ಮನೆಯಲ್ಲಿ ನೆಮ್ಮದಿ - ಶಾಂತಿ ನೆಲೆಸಿರಬೇಕೆಂದರೆ ವಾಸ್ತು ದೋಷ ಇರಬಾರದು. ಮನೆಯ ಪ್ರತಿ ಮೂಲೆಯೂ ವಾಸ್ತು ಪ್ರಕಾರವಿದ್ದಲ್ಲಿ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯ. ಸರಳವಾದ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ ಮತ್ತು ಸಮೃದ್ಧಿ ಉಂಟಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ಸುಲಭವಾದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ.


COMMERCIAL BREAK
SCROLL TO CONTINUE READING

ಮನೆಯಲ್ಲಿರುವ ವಸ್ತುಗಳು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿರುವುದು ಮನೆಯ ಸದಸ್ಯರ ಖುಷಿ ಮತ್ತು ನೆಮ್ಮದಿಗೆ ಕಾರಣವಾಗಿರುತ್ತದೆ. ನಾವು ಮನೆ(Home)ಯಲ್ಲಿ ತಂದಿಡುವ ಕೆಲವು ವಸ್ತುಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ನಮಗೆ ಅಂದವಾಗಿಯೋ, ಇಷ್ಟವಾಗಿಯೋ ಕೆಲವು ವಸ್ತುಗಳನ್ನು ತಂದು ಇಟ್ಟುಕೊಂಡು ಬಿಡುತ್ತೇವೆ. ಇದರಿಂದ ಕೆಲವು ಬಾರಿ ಒಳ್ಳೆಯದಾದರೂ ಹಲವಾರು ಬಾರಿ ಕೆಟ್ಟ ಅನುಭವಗಳು, ಸಂಕಷ್ಟಗಳು ಎದುರಾಗುತ್ತವೆ. ಆದರೆ, ನಮಗೆ ಇದರ ಅರಿವೇ ಇರುವುದಿಲ್ಲ.


Vastu tips: ಸಮಸ್ಯೆಯ ಮೇಲೆ ಸಮಸ್ಯೆ ಎದುರಾಗುತ್ತಿದ್ದರೆ ಚಿಟಕಿ ಅರಿಶಿನ ಬಳಸಿ ನೋಡಿ


ಕೆಲವು ವಸ್ತುಗಳನ್ನು ನಾವು ಮನೆಯಲ್ಲಿ ತಂದಿಟ್ಟುಕೊಂಡರೆ ನೆಗೆಟೀವ್(Negative Energy) ಅಂಶಗಳು ಆವರಿಸಿ ಎಲ್ಲವಕ್ಕೂ ಅಡ್ಡಿ ಆತಂಕಗಳು ಎದುರಾಗುತ್ತವೆ. ಮನಸ್ಸೂ ಸಹ ಉಲ್ಲಸಿತವಾಗಿರುವುದಿಲ್ಲ. ಅದೇ, ಇನ್ನು ಕೆಲವು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅವು ನಮಗೆ ಖುಷಿಯನ್ನು ತಂದುಕೊಡುತ್ತದೆ, ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳುತ್ತದೆ. ಧನ ಲಾಭವನ್ನುಂಟು ಮಾಡಿ ಆರ್ಥಿಕ ಪ್ರಗತಿ ಸಾಧಿಸುವಂತೆ ಮಾಡುತ್ತದೆ. ಹೀಗಾಗಿ ಯಾವುತ್ತೂ ಮನೆಯಲ್ಲಿ ಯಾವುದಕ್ಕೂ ಕೊರತೆಯೇ ಆಗುವುದಿಲ್ಲ.


Daily Horoscope: ದಿನಭವಿಷ್ಯ 18-03-2021 Today astrology


ಹೀಗೆ ಯಾವ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡರೆ ಹಣ(Money)ಕ್ಕೆ ಕೊರತೆಯಾಗುವುದಿಲ್ಲ. ಇವು ಈಗಾಗಲೇ ನಿಮ್ಮ ಮನೆಯಲ್ಲಿದ್ದರೆ ಬಹಳ ಒಳ್ಳೆಯದು, ಒಂದು ವೇಳೆ ಅವುಗಳು ಇಲ್ಲದಿದ್ದರೆ ಶೀಘ್ರವೇ ಹೋಗಿ ತಂದಿಟ್ಟುಕೊಳ್ಳಿ. ಹಾಗಾಗಿ ಮನೆಯ ಸಮೃದ್ದಿಗೆ ಕಾರಣವಾಗುವ ಸರಳ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ.


Shukra luck : ಈ ನಾಲ್ಕು ರಾಶಿಯವರಿಗೆ ಶುಕ್ರದೆಸೆ! ಈ ಅದೃಷ್ಟವಂತರಲ್ಲಿ ನೀವಿದ್ದೀರಾ?


