Karnataka Assembly Election: ಯಾದಗಿರಿ ಜಿಲ್ಲೆಯು ಯಾದಗಿರಿ, ಶಹಪುರ, ಸುರಪುರ, ಗುರುಮಠಕಲ್ ಎಂಬ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಈ ಬಾರಿಯ ಎಲೆಕ್ಷನ್ ಅಖಾಡದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ಬಾರೀ ಪೈಪೋಟಿ ಏರ್ಪಟ್ಟಿದೆ.
ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಜಾರಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಕ್ಷಿಪ್ರಗತಿಯ ಅನುಷ್ಠಾನ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿರುವ ಜೆಡಿಎಸ್ ಪಕ್ಷವು, ಜನತೆಗೆ ಸಾಮಾಜಿಕ ಭದ್ರತೆ ನೀಡುವ ಹಿನ್ನೆಲೆಯಲ್ಲಿ ಅನೇಕ ಜನಾನುರಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ.
ಮತದಾರರ ಜವಾಬ್ದಾರಿಯಾದ ಮತದಾನ ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾಗಿದೆ. ಆದರೆ ಭಾರತ ಸರ್ಕಾರ ಮತದಾನವನ್ನು ಕಡ್ಡಾಯಗೊಳಿಸಿಲ್ಲದಿರುವುದರಿಂದ, ಅದು ಪ್ರತಿಯೊಬ್ಬ ಭಾರತೀಯ ನಾಗರಿಕನ ನೈತಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಭಾರತದಲ್ಲಿ ಮತದಾನ ಯಾಕೆ ಅಷ್ಟೊಂದು ಅಮೂಲ್ಯ?
ಬದಲಾವಣೆಯ ಮೂಲ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕರೆ ಮಾಡಿ ಆಮಿಷ ಒಡ್ಡಿದ್ರು. ನಾನು ಜೆಡಿಎಸ್ಗೆ ನಿಷ್ಠನಾಗಿರುವುದಾಗಿ ಸ್ಪಷ್ಟಪಡಿಸಿದ ಮಲ್ಲು. ಮಲ್ಲಿಕಾರ್ಜುನ ಸ್ವಾಮಿ @ಆಲೂರು ಮಲ್ಲು ಜೆಡಿಎಸ್ ಅಭ್ಯರ್ಥಿ. ಸಚಿವ ವಿ.ಸೋಮಣ್ಣಗೆ ಲಿಂಗಾಯತ ಮತ ಒಡೆಯುವ ಭೀತಿ. ಭೀತಿಯಲ್ಲಿ ಕಮಿಟ್ಮೆಂಟ್ಗೆ ಮುಂದಾಗಿ ತಗ್ಲಾಕೊಂಡ್ರಾ ಸೋಮಣ್ಣ..? ಸೋಮಣ್ಣ ಆಡಿಯೋ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ಪಷ್ಟನೆ. ಜೀ ಕನ್ನಡ ನ್ಯೂಸ್ಗೆ ಸ್ಪಷ್ಟನೆ ನೀಡಿದ JDS ಅಭ್ಯರ್ಥಿ ಮಲ್ಲಿಕಾರ್ಜುನ್.
H. D. Deve Gowda : ಕರುನಾಡ ಕುರುಕ್ಷೇತ್ರಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿಯಿವೆ. ಗೆಲ್ಲುವ ಹುಮ್ಮಸ್ಸಿನಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿರುವ ಕದನ ಕಲಿಗಳು, ಜನರ ಮನ ತಲುಪಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದಾರೆ.
Printing Press : ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸುಮ್ಮನೆ ಇರುವಂತೆ ಆಗಿದೆ. ಚುನಾವಣೆಯ ಆದಾಯದ ನಿರೀಕ್ಷೆಯಲ್ಲಿದ್ದ ಮಾಲೀಕರು ಕಂಗಾಲಾಗಿದ್ದಾರೆ. ಇದು ಪ್ರಿಟಿಂಗ್ ಪ್ರೆಸ್ ಗಳ ಸದ್ಯದ ಚಿತ್ರಣ. ಎಲೆಕ್ಷನ್ ಟೈಮ್ನಲ್ಲಿ ಪಂಪ್ಲೆಟ್ ಗಳಿಗೆ ಡಿಮ್ಯಾಂಡೇ ಇಲ್ಲದಂತಾಗಿದ್ದು,ಹಿಂದೆಲ್ಲ ಲಕ್ಷದ ಲೆಕ್ಕದಲ್ಲಿ ಪ್ರಿಟಿಂಗ್ ಮಾಡುತ್ತಿದ್ದ ಮಾಲೀಕರು ಈಗ ಸಾವಿರ ಆರ್ಡರ್ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ಡಿಜಿಟಲ್ ಮೀಡಿಯಾ.
