ನವದೆಹಲಿ : ತಂತ್ರಜ್ಞಾನ ಪ್ರಭಾವದಿಂದ ಹಣ ಪಾವತಿ ವಿಧಾನವೂ ಬದಲಾಗಿದೆ. ಪ್ರಸ್ತುತ ದೇಶದಲ್ಲಿ  ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಆದ್ರೆ, ಡಿಜಿಟಲ್ ಪಾವತಿಗಳ ಹೆಚ್ಚಳದೊಂದಿಗೆ ಆನ್ ಲೈನ್ ವಂಚಕರ ಹೊಸ ಸಮಸ್ಯೆಯೂ ಶುರುವಾಗಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ ಬಂದ ಕೋವಿಡ್-19 ನಂತ್ರ, ಅನೇಕ ಜನರು ಫೋರ್ಜರಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ, ಏರ್ ಟೆಲ್ ಸಿಇಒ ಗೋಪಾಲ್ ವಿಠಲ್(Gopal Vittal) ಸೈಬರ್ ಫೋರ್ಜರಿಯನ್ನ ತಪ್ಪಿಸಲು ಟೆಲಿಕಾಂ ಆಪರೇಟರ್ʼಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇಂದಿನ ಸಮಯದಲ್ಲಿ ಆನ್ ಲೈನ್ ಹ್ಯಾಕಿಂಗ್ ಬಹಳಷ್ಟು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಒಟಿಪಿ ಹಗರಣವನ್ನ ತಪ್ಪಿಸಬೇಕು. ಅದೇ ಸಮಯದಲ್ಲಿ ಅನೇಕ ಭದ್ರತಾ ತಜ್ಞರು ಬಳಕೆದಾರರ ಡೇಟಾವನ್ನ ಅನೇಕ ನಕಲಿ ಅಪ್ಲಿಕೇಶನ್ʼಗಳಿಂದ ಸೋರಿಕೆ ಮಾಡಲಾಗ್ತಿದೆ ಎಂದು ಎಚ್ಚರಿಸಿದ್ದಾರೆ.


ಇದನ್ನೂ ಓದಿ : Gold-Silver Rate : ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ


ಬಳಕೆದಾರರು ಕೆವೈಸಿ ಪರಿಶೀಲನೆಗೆ ಸಂಬಂಧಿಸಿದ ಅನೇಕ ಸಂದೇಶಗಳನ್ನ ಪಡೆಯುತ್ತಿದ್ದಾರೆ. ಇದರಲ್ಲಿ ಕೆವೈಸಿ(KYC) ಪೂರ್ಣಗೊಳ್ಳದಿದ್ರೆ ಅವರ ಸಂಖ್ಯೆಯನ್ನ 24 ಗಂಟೆಗಳ ನಂತ್ರ ನಿರ್ಬಂಧಿಸಲಾಗುವುದು ಎಂದು ಅವರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ವೊಡಾಫೋನ್ ಐಡಿಯಾ (Vi), ಏರ್ ಟೆಲ್ ಮತ್ತು ಜಿಯೋ ಗ್ರಾಹಕರು ದೇಶದಲ್ಲಿ ಹೆಚ್ಚಾಗಿ ಅಂತಹ SMS ಗಳನ್ನ ಪಡೆಯುತ್ತಿದ್ದಾರೆ. ಇದರಲ್ಲಿ ಬಳಕೆದಾರರು ಗ್ರಾಹಕ ಆರೈಕೆಗೆ ಕರೆ ಮಾಡಬೇಕು ಎಂದು ಹೇಳಲಾಗುತ್ತೆ. ಅದ್ರಂತೆ, ಅನೇಕ ಬಳಕೆದಾರರು ಈ ವಂಚನೆಯನ್ನ ಟ್ವಿಟರ್ʼನಲ್ಲಿ ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ : Indian Currency: ನಿಮ್ಮ ಬಳಿ ಈ ರೀತಿಯ 1 ರೂಪಾಯಿ ನಾಣ್ಯವಿದ್ದರೆ, ಮನೆಯಲ್ಲೇ ಕುಳಿತು 2 ಲಕ್ಷ ರೂ. ಸಂಪಾದಿಸಿ


ವಂಚನೆಯನ್ನ ಪತ್ತೆ ಹಚ್ಚುವುದು ಹೇಗೆ?


