ಲಭಿಸಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಭದ್ರತೆಯನ್ನು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇದರ ಅಡಿಯಲ್ಲಿ ಸರ್ಕಾರ ವಿಶ್ವಾಸಾರ್ಹ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ದೇಶದಲ್ಲಿ ಟೆಲಿಕಾಂ ನೆಟ್ವರ್ಕ್ಗಳನ್ನು ನಿರ್ಮಿಸಲು ಈ ಕಂಪನಿಗಳಿಂದ ಉಪಕರಣಗಳನ್ನು ಖರೀದಿಸಲಾಗುವುದು.
ಕಳೆದ 8 ತಿಂಗಳುಗಳಿಂದ ಅಂದರೆ ಮಾರ್ಚ್ನಲ್ಲಿ ಲಾಕ್ಡೌನ್ ಜಾರಿಗೆ ಬಂದಾಗಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ನಿಧಾನವಾಗಿ ಟ್ರ್ಯಾಕ್ಗೆ ಮರಳಲು ಪ್ರಾರಂಭಿಸಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತವು ಎಂದಿಗೂ ಯಾವ ದೇಶದೊಂದಿಗೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಯಾರಾದರೂ ಭಾರತದ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರೆ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದೆ ಹಿಂದೆ ಸರಿಯುವುದಿಲ್ಲ.
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಸಮಸ್ಯೆಯಿಂದಾಗಿ ಎರಡೂ ದೇಶಗಳು ಲಡಾಖ್ನ ಎತ್ತರದ ಪ್ರದೇಶಗಳಲ್ಲಿ ಮಿಲಿಟರಿ ಉಪಕರಣಗಳನ್ನು ನಿಯೋಜಿಸಿವೆ. ಟಿ -90 ಭೀಷ್ಮಾ ಟ್ಯಾಂಕ್ ಮತ್ತು ಬಿಎಂಪಿ -2 ಕಾಲಾಳುಪಡೆ ಯುದ್ಧ ವಾಹನಗಳನ್ನು ಎಲ್ಎಸಿಯಲ್ಲಿರುವ ಚುಮರ್-ಡೆಮ್ಚೋಕ್ ಪ್ರದೇಶದಲ್ಲಿ ನಿಯೋಜಿಸುತ್ತಿವೆ.
ಚೀನಾ ತನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳುವಂತೆ ಕಾಣುತ್ತಿಲ್ಲ. ಮತ್ತೊಮ್ಮೆ ಚೀನಾದ ಸೈನ್ಯವು ಪಾಂಗೊಂಗ್ ಸರೋವರದ ದಕ್ಷಿಣ ತುದಿಗೆ ನುಸುಳಲು ಪ್ರಯತ್ನಿಸಿತು ಆದರೆ ಈ ಬಾರಿ ಅದು ಭಾರಿ ಸೋಲನ್ನು ಎದುರಿಸಬೇಕಾಯಿತು.
ಚೀನಾದ ಸೈನ್ಯದ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು ಭಾರತೀಯ ಸೈನ್ಯದ ವಿರುದ್ಧವೇ ಆರೋಪ ಮಾಡಿದ್ದು ಭಾರತೀಯ ಸೈನ್ಯವು ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದೆ ಎಂದರಲ್ಲದೆ ಭಾರತೀಯ ಸೇನೆ ಬೆದರಿಕೆ ಹಾಕಿರುವ ಬಗ್ಗೆಯೂ ಆರೋಪ ಮಾಡಿದ್ದಾರೆ.
ರಷ್ಯಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಆಯೋಜಿಸಿರುವ ಈ ಮಹತ್ವದ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಬುಧವಾರ ರಷ್ಯಾಕ್ಕೆ ತೆರಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.