ನಟ ಅನಿರುದ್ದ್ ಟೈಮ್ ಸರಿ ಇಲ್ವಾ, ಅನ್ನೋ ಪ್ರಶ್ನೆ ಯಾಕೋ ಜೋರಾಗಿ ಚರ್ಚೆ ಆಗುತ್ತಿದೆ. ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ತೆರೆಮರೆಯಲ್ಲಿದ್ದ ಅನಿರುದ್ದ್ ಅವರಿಗೆ ಜೀ ಕನ್ನಡ ವಾಹಿನಿ ಜೊತೆಜೊತೆಯಲಿ ಅನ್ನೋ ಸೀರಿಯಲ್ ಮೂಲಕ ದೊಡ್ಡ ವೇದಿಕೆಯನ್ನ ಸೃಷ್ಟಿ ಮಾಡಿಕೊಟ್ಟಿತ್ತು. 


COMMERCIAL BREAK
SCROLL TO CONTINUE READING

ಅನಿರುದ್ದ್ ಅವರಿಗೆ ಭರ್ಜರಿ ಯಶಸ್ಸನ್ನ ನೀಡಿದ್ದ ಜೊತೆ ಜೊತೆಯಲಿ ಸೀರಿಯಲ್ ಅವರನ್ನು ಟಾಪ್ ನಾಯಕರ ಪಟ್ಟಿಗೆ ಸೇರಿಸಿತ್ತು.  ಎಲ್ಲಾರು ಆರ್ಯವರ್ಧನ್ ಅನ್ನೋ ಹೆಸ್ರಲ್ಲೇ ಇವರನ್ನ ಗುರುತಿಸೋ ಲೆವೆಲ್ಲಿಗೆ ಅನಿರುದ್ದ್  ಹೆಸರು ಮಾಡಿದ್ರು. ಅದ್ಯಾಕೋ ಏನೋ ಶೂಟಿಂಗ್ ಸೆಟ್ನಲ್ಲಿ ತಾವು ಮಾಡಿಕೊಂಡ ಎಡವಟ್ಟು ಅವರನ್ನ ಸೀರಿಯಲ್ ನಿಂದ ಮಾತ್ರವಲ್ಲ ಕಿರಿತೆರೆಯಿಂದಲೇ ದೂರ ಇಡುವಷ್ಟು ಮಟ್ಟಿಗೆ ವಿವಾದವನ್ನು ಸೃಷ್ಟಿ ಮಾಡಿತ್ತು.   ಸಾಹಸಸಿಂಹನ ಕನಸಿನ ಮನೆ "ವಲ್ಮೀಕ".. ವಲ್ಮೀಕ ಅಂದ್ರೆ ಏನು ಗೊತ್ತಾ...?


ಇತ್ತೀಚಿಗೆ, ವಿಷಯ ತಣ್ಣಗಾದ ಬಳಿಕ ಹೆಸರಾಂತ ನಿಮಾಪಕ, ನಿರ್ದೇಶಕರಾದ ಎಸ್. ನಾರಾಯಣ್ ಅವರು ಅನಿರುದ್ದ್ ಅವರಿಗೆ ಹೊಸ ಧಾರವಾಹಿಗೆ ಅವಕಾಶ ನೀಡಿದ್ದರು. ಎಸ್ ನಾರಾಯಣ್ ಅನಿರುದ್ದ್ ಜೊತೆ ಸೂರ್ಯವಂಶ  ಅನ್ನೋ ಸೀರಿಯಲ್ ಅನೌನ್ಸ್ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೆ ಅನಿರುದ್ದ್ ಅವರನ್ನು ಕಿರಿತೆರೆಯಿಂದ ಬ್ಯಾನ್ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅನಿರುದ್ದ್ ಅವರನ್ನ ಕಿರುತೆರಿಯಿಂದ ದೂರ ಇಡಬೇಕು. ಅವರಿಗೆ ಸೀರಿಯಲ್ ಗಳಲ್ಲಿ ಅವಕಾಶ ಕೊಡಬಾರದು ಅನ್ನೋ ಕೂಗು ಕೇಳಿಬರುತ್ತಿದೆ. 


ಎಸ್. ನಾರಾಯಣ್ ಅವರು ಅನಿರುದ್ದ್ ಅವರಿಗಾಗಿ ಸೂರ್ಯವಂಶ ಧಾರಾವಾಹಿಯನ್ನು ಅನೌನ್ಸ್ ಮಾಡಿದ ಬೆನ್ನಲ್ಲೇ, ಅವರನ್ನು ಭೇಟಿಯಾಗಿರುವ ನಿರ್ಮಾಪಕರ ಸಂಘದವರು,  ಅನಿರುದ್ದ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಿದ್ದೀವಿ. ಅನಿರುದ್ಧ್ ಜೊತೆ ಧಾರವಾಹಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 


ಇದನ್ನೂ ಓದಿ- Mr.ಆಂಡ್ Mrs ರಾಮಾಚಾರಿ ವೆಡ್ಡಿಂಗ್ ಆನಿವರ್ಸರಿ : ರಾಕಿಭಾಯ್‌ಗೆ ರಾಧಿಕಾ ಪ್ರೇಮ ಸಂದೇಶ..!


ಜೊತೆ ಜೊತೆಯಲ್ಲಿ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ  ಅನಿರುದ್ದ್ ನಡವಳಿಕೆ ಅವರ ಕಿರುತೆರೆ ಜೀವನವನ್ನೇ ಅಂತ್ಯಗೊಳಿಸಲಿದೆಯೇ? ಅಥವಾ ಎಲ್ಲವೂ ಒಂದು ತಾರ್ಕಿಕ ಅಂತ್ಯ ಕಾಣಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.