Free Ration Policy : ಸರ್ಕಾರದ ಉಚಿತ ಪಡಿತರ ಯೋಜನೆಯಡಿ ರೇಷನ್ ಪಡೆಯುವವರಿಗೆ ಇಲ್ಲಿದೆ ಬಿಗ್ ಅಪ್ಡೇಟ್. ಇದೀಗ ಪಡಿತರ ಪಡೆಯುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸದ್ಯ ಕಾರ್ಡ್ ದಾರರು ಸಮಯ ಸಿಕ್ಕಾಗಲೆಲ್ಲ ಅಂಗಡಿಗೆ ತೆರಳಿ ಪಡಿತರ ಪಡೆಯುವುದು ನಿಯಮವಾಗಿದೆ. ಆದರೆ, ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಪಡಿತರ ವಿತರಣೆ ವಿಧಾನ ಮತ್ತು ಸಮಯವನ್ನು ಸರ್ಕಾರ ಬದಲಾಯಿಸಿದೆ.


COMMERCIAL BREAK
SCROLL TO CONTINUE READING

ಸರ್ಕಾರದ ಆದೇಶದ ಮೇರೆಗೆ ‘ಮೊದಲು ಬಂದವರಿಗೆ ಆದ್ಯತೆ’ ಎಂಬ ಆಧಾರದ ಮೇಲೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಅಂದರೆ ಮೊದಲು ಬಂದವರಿಗೆ ಅಕ್ಕಿ, ಗೋಧಿ ಜತೆಗೆ ರಾಗಿಯನ್ನೂ ಉಚಿತವಾಗಿ ನೀಡಲಾಗುವುದು. ವಿಳಂಬವಾದಲ್ಲಿ ಕಾರ್ಡುದಾರರಿಗೆ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ನೀಡಲಾಗುವುದು. PHH ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉಚಿತ ಅಥವಾ ಅಗ್ಗದ  ದರದಲ್ಲಿ ಪಡಿತರವನ್ನು ನೀಡಲಾಗುತ್ತದೆ.


ಇದನ್ನೂ ಓದಿ : ಕಡಿಮೆ ಶುಲ್ಕದಲ್ಲಿ ಕೈ ತುಂಬಾ ವೇತನ ಪಡೆಯುವ ಅವಕಾಶ ನೀಡುವ ಕೋರ್ಸ್ ಗಳು ಇವು !


ಏಪ್ರಿಲ್ 13ರಿಂದ 24ರವರೆಗೆ ಪಡಿತರ ವಿತರಣೆ  :
ಪ್ರಸ್ತುತ ಕಾರ್ಡ್‌ದಾರರಿಗೆ ಸರ್ಕಾರದಿಂದ ಉಚಿತ ಪಡಿತರ ವಿತರಿಸಲಾಗುತ್ತಿದೆ. ಏಪ್ರಿಲ್‌ ತಿಂಗಳ ಪಡಿತರ ವಿತರಣೆ ಕೂಡಾ ಇದೀಗ ಆರಂಭವಾಗಿದೆ. ಪಡಿತರ ವಿತರಣೆಯ ಹೊಸ ನಿಯಮದಡಿ ಏಪ್ರಿಲ್ 13 ರಿಂದ 24 ರವರೆಗೆ ಪಡಿತರ ವಿತರಣೆ ನಡೆಯಲಿದೆ. ‘ಮೊದಲು ಬಂದವರಿಗೆ ಆದ್ಯತೆ’ ಎಂಬ ಆಧಾರದ ಮೇಲೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗುವುದು. ಇದರಲ್ಲಿ ಅಂತ್ಯೋದಯ ಕಾರ್ಡ್ ದಾರರಿಗೆ 14 ಕೆಜಿ ಗೋಧಿ, 20 ಕೆಜಿ ಅಕ್ಕಿ ಮತ್ತು ಒಂದು ಕೆಜಿ ಬಾಜ್ರಾ ನೀಡಲಾಗುತ್ತದೆ. PHH ಜನರಿಗೆ 2 ಕೆಜಿ ಗೋಧಿ, 2 ಕೆಜಿ ಅಕ್ಕಿ ಮತ್ತು 1 ಕೆಜಿ ಬಾಜ್ರಾ ಸಿಗುತ್ತದೆ. ಬಾಜ್ರಾ ಮುಗಿದ ನಂತರ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಲಾಗುವುದು.


ಸರ್ಕಾರದಿಂದ ಪಡಿತರ ವಿತರಣೆಯ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಈಗ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಪಡಿತರ ಅಂಗಡಿ ತೆರೆದಿರಬೇಕು. ಇದರಿಂದ ಎಲ್ಲರೂ ಆರಾಮವಾಗಿ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೇ ಮೊದಲು ಬಂದವರಿಗೆ ಸರಕಾರದಿಂದ ರಾಗಿ ಸಿಗುವ ಅವಕಾಶವೂ ಇದೆ. ಇನ್ನು ಮುಂದೆ ಪ್ರತಿ ತಿಂಗಳು 13ರಿಂದ 24ರವರೆಗೆ ಪಡಿತರ ವಿತರಿಸಲಾಗುವುದು. ಈ ಹೊಸ ನಿಯಮವನ್ನು ಉತ್ತರ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ. 


ಇದನ್ನೂ ಓದಿ : 8ನೇ ವೇತನ ಆಯೋಗದ ಕುರಿತು ಕೇಂದ್ರ ನೌಕರರಿಗೆ ಗುಡ್ ನ್ಯೂಸ್; ಮೋದಿ ಸರ್ಕಾರದಿಂದ ಈ ನಿರ್ಧಾರ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.