ರಾಯಚೂರು: ಕಾಂತಾರ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿರುವುದನ್ನು ನೀವು ಈಗಾಗಲೇ ನೋಡಿದ್ದಿರಿ, ಈಗ ಈ ಚಿತ್ರದ ಯಶಸ್ಸು ಈಗ ಹೊಸ ರೆಸ್ಟೋರೆಂಟ್ ವೊಂದನ್ನು ಓಪನ್ ಮಾಡಲಿಕ್ಕೆ ಸ್ಫೂರ್ತಿಯಾಗಿದೆ ಎಂದರೆ ನಂಬ್ತೀರಾ?


COMMERCIAL BREAK
SCROLL TO CONTINUE READING

ಇದನ್ನೂ ಓದಿ- Pathaan kranti : ಕರುನಾಡಲ್ಲಿ ಕಿಂಗ್‌ ಖಾನ್‌ ʼಪಠಾಣ್‌ʼ ಕಲೆಕ್ಷನ್‌ಗೆ ದರ್ಶನ್‌ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?


ಹೌದು, ನೀವು ನಂಬಲೇಬೇಕು, ರಾಯಚೂರಿನಲ್ಲಿ ಈಗ ಕಾಂತಾರ ಚಿತ್ರದಿಂದ ಸ್ಫೂರ್ತಿ ಪಡೆದು ರೆಸ್ಟೋರೆಂಟ್ ವೊಂದು ಆರಂಭವಾಗಿರುವುದು ಗ್ರಾಹಕರ ಗಮನ ಸೆಳೆದಿದೆ. ನೂತನವಾಗಿ ಆರಂಭವಾಗಿರುವ ಈ ರೆಸ್ಟೋರೆಂಟ್ ಲಿಂಗಸಗೂರು-ಮುದಗಲ್ ಮಾರ್ಗದಲ್ಲಿ ಆರಂಭಿಸಲಾಗಿದೆ.ಅಷ್ಟಕ್ಕೂ ಈ ರೆಸ್ಟೋರೆಂಟ್ ನ ಮಾಲೀಕರಾಗಿರುವ ರಜನಿಕಾಂತ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರ ನಿವಾಸಿಯಾಗಿದ್ದಾರೆ.


ಇದನ್ನೂ ಓದಿ- Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!


ಅಪ್ಪಟ ರಿಷಭ್ ಶೆಟ್ಟಿ ಅವರ ಅಭಿಮಾನಿ ರಜಿನಿ‌ಕಾಂತ್ ಶೆಟ್ಟಿಅವರು ಪಂಜುರ್ಲಿ,ಕಲ್ಲುರ್ಟಿ ದೈವಗಳ ಬಗ್ಗೆ ನಂಬಿಕೆಯನ್ನು ಹೊಂದಿದ್ದಾರೆ.ಈಗ ರೆಸ್ಟೋರೆಂಟ್ ಗೆ ಜನರನ್ನು ಬೇಗ ತಲುಪುವ ಉದ್ದೇಶದಿಂದಾಗಿ ಕಾಂತಾರ ಚಿತ್ರದ ಹೆಸರನ್ನು ಇಟ್ಟಿರುವುದಾಗಿ ಅವರು ಹೇಳುತ್ತಾರೆ.ಸುಮಾರು 7-8 ಲಕ್ಷ ವೆಚ್ಚದಲ್ಲಿ ಈ ರೆಸ್ಟೋರೆಂಟ್ ನ್ನು ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.