ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ‌ಹಾಕಿ ವಿಕೃತಿ ಮೆರೆದಿದ್ದ ನಾಗ ಪೊಲೀಸರ ಮುಂದೆ ತನ್ನ ವಿಕೃತಿ ಮನಸ್ಥಿತಿಯನ್ನು ಹೊರಹಾಕಿದ್ದಾನೆ. ಸಾರ್ ಆ್ಯಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ, ಏಳು ವರ್ಷದಿಂದ ಕಾಯ್ತಿದ್ದೀನಿ ಮದುವೆಯಾಗೋಣ ಅಂತಾ ಕೇಳಿದ್ರೆ, ಅಣ್ಣ ಅಂದುಬಿಟ್ಲು‌, ನನಗೆ ಮದುವೆ ಸೆಟ್ಟಾಗಿದೆ ಅಂದುಬಿಟ್ಲು, ಇದ್ರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆ್ಯಸಿಡ್ ಖರೀದಿ ಮಾಡಿದ್ದೆ, ಆದ್ರೆ ಹಾಕಬೇಕು ಅನ್ಕೊಂಡಿರಲಿಲ್ಲ.


COMMERCIAL BREAK
SCROLL TO CONTINUE READING

ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೊ ಆ್ಯಸಿಡ್ ಹಾಕ್ದೆ. ಈಗಲೂ ಹುಡುಗಿ ಮನೆಯವರು ಹೆಣ್ಣು ಕೊಡ್ತಾರ ಕೇಳಿ  ನೋಡಿ ಸರ್ ಅವಳನ್ನ ಮದುವೆಯಾಗ್ತೀನಿ ಅಂತ ಪೊಲೀಸ್ರ ಮುಂದೆ ನಾಗ ಹೇಳಿಕೊಂಡಿದ್ದಾನಂತೆ. ಯಾಕೋ ಆ್ಯಸಿಡ್ ಹಾಕಿದೇ ಅಂತಾ ಪೊಲೀಸ್ರು ಕೇಳಿದ್ರೆ. ನಾನು ಆಸಿಡ್ ಹಾಕಬೇಕು ಅಂತಾ ಅನ್ಕೊಂಡಿರಲಿಲ್ಲ ಸಾರ್.  ಅವರ ಮನೆಯವರೇ ಊರು ತುಂಬಾ ಹೇಳ್ಕೊಂಡ್ ಬಂದ್ರು ಎಂದಿದ್ದಾನೆ.


ಇದನ್ನೂ ಓದಿ- Crime: ದಿನದ ಖರ್ಚಿಗೆ ಹಣ ಬೇಕು: ಈತ ಮಾಡಿದ್ದೇನು ಗೊತ್ತಾ.!?


ಆ್ಯಸಿಡ್ ಹಾಕ್ತಾನಂತೆ.... ಆ್ಯಸಿಡ್ ಹಾಕ್ತಾನಂತೆ.... ಅಂತಾ ಉಯಿಲೆಬ್ಬಿಸಿದ್ರು. ಯಾವಾಗ ಇವ್ರು ಎಲ್ಲಾ ಕಡೆ ಹೇಳ್ಕೊಂಡ್ ಬಂದ್ರೊ ಆಗ ಆ್ಯಸಿಡ್ ಹಾಕ್ದೆ ಅಂತ ನಾಗ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.‌ ಇನ್ನೂ ಪೊಲೀಸ್ರ ಏನೊ ಇದು ಕೈ ಗಾಯ ಅಂದ್ರೆ, ನನ್ನ ಸುಟ್ಟ ಕೈ ನೋಡಿದಾಗಲೆಲ್ಲ ಅವಳು ಅಳೋದು ನೆನಪಾಗಬೇಕು ಸಾರ್ ಅದಕ್ಕೆ ಈ ಗಾಯ ಮಾಡಿಕೊಂಡಿದ್ದಿನಿ ಅಂತ‌ ಹೇಳಿದ್ದಾನೆ ಆ್ಯಸಿಡ್ ನಾಗ.


ಇನ್ನೂ ಇಷ್ಟು ದಿನ ತಲೆ ಮರೆಸಿಕೊಂಡಿದ್ದ ನಾಗ ಆ್ಯಸಿಡ್ ಎರಚಲು ಕಾರಣ ಏನೂ ಎಂಬುದನ್ನು ಹೇಳಿಕೊಂಡಿದ್ದಾನೆ. ನೀವು ಹುಡುಕ್ತಿರ್ತೀರಾ ಅಂತಾ ಗೊತ್ತಿತ್ತು ಸರ್, ಮೂರ್ ಹೊತ್ತು ಊಟ , ಜೈಲಲ್ಲಿದ್ರೂ ಹಾಕ್ತಾರೆ ಧ್ಯಾನ ಮಾಡ್ಕೊಂಡ್ ಭಿಕ್ಷೆ ಬೇಡಿಕೊಂಡು ಬದುಕಿದ್ರೆ ಆಯ್ತು ಅಂತಾ ನಿರ್ಧಾರ ಮಾಡಿದ್ದೆ ಅಂದಿದ್ದಾನಂತೆ.


ಇದನ್ನೂ ಓದಿ- ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ನಮಗೇ ಮಗು ಕೊಡಿ ಎಂದು ದುಂಬಾಲು ಬಿದ್ದ ಜನ


ಹುಡುಗಿ ಅಣ್ಣ ಅಂತಾ ಕರೆದಾಗ್ಲೆ ತಿರುವಣ್ಣಾಮಲೈಗೆ ಹೋಗುವ ನಿರ್ಧಾರ ಮಾಡಿದ್ದೆ. ಇದೇ ಕಾರಣಕ್ಕೆ ದೇವಸ್ಥಾನ ಸೇರಿ ಸೇವೆ ಮಾಡ್ತಿದ್ದೆ ಎಂದು ನಾಗ ಪೊಲೀಸ್ರ ಮುಂದೆ ಬಾಯಿ ಬಿಟ್ಟಿದ್ದಾನಂತೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.