Bigg Boss Kannada OTT : ಬಿಗ್ ಬಾಸ್ ಕನ್ನಡ ಓಟಿಟಿ ಸೀಸ್‌ 1 ಕ್ಕೆ ಚಾಲನೆ ಸಿಕ್ಕಿದೆ. ನಿನ್ನೆ ನಾಲ್ಕನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಸ್ಫೂರ್ತಿ ಗೌಡ ಒಳಗೆ ಹೋಗಿದ್ದಾರೆ. ಸೀತಾ ವಲ್ಲಭ ಸೀರಿಯಲ್‌ನಲ್ಲಿ ನಟಿಸಿ ಅರ್ಧಕ್ಕೆ ಬಿಟ್ಟಿದ್ದ ಸ್ಫೂರ್ತಿ ಗೌಡ ಇದೀಗ ಬಿಗ್ ಬಾಸ್ ಕನ್ನಡ ಓಟಿಟಿಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಮುನ್ನ ವೇದಿಕೆ ಮೇಲೆ ಸ್ಫೂರ್ತಿ ಗೌಡಗೆ ನಟ ಕಿಚ್ಚ ಸುದೀಪ್ ಕೆಲವು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ನಮ್ಮ ದೇಶದ ರಾಷ್ಟ್ರಪತಿ ಯಾರು ಎಂದಾಗ, "ನರೇಂದ್ರ ಮೋದಿ" ಅಂತ ಸ್ಫೂರ್ತಿ ಗೌಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗುವ ಮುನ್ನ ನಿಮಗೆ ಒಂದೈದು ಪ್ರಶ್ನೆಗಳನ್ನು ಕೇಳುತ್ತೇನೆ. ಒಂದು ವೇಳೆ ಐದಕ್ಕೆ ಐದೂ ಪ್ರಶ್ನೆಗಳನ್ನು ಉತ್ತರಿಸಿದರೆ, 42 ದಿನಗಳನ್ನು ದಾಟಿ ಮುಂದಕ್ಕೆ ಹೋಗ್ತೀರಾ ಅನ್ನೋದು ನನ್ನ ಅಭಿಪ್ರಾಯ ಎಂದು ಸುದೀಪ್‌ ಹೇಳುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Bigg Boss OTT: ಈ ಬಾರಿ ಬಿಗ್ ಬಾಸ್ ವಿನ್ನರ್‌ ಯಾರು? ಮೊದಲ ದಿನವೇ ಆರ್ಯವರ್ಧನ್​ ಗುರೂಜಿ ಭವಿಷ್ಯ


ಮೊದಲ ಪ್ರಶ್ನೆಯಾಗಿ ಭಾರತಕ್ಕೆ ಸ್ವತಂತ್ರ ಸಿಕ್ಕಿದ್ದು ಯಾವಾಗ? ಎಂದು ಕೇಳುತ್ತಾರೆ. ಇದಕ್ಕೆ ಸ್ಫೂರ್ತಿ ಗೌಡ ಸರಿಯಾದ ಉತ್ತರ ನೀಡಿದರು. ನಂತರ ನಮ್ಮ ದೇಶದ ರಾಷ್ಟ್ರಪತಿಗಳ ಹೆಸರೇನು? ಎಂದು ಸುದೀಪ್ ಪ್ರಶ್ನಿಸಿದಾಗ, ನರೇಂದ್ರ ಮೋದಿ ಎಂದರು. ಬಳಿಕ ಪ್ರಧಾನ ಮಂತ್ರಿ ಹೆಸರೇನು? ಎಂದಾಗ ನರೇಂದ್ರ ಮೋದಿ.. ಎಂದು ಸ್ಫೂರ್ತಿ ಹೇಳುತ್ತಾರೆ. ನಂತರ ಸಾರಿ ರಾಷ್ಟ್ರಪತಿ ಗೊತ್ತಿಲ್ಲ ಅಂತ ಸ್ಫೂರ್ತಿ ಗೌಡ ಹೇಳಿದರು. ಬಳಿಕ ಸುದೀಪ್‌ ಅವರು ಪಂಚ ಪಾಂಡವರು ಯಾರು? ಎಂದು ಕೇಳಿದಾಗ, ಗೊತ್ತಿಲ್ಲ ಎಂದರು. 13ನೇ ಮಗ್ಗಿ ಕೇಳಿದಾಗಲೂ, ಸ್ಫೂರ್ತಿ ಬರಲ್ಲ ಎಂದರು.


ಮೂಲತಃ ಮಲೆನಾಡಿನವರಾದ ಸ್ಫೂರ್ತಿ ಗೌಡ ಮಿಸ್ ಪಾಪ್ಯುಲರ್ ಫೇಸ್, ಮಿಸ್ ಮಲ್ನಾಡ್ ರನ್ನರ್ ಅಪ್ ಆಗಿದ್ದಾರೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 4 ಕಾರ್ಯಕ್ರಮದಲ್ಲಿ ಸ್ಫೂರ್ತಿ ಗೌಡ ಸ್ಪರ್ಧಿಸಿದ್ದರು. ಆದರೆ ಮೊದಲ ವಾರವೇ ಇವರು ಕಾರ್ಯಕ್ರಮದಿಂದ ಔಟ್ ಆಗಿದ್ದರು. 


ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆಯಿಂದ  ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್‌ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಅವರು ಈ ಶೋಅನ್ನು ನಡೆಸಿಕೊಡುತ್ತಿದ್ದಾರೆ.  


ಇದನ್ನೂ ಓದಿ: BBK OTT : ಭಿಕ್ಷೆ ಬೇಡುತ್ತಿದ್ದ ಇವರು ಈಗ ಬಿಗ್​ ಬಾಸ್ ಸ್ಪರ್ಧಿ.. ಕಣ್ಣೀರು ತರಿಸುತ್ತೆ ಈ ಕಲಾವಿದನ ಕಥೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.