ಸಕ್ಕರೆನಾಡು ಮಂಡ್ಯ ಕ್ಷೇತ್ರದಲ್ಲಿ ರಂಗೇರಿದ ರಾಜಕೀಯ ಅಖಾಡ. ಇಂದು ನಿರ್ಧಾರವಾಗಲಿದೆ ಜೆಡಿಎಸ್ ಬಂಡಾಯದ ಕ್ಲೈಮ್ಯಾಕ್ಸ್. ಶಾಸಕ ಶ್ರೀನಿವಾಸ್ಗೆ ಟಿಕೆಟ್ ಕೈ ತಪ್ಪಿದ್ದರಿಂದ ಮೂವರ ಬಂಡಾಯ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಮೂವರು ಮುಖಂಡರ ಬಂಡಾಯ. ವಿಜಯಾನಂದ, ಯೋಗೇಶ್, ಮಹಾಲಿಂಗೇಗೌಡ ಬಂಡಾಯವಾಗಿ ನಾಮಪತ್ರ ಸಲ್ಲಿಕೆ.
MP Kumaraswamy: ವಿವಿಧ ಕಾರಣಗಳಿಂದ ಸದಾ ಸುದ್ದಿಯಾಗುತ್ತಿದ್ದ ಎಂ.ಪಿ.ಕುಮಾರಸ್ವಾಮಿ ಇದೀಗ ಚುನಾವಣೆ ಸಂದರ್ಭದಲ್ಲಿ ತನ್ನ ಮೇಲೆ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರವಾಗದಂತೆ ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ
ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಚುನಾವಣೆ ಗೆಲುವಿಗೆ ಸಿದ್ದರಾಮಯ್ಯ ಟೆಂಪಲ್ ರನ್. ನಾಡ ಅಧಿ ದೇವತೆಯ ದರ್ಶನ ಪಡೆದ ಸಿದ್ದರಾಮಯ್ಯ. ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸಿದ ಮಾಜಿ ಸಿಎಂ. ಪುತ್ರ ಯತೀಂದ್ರ, ಜಮೀರ್ ಅಹ್ಮದ್ ಖಾನ್ ಸಾಥ್. ಸಿದ್ದುಗೆ ಬೃಹತ್ ಸೇಬಿನ ಹಾರ ಹಾಕಿದ ಕಾರ್ಯಕರ್ತರು. ಅಮಾನಿಗಳತ್ತ ಕೈ ಬೀಸಿ ಹೊರಟ ಸಿದ್ದರಾಮಯ್ಯ. ಉತ್ತನಹಳ್ಳಿ ಮಾರಮ್ಮನ ದೇವಸ್ಥಾನದತ್ತ ತೆರಳಿದ ಸಿದ್ದು.
ಕೊಪ್ಪಳ ಗಂಗಾವತಿಯಲ್ಲಿ ಚುನಾವಣೆ ರಾಜಕೀಯ ರಂಗೇರಿದೆ.. ಜೆಡಿಎಸ್ ಅಭ್ಯರ್ಥಿ ಚನ್ನಕೇಶವರಿಂದ ವಿಭಿನ್ನ ರೀತಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ್ರು.. ಎತ್ತಿನ ಬಂಡಿಯಲ್ಲಿ ತೆನೆ ಹೊತ್ತ ಮಹಿಳೆಯನ್ನು ನಿಲ್ಲಿಸಿ ರೋಡ್ ಶೋ ನಡೆಸಿದ್ರು.. ಬಳಿಕ ನಾಮಪತ್ರ ಸಲ್ಲಿಸಿದ್ರು.
ಜಿಲ್ಲೆಯಲ್ಲಿನ ತೇರದಾಳ ಕ್ಷೇತ್ರದಲ್ಲಿ ಈಗ ಚುನಾವಣಾ ರಂಗು ಕಾವೇರಿದೆ, ಹೌದು ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಅತೃಪ್ತಗೊಂಡಿರುವವವರು ಈಗ ಸ್ವಾಮಿಜೀಯವರನ್ನು ಚುನಾವಣಾ ಕಣಕ್ಕೆ ನಿಲ್ಲಿಸಿದ್ದಾರೆ.
ಗಿರಿನಾಡು ಯಾದಗಿರಿಯಲ್ಲಿ ಬಿಸಲಿನ ತಾಪ ಹೆಚ್ಚಾದ್ದಂತೆ,ಚುನಾವಣಾ ರಣಕಣದ ಕಾವು ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಭರಾಟೆ ಕೂಡ ಜೋರಾಗಿದೆ.ಇಲ್ಲಿಯವರೆಗೂ ಯಾದಗಿರಿ ಜಿಲ್ಲೆಯಲ್ಲಿ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಾಗಿವೆ ಚುನಾವಣೆ ಕದನದಲ್ಲಿ ಹೋರಾಟ ಅಭ್ಯರ್ಥಿಗಳು ಅಗ್ನಿ ಪರೀಕ್ಷೆ ಇಳಿದಿದ್ದಾರೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.