ಕಮಲದ ಮೇಲೆ ಕುಳಿತಿರುವ ಲಕ್ಷ್ಮೀದೇವಿ(lord laxmi): ಎಲ್ಲರ ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೋ ಇದ್ದೇ ಇರುತ್ತದೆ. ಆದರೆ, ಯಾವ ರೀತಿಯ ಫೋಟೋ ಇಟ್ಟುಕೊಂಡರೆ ಬಹಳ ಒಳ್ಳೆಯದು..? ಯಾವ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು..? ಹೀಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಏನೆಲ್ಲ ಪರಿಣಾಮ ಬೀರುತ್ತದೆ..? ಆರ್ಥಿಕವಾಗಿ ಹೇಗೆ ಲಾಭವಾಗುತ್ತದೆ. ಧನಲಾಭ ಹೆಚ್ಚುತ್ತಾ ಹೋಗುತ್ತದೆ ಎಂಬುದು ಬಹಳಷ್ಟು ಜನಕ್ಕೆ ಗೊತ್ತಿರುವುದಿಲ್ಲ. ಇದಕ್ಕೆ ಮುಖ್ಯವಾಗಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀದೇವಿಯು ಕೈಯಿಂದ ಬಂಗಾರದ ನಾಣ್ಯಗಳನ್ನು ಮಳೆಯಂತೆ ಸುರಿಸುತ್ತಿರುವ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ಫೋಟೋವನ್ನು ಇಟ್ಟುಕೊಂಡರೆ ಸಾಲದು, ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟರೆ ಇನ್ನೂ ಒಳ್ಳೆಯದಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯು ಮನೆಯ ಮತ್ತು ಮನೆಯ ಸದಸ್ಯರ ಮೇಲೆ ಸದಾ ಇರುತ್ತದೆ. ಅದರಿಂದಾಗಿ ಮನೆಯಲ್ಲಿ ಸದಾ ಹಣ ಕೊರತೆ ಇಲ್ಲದೆ, ಸಂಪತ್ತು ನೆಲೆಸಲು ಸಹಾಯಕವಾಗುತ್ತದೆ.


Vastu tips : ಈ ವಸ್ತುಗಳನ್ನು ತಪ್ಪಿಯೂ ನೆಲದ ಮೇಲೆ ಇಡಬೇಡಿ..!


ನೀರಿನಿಂದ ತುಂಬಿದ ಮಡಿಕೆ ಇದ್ದರೆ ಲಾಭ: ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರಿನಿಂದ(Water) ತುಂಬಿದ ಮಡಿಕೆ ಅಥವಾ ಜೆಗ್ ಅನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಉತ್ತಮ. ಹೀಗೆ ಮಡಿಕೆಯಲ್ಲಿ ನೀರು ತುಂಬಿಡುವುದರಿಂದ ಮನೆಯಲ್ಲಿ ಹಣವೂ ತುಂಬಿಕೊಂಡಿರುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ನಿಮ್ಮ ಮನೆಯಲ್ಲಿ ಮಡಿಕೆ ಇಲ್ಲದಿದ್ದರೆ ಈಗಲೇ ತಂದಿಟ್ಟುಕೊಳ್ಳಬಹುದು.


ಈ ದಿನ ಗಣೇಶನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ದಿಸುವುದರಲ್ಲಿ ಅನುಮಾನವೇ ಇಲ್ಲ


ಆಮೆ ಮತ್ತು ಮೀನಿನ ಪ್ರತಿಮೆ(Fish Statue Vastu)ಯನ್ನು ಇಟ್ಟುಕೊಳ್ಳಿ ಮನೆಯ ಉತ್ತರ ದಿಕ್ಕಿನಲ್ಲಿ ಲೋಹದ ಆಮೆ ಅಥವಾ ಮೀನಿನ ಪ್ರತಿಮೆಯನ್ನು ಇಡುವುದರಿಂದ ಮನೆಯ ಸದಸ್ಯರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಇವುಗಳು ಪಾಸಿಟಿವ್ ಎನರ್ಜಿಯನ್ನೂ ಕೊಡುತ್ತವೆ. ಹೀಗಾಗಿ ಮನೆಯಲ್ಲಿ ಹೊಂದಬೇಕೆಂದು ಹೇಳಲಾಗುತ್ತದೆ.


Lord Ganesha: ಈ ವಿಶಿಷ್ಟವಾದ ಗಣೇಶ ಮಂದಿರದಲ್ಲಿ ಪತ್ರದ ಮೂಲಕ ಮನಸ್ಸಿನ ಮಾತನ್ನು ಹೇಳುವ ಭಕ್ತರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.