ಬೆಂಗಳೂರು: ಕೇವಲ 50 ರೂಪಾಯಿ ವಿಷಯಕ್ಕೆ ಕೊಲೆ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ನಗರದ ಕುರುಬರಹಳ್ಳಿ ಸರ್ಕಲ್ ಬಳಿ ಈ ಮರ್ಡರ್‌ ನಡೆದಿದ್ದು, 24 ವರ್ಷದ ಶಿವಮಾಧು ಕೊಲೆಯಾದ ಯುವಕ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Presidential Election: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಗಿ ದ್ರೌಪದಿ ಮುರ್ಮು ಹೆಸರು ಘೋಷಣೆ


ಆಟೋ ಡ್ರೈವರ್ ಶಿವಮಾಧು ಹಾಗೂ ಶಾಂತಕುಮಾರ್ ಇತರೆ ಸ್ನೇಹಿತರು ಸೈಬರ್ ಸೆಂಟರ್​ಗೆ ಆಗಮಿಸಿದ್ದರು. ಈ ವೇಳೆ ಶಾಂತಕುಮಾರ್ ಬಳಿ ಇದ್ದ 50 ರೂಪಾಯಿಯನ್ನು ಶಿವಮಾಧು ತೆಗೆದುಕೊಂಡಿದ್ದ. ಆಗ ಸ್ನೇಹಿತ ಶಾಂತಕುಮಾರ್ ಹಣ ವಾಪಸ್ ಕೊಂಡು ಅಂತಾ ಕೇಳಿದ್ದಾನೆ. ಆದರೆ ಶಿವಮಾಧು ಕೊಡಲ್ಲ‌ ಏನೋ ಮಾಡ್ತೀಯಾ ಎಂದಿದ್ದಾನೆ. ಇದೇ ವಿಷಯಕ್ಕೆ ಗಲಾಟೆ ನಡೆದು ಮಾತಿಗೆ ಮಾತು ಬೆಳೆದಿದೆ. ಜೊತೆಗಿದ್ದ ಸ್ನೇಹಿತರು ಇವರ ಕಿತ್ತಾಟ ನೋಡಿ ಬಿಡಿಸಲು ಯತ್ನಿಸಿದ್ದಾರೆ.


ಆದರೆ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಶಾಂತಕುಮಾರ್ ಸ್ನೇಹಿತ ಶಿವಮಾಧು ಎದೆಗೆ ಚಾಕು ಇರಿದಿದ್ದಾನೆ. ಈ ವೇಳೆ ಸ್ಥಳದಲ್ಲೇ ಕುಸಿದು ಬಿದ್ದ ಶಿವಮಾಧು ಮೃತಪಟ್ಟಿದ್ದಾನೆ. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಶಾಂತಕುಮಾರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ಇದನ್ನೂ ಓದಿ: Negative Energy Indications: ಮನೆಯಲ್ಲಿ ನೀವು ಮಾಡುವ ಈ ಕೆಲಸ ನಕಾರಾತ್ಮಕ ಶಕ್ತಿಗೆ ಬುಲಾವ್ ಕಳುಹಿಸಿದಂತೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.