ಬಿಜೆಪಿ ಕೋಟಿ ಕೋಟಿ ಹಣವನ್ನು ಸಾಗಿಸುತ್ತಿದೆ, ನಾನು ಮೋದಿ, ಬಿಎಸ್ ವೈ, ಬಿವೈ ವಿಜಯೇಂದ್ರ, ಆರ್ ಅಶೋಕ್ ಅವರನ್ನ ಪ್ರಶ್ನೆ ಮಾಡ್ತೀನಿ ವಿಥ್ ಡ್ರಾ ಮಾಡಿದ ಹಣವನ್ನ 10 ಕಿಮೀ ಸಾಗಿಸಲು ಒಂದು ತಿಂಗಳು ಬೇಕಾಗಿತ್ತಾ..? ಎಂದು ರಂದೀಪ್ ಸುರ್ಜೇವಾಲ ಕಿಡಿಕಾರಿದರು.
ದೇಶದಲ್ಲಿ ಕನಿಷ್ಠ ವೇತನ ವ್ಯವಸ್ಥೆಯನ್ನು (minimum wage system) ಕೊನೆಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಬದಲಾಗಿ ಮುಂದಿನ ವರ್ಷದಿಂದ ದೇಶದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿದೆ.
Lakhapati Didi Scheme: ಕೇಂದ್ರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವು ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಂಚಿವೆ ನಿರ್ಮಲಾ ಸೀತಾರಾಮನ್ 'ಲಖಪತಿ ದೀದಿ ಯೋಜನೆಯ' ಕುರಿತು ಪ್ರಸ್ತಾಪಿಸಿದ್ದಾರೆ (Business News In Kannada)
Gratuity: ಕೇಂದ್ರ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು ಹೆಚ್ಚಿಸಿದೆ.
HRA Hike: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗುರುವಾರ ಕೇಂದ್ರ ಸರ್ಕಾರಿ ನೌಕರರಿಗೆ ಒಂದರ ಮೇಲೊಂದರಂತೆ ಗುಡ್ ನ್ಯೂಸ್ ನೀಡಿದೆ. ಹೌದು ತುಟ್ಟಿಭತ್ಯೆ ಹೆಚ್ಚಳದ ಬಳಿಕ ಸರ್ಕಾರ ಮನೆ ಬಾಡಿಗೆ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವನ್ನು ಘೋಷಿಸಿದೆ. (Business News In Kananda)
Salary Hike: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ದೇಶಾದ್ಯಂತದ 50 ಲಕ್ಷ ಸರ್ಕಾರಿ ನೌಕರರಿಗೆ ಮತ್ತು 62 ಲಕ್ಷ ಪಿಂಚಣಿದಾರರಿಗೆ ಮೋದಿ ಸರ್ಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಹೌದು, ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಕೇಂದ್ರ ಸರ್ಕಾರಿ (Modi Government) ನೌಕರರ ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಸರ್ಕಾರಿ ನೌಕರರ ಡಿಎ-ಡಿಆರ್ ನಲ್ಲಿ ಶೇ.4ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಲಾಗಿದೆ (Business News In Kannada)
Lok Sabha Election 2024 ಸಮೀಪಿಸುತ್ತಿದೆ. ಅದಕ್ಕೂ ಮುನ್ನ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರಿಗೆ ಭಾರಿ ಗುಡ್ ನ್ಯೂಸ್ ನೀಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಹೌದು ದೇಶಾದ್ಯಂತದ 50 ಲಕ್ಷ ನೌಕರರು ಹಾಗೂ 62 ಲಕ್ಷ ಪಿಂಚಣಿದಾರರಿಗೆ ವೇತನ ಹೆಚ್ಚಳದ (Salary Hike) ಬಗ್ಗೆ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ (Business News In Kannada)
Cheapest Masoor Dal: ಅಗ್ಗದ ಅಕ್ಕಿ ಮತ್ತು ಹಿಟ್ಟು ಮಾರಾಟದ ಬಳಿಕ ಇದೀಗ ಕೇಂದ್ರ ಸರ್ಕಾರ ಅಗ್ಗದ ದರದಲ್ಲಿ ಭಾರತ್ ಬ್ರಾಂಡ್ ಅಡಿ ಮಸೂರಿ ಬೇಳೆ ಮಾರಾಟ ನಡೆಸಲು ನಿರ್ಧರಿಸಿದೆ. NAFED ಮತ್ತು NCCF ಮೂಲಕ ಈ ಮಾರಾಟ ಮಾಡಲಾಗುವುದು. ಕೇಂದ್ರೀಯ ಭಾಂಡಾರ ಮತ್ತು ಸಫಲ್ನ ಚಿಲ್ಲರೆ ಅಂಗಡಿಗಳ ಮೂಲಕ ಬೇಳೆಕಾಳುಗಳನ್ನು ಸರ್ಕಾರ ಮಾರಾಟ ಮಾಡುವ ನಿರೀಕ್ಷೆಯಿದೆ. Business News In Kannada
PM Surya Ghar Yojana 2024: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆಗೆ (ಪ್ರಧಾನ ಮಂತ್ರಿ ಸೂರ್ಯ ಮನೆ ಉಚಿತ ವಿದ್ಯುತ್ ಯೋಜನೆ ) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಸೋಲಾರ್ ಪ್ಲಾಂಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಸರಕಾರ ಪ್ರತಿ ಕುಟುಂಬಕ್ಕೂ ಸಹಾಯಧನ ನೀಡಲಿದೆ. (Business News In Kannada)
Bharat Chawal Cheapest Rice: ಅತಿ ಶೀಘ್ರದಲ್ಲೇ 'ಭಾರತ್ ಚಾವಲ್' ಸರ್ಕಾರದಿಂದ ರಿಯಾಯಿತಿ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಜನರಿಗೆ ಕೇವಲ 25 ರೂ.ಗೆ ಒಂದು ಕೆಜಿ ಅಕ್ಕಿ ಸಿಗಲಿದೆ. ಆಹಾರ ಹಣದುಬ್ಬರ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗುವುದು ಎಂದು ನಾಫೆಡ್ ಹೇಳಿದೆ (Business News In Kannada).
