Pathaan kranti : ಕರುನಾಡಲ್ಲಿ ಕಿಂಗ್‌ ಖಾನ್‌ ʼಪಠಾಣ್‌ʼ ಕಲೆಕ್ಷನ್‌ಗೆ ದರ್ಶನ್‌ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?

ಬಹು ದಿನಗಳ ನಂತರ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ʼಪಠಾಣ್‌ʼ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಾದ್‌ ಶಾ ಸಿನಿಮಾದ ಆನ್‌ಲೈನ್‌ ಟಿಕೆಟ್‌ಗಳ ಖರೀದಿ ಜೋರಾಗಿದೆ. ಕರ್ನಾಟಕದಲ್ಲಿಯೂ ಶಾರುಖ್‌ ಖಾನ್‌ಗೆ ಪ್ಯಾನ್ಸ್‌ ಪಾಲೋಯಿಂಗ್‌ ಇದೆ. ಇದರ ಬೆನ್ನಲ್ಲೆ ಬಾಕ್ಸ್‌ ಆಫೀಸ್‌ ಸುಲ್ತಾನ ನಟ ದರ್ಶನ್‌ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದ್ದು, ಒಂದು ದಿನದ ಮುಂಚೆ ಅಂದ್ರೆ 25 ರಂದು ಬಿಡುಗಡೆಯಾಗುವ ಪಠಾಣ್‌ ಸಿನಿಮಾಗೆ ನೇರ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.

Written by - Krishna N K | Last Updated : Jan 22, 2023, 08:46 PM IST
  • ಕರ್ನಾಟಕದಲ್ಲಿಯೂ ಶಾರುಖ್‌ ಖಾನ್‌ಗೆ ಪ್ಯಾನ್ಸ್‌ ಪಾಲೋಯಿಂಗ್‌ ಇದೆ.
  • ನಟ ದರ್ಶನ್‌ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದೆ.
  • ಒಂದು ದಿನದ ಮುಂಚೆ ಬಿಡುಗಡೆಯಾಗುವ ಪಠಾಣ್‌ ಸಿನಿಮಾಗೆ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.
Pathaan kranti : ಕರುನಾಡಲ್ಲಿ ಕಿಂಗ್‌ ಖಾನ್‌ ʼಪಠಾಣ್‌ʼ ಕಲೆಕ್ಷನ್‌ಗೆ ದರ್ಶನ್‌ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!? title=

Pathaan and kranti box office clash : ಬಹು ದಿನಗಳ ನಂತರ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ʼಪಠಾಣ್‌ʼ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಾದ್‌ ಶಾ ಸಿನಿಮಾದ ಆನ್‌ಲೈನ್‌ ಟಿಕೆಟ್‌ಗಳ ಖರೀದಿ ಜೋರಾಗಿದೆ. ಕರ್ನಾಟಕದಲ್ಲಿಯೂ ಶಾರುಖ್‌ ಖಾನ್‌ಗೆ ಪ್ಯಾನ್ಸ್‌ ಪಾಲೋಯಿಂಗ್‌ ಇದೆ. ಇದರ ಬೆನ್ನಲ್ಲೆ ಬಾಕ್ಸ್‌ ಆಫೀಸ್‌ ಸುಲ್ತಾನ ನಟ ದರ್ಶನ್‌ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದ್ದು, ಒಂದು ದಿನದ ಮುಂಚೆ ಅಂದ್ರೆ 25 ರಂದು ಬಿಡುಗಡೆಯಾಗುವ ಪಠಾಣ್‌ ಸಿನಿಮಾಗೆ ನೇರ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರಗಳು ವಿವಿಧ ಕಾರಣಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಿನ್ನಡೆಯನ್ನು ಪಡೆಯುತ್ತಿವೆ. ಬಾಯ್ಕಾಟ್‌ಗೂ ಬಲಿಯಾಗುತ್ತಿವೆ. ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ, ಬ್ರಹ್ಮಾಸ್ತ್ರ ಮತ್ತು ಇತರ ಬಿಗ್‌ ಬಜೆಟ್‌ ಸಿನಿಮಾಗಳು ಮಣ್ಣು ಮುಕ್ಕಿದ್ದರು. ಅಲ್ಲದೆ, ಕನ್ನಡ ಸಿನಿಮಾಗಳಿಗೂ ಭಾರತೀಯ ಸಿನಿರಂಗದಲ್ಲಿ ಬಹು ಬೇಡಿಕೆ ಇದೆ. ಇದಕ್ಕಾಗಿಯೇ ಪಠಾಣ್‌ ಸಿನಿಮಾಗೆ ಕ್ರಾಂತಿ ಸೆಡ್ಡು ಹೊಡೆಯುವ ಎಲ್ಲಾ ಲಕ್ಷಣಗಳಿವೆ.

ಇದನ್ನೂ ಓದಿ: ʼಶಾರುಖ್‌ ಖಾನ್‌ ಯಾರುʼ ಎಂದ ಅಸ್ಸಾಂ ಸಿಎಂಗೆ ಫೋನ್‌ ಕಾಲ್‌ ಮಾಡಿದ ಬಾದ್‌ ಶಾ..!

ರಿಷಬ್ ಶೆಟ್ಟಿ ಕಾಂತಾರ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಹೊಂದಿರುವ ದರ್ಶನ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಾ ಎನ್ನವುದನ್ನು ಕಾಯ್ದು ನೋಡಬೇಕಿದೆ. ಕ್ರಾಂತಿಯನ್ನು ವಿ. ಹರಿ ಕೃಷ್ಣ ಬರೆದು ನಿರ್ದೇಶಿಸಿದ್ದಾರೆ. ನಟ ದರ್ಶನ್ ತೂಗುದೀಪ, ರಚಿತಾ ರಾಮ್ ಮತ್ತು ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ರಾಂತಿ ಗಣರಾಜ್ಯೋತ್ಸವದಂದು ಥಿಯೇಟರ್‌ಗಳಿಗೆ ಬರಲಿದೆ.

ಈಗಾಗಲೇ ಕ್ರಾಂತಿ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ 3 ಗಂಟೆಗಳ ವ್ಯಾಪ್ತಿಯಲ್ಲಿ 25, 000 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಕ್ರಾಂತಿ ಕ್ರೇಜ್ ನೋಡಿದ್ರೆ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಈಗಾಗಲೇ 13ಕ್ಕೂ ಹೆಚ್ಚು ಶೋಗಳ ಟಿಕೆಟ್ ಸೋಲ್ಡೌಟ್‌ ಆಗಿದೆ. ಇದನ್ನೆಲ್ಲ ಗಮನಿಸಿದರೆ ಪಠಾಣ್‌ಗೆ ಕರ್ನಾಟಕದ ಕಲೆಕ್ಷನ್‌ನಲ್ಲಿ ಭಾರಿ ಹೊಡೆತ ಬಿಳುವ ಸಾಧ್ಯತೆ ಇದೆ. ಅಲ್ಲದೆ ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾದಂತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News