ನೀವು ವಂಚನೆಯನ್ನ ಪತ್ತೆಹಚ್ಚಲು ಬಯಸಿದ್ರೆ, ಅದಕ್ಕಾಗಿ ನೀವು ಆ ಸಂದೇಶಗಳಲ್ಲಿ ಇರುವ ಕಾಗುಣಿತವನ್ನು ಪರಿಶೀಲಿಸಬೇಕು. ಹೆಚ್ಚಿನ ನಕಲಿ ಸಂದೇಶಗಳು(Fake SMS) ಅಂತಹ ದೋಷಗಳಿಂದ ತುಂಬಿರುತ್ತವೆ ಮತ್ತು ಜೊತೆಗೆ ಅವು ಅನೇಕ ತಪ್ಪುಗಳನ್ನ ಒಳಗೊಂಡಿರುತ್ತವೆ. ಆದ್ರೆ, ಎಚ್ಚರೀಕೆಯಿಂದ ಪರಿಶೀಲಿಸಿದ್ರೆ ಅಂತಹ ತಪ್ಪುಗಳನ್ನ ಗುರುತಿಸುವುದು ಸುಲಭ. ಆದ್ರೆ, ಅದರ ಕಡೆ ಗಮನ ಕೊಡದಿದ್ರೆ ನೀವು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.


ಇದನ್ನೂ ಓದಿ : Petrol-Diesel Price : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ


ಮೊದಲನೆಯದಾಗಿ, ಯಾವುದೇ ಟೆಲಿಕಾಂ ಕಂಪನಿ(Telecom Company)ಯು ನಿಮ್ಮ ಕೆವೈಸಿ ಮಾಹಿತಿಯನ್ನ ಕೇಳಿದ್ರೆ, ಅದು ತನ್ನ ಅಧಿಕೃತ ವಿಧಾನಗಳ ಮೂಲಕ ಅದನ್ನ ಮಾಡುತ್ತೆ. ಯಾವುದೇ ಯಾದೃಚ್ಛಿಕ ಸಂಖ್ಯೆಯಿಂದ ನೀವು ಕರೆ ಪಡೆಯುವುದಿಲ್ಲ ಎಂಬುದನ್ನ ನೀವು ಗಮನಿಸಬೇಕು. ಯಾವುದೇ ಸಂದೇಶ ಅಥವಾ ಕರೆ ಮೂಲಕ ಅಥವಾ ಸಂದೇಶದಲ್ಲಿ ಲಿಂಕ್ ಕಳುಹಿಸಿದ್ರೆ, ನಿಮಗೆ ಕೆಲವು ಮಾಹಿತಿಯನ್ನ ಕೇಳಿದ್ರೆ ನಂತ್ರ ಆ ಮೇಲೆ ಕ್ಲಿಕ್ ಮಾಡಬೇಡಿ.


ಇದನ್ನೂ ಓದಿ : PMJJBY: ನಿಮ್ಮ ಬ್ಯಾಂಕ್ ಖಾತೆಯಿಂದ 330 ರೂ. ಕಡಿತಗೊಂಡಿದೆಯೇ? ಚಿಂತಿಸಬೇಡಿ, ಅದಕ್ಕೆ ಕಾರಣವೇನೆಂದು ತಿಳಿಯಿರಿ


ಇಂತಹ ಸಂದೇಶಗಳ ಬಗ್ಗೆ ಎಚ್ಚರ ವಹಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(Telecom Regulatory Authority of India) ಜನರಿಗೆ ಎಚ್ಚರಿಕೆ ನೀಡಿದೆ. ಯಾವುದೇ ಬಳಕೆದಾರರು ಈ ರೀತಿಯ ಸಂದೇಶವನ್ನ ಪಡೆದ್ರೆ, ನಿಮಗೆ ಅದರ ಮೇಲೆ ಅನುಮಾನಗಳಿದ್ರೆ, ಯಾವುದೇ ಕಾರಣಕ್ಕೂ ಅದರ ಮೇಲೆ ಕ್ಲಿಕ್ ಮಾಡಬೇಡಿ.


ಇದನ್ನೂ ಓದಿ : Jio ಗ್ರಾಹಕರಿಗೆ ಸಿಹಿ ಸುದ್ದಿ : ಹೊಸ ರೀಚಾರ್ಜ್ ಸೇವೆ ಆರಂಭಿಸಿದ ಜಿಯೋ ಕಂಪನಿ


ಈ ರೀತಿಯ ಲಿಂಕ್ ಗಳನ್ನ ನಿಮ್ಮ ವೈಯಕ್ತಿಕ ಡೇಟಾ ಮತ್ತು ನಿಮ್ಮ ಕಷ್ಟಪಟ್ಟು ಗಳಿಸಿದ ಹಣ(Money)ವನ್ನ ಖದೀಯಲು ವಿನ್ಯಾಸಗೊಳಿಸಲಾಗಿರುತ್ತೆ. ಹಾಗಾಗಿ ಇಂತಹ ವೇಳೆಯಲ್ಲಿ ನೀವು ಜಾಗರೂಕರಾಗಿರಿ. ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ಸೈಬರ್ ಪೊಲೀಸರನ್ನ ಅಥವಾ ಆ ನೆಟ್ ವರ್ಕ್ ಪೂರೈಕೆದಾರರ ಕಂಪನಿಯನ್ನ ಸಂಪರ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.