ಬೆಂಗಳೂರು: ಕಾರು ಕದ್ದು ಪರಾರಿಯಾಗಿದ್ದ ದಂಪತಿಯನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ವೇದಾವತಿ ಹಾಗೂ ಮಂಜ@ಮೇಕೆ ಮಂಜ ಬಂಧಿತ ಆರೋಪಿಗಳು. ಈ ಹಿಂದೆ ಓಲಾ ಕಾರು ಚಾಲಕನಿಗೆ ಹಣ ನೀಡಿ ಸುತ್ತಾಡಿಸಲು ಹೇಳಿದ್ದ ನಂತರ ಇಬ್ಬರ ನಡುವೆ ಒಂದೇ ದಿನ ಆಪ್ತತೆ ಬೆಳೆದಿತ್ತು. 


COMMERCIAL BREAK
SCROLL TO CONTINUE READING

ಯಲಹಂಕ ನ್ಯೂಟೌನ್  ಬಳಿ ಇರುವ ಸಿಆರ್ ಪಿಎಫ್ ಗ್ರೌಂಡ್ ಬಳಿ ಕಾರು ನಿಲ್ಲಿಸಿದಾಗ ಇಬ್ಬರು ಪಾರ್ಟಿ ಮಾಡೋಣ ಎಂದು ಮಾತನಾಡಿಕೊಂಡಿದ್ದರು. ನಂತರ ಕಾರು ಚಾಲಕನಿಗೆ ಬೆಳಗಿನ ಜಾವದವರೆಗೆ ಕಂಠಮಟ್ಟ ಕುಡಿಸಿದ್ದರು ಮಂಜ ದಂಪತಿ. ನಂತರ ಎಣ್ಣೆ ನಶೆಯಲ್ಲಿದ್ದ ಕಾರು ಚಾಲಕ ಜೇಬಿನಿಂದ ಕೀ ತೆಗೆದುಕೊಳ್ಳುವ ಸಂಧರ್ಭ ಇಬ್ಬರ ನಡುವೆ ಕಿರಿಕ್ ನಡೆದಿದೆ‌. ನಂತರ ಕಾರು ಚಾಲಕನಿಗೆ ಧಮ್ಕಿ ಹಾಕಿ ವೇದಾವತಿ ಹಾಗೂ ಮೇಕೆ ಮಂಜ ಕಾರಿನಲ್ಲಿ ಪರಾರಿಯಾಗಿದ್ದರು. 


ಇದನ್ನೂ ಓದಿ- NSE Phone Tapping Case: ಫೋನ್ ಟ್ಯಾಪಿಂಗ್ ಪ್ರಕರಣ, ಮುಂಬೈ ಮಾಜಿ ಪೋಲೀಸ್ ಕಮಿಷನರ್ ಸಿಬಿಐ ವಶಕ್ಕೆ


ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸರಿಗೆ ಕಾರು ಚಾಲಕ ದೂರು ನೀಡಿದ್ದ. ಈ ಹಿನ್ನೆಲೆ ಕಾರ್ಯಾಚರಣೆಗಿಳಿದ ಪೊಲೀಸರು ದಂಪತಿಯನ್ನು ಕರೆ ತಂದು ವಿಚಾರಣೆ ನಡೆಸಿದಾಗ ಕಾರು ಕದ್ದಿರೋದು ಒಪ್ಪಿಕೊಂಡಿದ್ದಾರೆ. 


ಇದನ್ನೂ ಓದಿ- ಕೋಮಾಗೆ ಹೋಗಿದ್ದಾನೆ ಎಂದು 18 ತಿಂಗಳು ಶವವನ್ನು ಮನೆಯಲ್ಲಿಟ್ಟು ಕಾಯ್ದ ಕುಟುಂಬ..!


ಈ ಹಿಂದೆ ಮಂಜನ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣಗಳೂ ದಾಖಲಾಗಿರುವುದು ತಿಳಿದುಬಂದಿದೆ. ಸದ್ಯ ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.