Bharat Brand Franchise: ಈ ಅಂಗಡಿಗಳ ಮೂಲಕ ನೀವು ಬೇಳೆಕಾಳುಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಈ ಮಳಿಗೆಗಳಲ್ಲಿ ನೀವು ಬೇಳೆಕಾಳುಗಳು, ಹಿಟ್ಟು, ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಮನೆಯ ಪಡಿತರಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಪಡೆಯಬಹುದು. (Business News In Kannada)
7th pay commission, DA Hike Updates:ಜನವರಿ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡಾ 50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುವುದು. ಡಿಸೆಂಬರ್ AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುವುದು.
Union Budget 2024: ಪ್ರಸ್ತುತ, ಯೋಜನೆಯಡಿಯಲ್ಲಿ, ಆಸ್ಪತ್ರೆಗೆ ದಾಖಲಾದಾಗ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಈಗ ಇರುವ ವಿಮಾ ರಕ್ಷಣೆಯನ್ನು ಶೇ.50ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. (Business News In Kannada / Budget 2024 News In Kannada)
ಮುಖ್ಯಮಂತ್ರಿಗಳು ಪ್ರಧಾನಿಯನ್ನು ಖುದ್ದು ಭೇಟಿಯಾಗಿ ಬರ ಪರಿಹಾರ ನೀಡುವಂತೆ ಕೇಳಿದರೂ ನಯಾಪೈಸೆ ಬಿಡುಗಡೆಯಾಗಿಲ್ಲ, GST ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ, ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲವೆಂದು ಕಾಂಗ್ರೆಸ್ ಟೀಕಿಸಿದೆ.
Union Budget 2024: ಕೇಂದ್ರ ಸರ್ಕಾರವು 1 ಫೆಬ್ರವರಿ 2024 ರ ಬಜೆಟ್ನಲ್ಲಿ ಮಹಿಳೆಯರಿಗಾಗಿ ಮಧ್ಯ ಪ್ರದೇಶ ಸರ್ಕಾರ ನಡೆಸುತ್ತಿರುವ 'ಲಾಡ್ಲಿ ಬೆಹೇನ್' ಯೋಜನೆಯಂತಹ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಬಜೆಟ್ ಮೂಲಕ ಮಹಿಳೆಯರಿಗೆ ಈ ದೊಡ್ಡ ಉಡುಗೊರೆ ನೀಡಬಹುದು ಎಂದು ಮಾಧ್ಯಮ ಮೂಲಗಳು ವರದಿ ಮಾಡಿವೆ. (Business News In Kannada)
Government Scheme 2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 8.2% ದರದಲ್ಲಿ ಬಡ್ಡಿಯನ್ನು ಗಳಿಸಬಹುದು. ₹ 48,000 ಹೂಡಿಕೆಯಿಂದ 14 ಲಕ್ಷ ರೂ.ಗಳ ಬಡ್ಡಿಯನ್ನು ಹೇಗೆ ಗಳಿಸಬಹುದು ಎಂಬುದನ್ನು ಸಂಪೂರ್ಣ ಲೆಕ್ಕಾಚಾರದೊಂದಿಗೆ ತಿಳಿದುಕೊಳ್ಳೋಣ ಬನ್ನಿ. (Business News In Kannada)
SSY Update: ಹೊಸ ವರ್ಷದ ಹೊಸ್ತಿಲಲ್ಲಿ ಜನತೆಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವು ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಹೆಚ್ಚಿಸಿದೆ. (Business News In Kannada)
Gold Purchase In Cheapeast Rate: ಸಾವರಿನ್ ಗೋಲ್ಡ್ ಬಾಂಡ್ 2023-24 ಸರಣಿ-3 ಈ ತಿಂಗಳು 18-22 ಡಿಸೆಂಬರ್ನಲ್ಲಿ ತೆರೆಯುತ್ತದೆ. ಸರಣಿ-4 ರ ದಿನಾಂಕವನ್ನು ಫೆಬ್ರವರಿ 12-16 ಕ್ಕೆ ನಿಗದಿಪಡಿಸಲಾಗಿದೆ. (Business News In Kannada)
Aadhaar Card Update: ಆಧಾರ್ಗೆ ಅರ್ಹರಾಗಿರುವ ವ್ಯಕ್ತಿಯು ಫಿಂಗರ್ ಪ್ರಿಂಟ್ ಗಳಿಲ್ಲದಿದ್ದರೂ ಲಭ್ಯವಿಲ್ಲದಿದ್ದಲ್ಲಿ 'ಐರಿಸ್ ಸ್ಕ್ಯಾನ್' ಬಳಸಿ ನೋಂದಾಯಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.(Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.