Sarfaraz Khan on selectors: 25ರ ಹರೆಯದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಗೆ ಈ ಬಾರಿಯೂ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವಕಾಶ ಸಿಕ್ಕಿಲ್ಲ. ಅವರು ಆಯ್ಕೆಗಾರರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Ind Vs WI Series: ವೆಸ್ಟ್ ಇಂಡೀಸ್ ಸರಣಿಗಾಗಿ ಭಾರತ ತಂಡದ ವೇಳಾಪಟ್ಟಿ ಮುನ್ನೆಲೆಗೆ ಬಂದಿದೆ. ಟೀಂ ಇಂಡಿಯಾ ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಆಡಬೇಕಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ತಂಡವು ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (WTC Final-2023) ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಅನುಭವಿಸಿದೆ.
ಚಟ್ಟೋಗ್ರಾಮ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಎಕದಿನದ ಪಂದ್ಯದಲ್ಲಿ ಇಶಾನ್ ಕಿಶನ್ ಕ್ರಿಸ್ ಗೇಲ್ ಅವರ ಏಕದಿನದ ಪಂದ್ಯಗಳಲ್ಲಿ ವೇಗದ ದ್ವಿಶತಕದ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಗಾಯಗೊಂಡ ನಂತರ ಸರಣಿಯ ಕೊನೆಯ ಪಂದ್ಯಕ್ಕೆ ಗೈರಾಗಿದ್ದ ನಾಯಕ ರೋಹಿತ್ ಶರ್ಮಾ ಸ್ಥಾನದಲ್ಲಿ ಬಡ್ತಿ ಪಡೆದ ಇಶಾನ್ ಕಿಶನ್ ಸಿಕ್ಕಿರುವ ಆರಂಭಿಕ ಸ್ಥಾನವನ್ನು ಸರಿಯಾಗಿ ಬಳಸಿಕೊಂಡರು. ಅವರು ಕೇವಲ 126 ಎಸೆತಗಳಲ್ಲಿ 23 ಬೌಂಡರಿ ಮತ್ತು 9 ಸಿಕ್ಸರ್ಗಳನ್ನು ಸಿಡಿಸುವ ಮೂಲಕ 200 ರನ್ಗಳ ಗಡಿಯನ್ನು ತಲುಪಿದರು.ಅವರು ಕೇವಲ 85 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.
ಇನ್ನಿಂಗ್ಸ್ನ ಕೆಲ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖ್ಯಾತ ಸಂಖ್ಯಾಶಾಸ್ತ್ರಜ್ಞ ಮೋಹನ್ದಾಸ್ ಮೆನನ್ ಅವರು ಟ್ವೀಟ್ನಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. "ವೆಸ್ಟ್ ಇಂಡಿಯನ್ ರಹಕೀಮ್ ಕಾರ್ನ್ವಾಲ್, ಅಟ್ಲಾಂಟಾ ಫೈರ್ಗಾಗಿ ಆಡುವಾಗ, ಅಟ್ಲಾಂಟಾ ಓಪನ್ ಎಂದು ಕರೆಯಲ್ಪಡುವ ಅಮೇರಿಕನ್ T20 ಸ್ಪರ್ಧೆಯಲ್ಲಿ 22 ಸಿಕ್ಸರ್ಗಳು ಮತ್ತು 17 ಬೌಂಡರಿಗಳನ್ನು ಒಳಗೊಂಡಂತೆ ಕೇವಲ 77 ಎಸೆತಗಳಲ್ಲಿ (SR 266.23) ಅಜೇಯ 205 ರನ್ ಸಿಡಿಸಿದರು" ಎಂದು ಬರೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದ ನಂತರ ಅವರು ತಮ್ಮದೇ ಸ್ನೇಹಿತನಿಗೆ ಟೆನ್ಶನ್ ಹೆಚ್ಚಿಸಿದ್ದಾರೆ.
ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೊತೆಯಾಟ ತಂಡಕ್ಕೆ ಭದ್ರಬುನಾದಿಯನ್ನು ಹಾಕಿತ್ತು. ಆ ಬಳಿಕ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಸಹ ಅದ್ಭುತ ಪ್ರದರ್ಶನ ನೀಡಿದ್ದರು. ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಧವನ್ ಲೀಡರ್ಶಿಪ್ನಲ್ಲಿ ಟೀಂ ಇಂಡಿಯಾದ ಆಟಗಾರನ ಅದೃಷ್ಟ ಖುಲಾಯಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಆಟ ಪ್ರದರ್ಶಿಸಿದರು. ಆಕ್ರಮಣಕಾರಿ ಆಟ ಪ್ರದರ್ಶಿಸಿ 54 ರನ್ ಭಾರಿಸಿದ ಅವರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಯುವ ಆಟಗಾರರ ಪ್ರಾಬಲ್ಯ ನಿರಂತರವಾಗಿ ಕಂಡುಬರುತ್ತಿದೆ. ಯುವ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ಮೂವರು ದೊಡ್ಡ ಆಟಗಾರರಿಗೆ ತಂಡದಲ್ಲಿ ಬಹಳ ದಿನಗಳಿಂದ ಅವಕಾಶವೇ ಸಿಗುತ್ತಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಗುರುವಾರ ತಂಡವನ್ನು ಹೆಸರಿಸಿದೆ.ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.ಇದೆ ವೇಳೆ ವಿರಾಟ್ ಕೊಹ್ಲಿ,ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.ಇನ್ನೊಂದೆಡೆಗೆ ಕೆ.ಎಲ್.ರಾಹುಲ್, ಆರ್.ಆಶ್ವಿನ್ ಅವರು ಮರಳಿ ತಂಡಕ್ಕೆ ವಾಪಸ್ಸಾಗಿದ್ದಾರೆ.
ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಮತ್ತು BCCI ಜಂಟಿಯಾಗಿ ಬುಧವಾರ ವೆಸ್ಟ್ ಇಂಡೀಸ್ಗೆ ಭಾರತದ ಪ್ರವಾಸವನ್ನು ಪ್ರಕಟಿಸಿವೆ. ‘ಮೆನ್ ಇನ್ ಬ್ಲೂ’ ಜುಲೈ 22 ಮತ್ತು ಆಗಸ್ಟ್ 7ರ ನಡುವೆ 3 ಏಕದಿನ ಪಂದ್ಯ ಮತ್ತು 5 ಟಿ-20 ಪಂದ್ಯಗಳನ್ನು ಆಡಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.