Bigg Boss OTT: ಈ ಬಾರಿ ಬಿಗ್ ಬಾಸ್ ವಿನ್ನರ್‌ ಯಾರು? ಮೊದಲ ದಿನವೇ ಆರ್ಯವರ್ಧನ್​ ಗುರೂಜಿ ಭವಿಷ್ಯ

Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆಯಿಂದ  ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್‌ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಅವರು ಈ ಶೋಅನ್ನು ನಡೆಸಿಕೊಡುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ಬಿಗ್​ ಬಾಸ್​ ಒಟಿಟಿಗೆ ಎಂಟ್ರಿ ಕೊಟ್ಟ ಆರ್ಯವರ್ಧನ್, ಸುದೀಪ್​ ಜತೆ ಬಿಗ್​​ ಬಾಸ್ ವೇದಿಕೆ ಮೇಲೆ ಆರ್ಯವರ್ಧನ್​ ಅವರು, ಹಲವು ವಿಚಾರ ಹಂಚಿಕೊಂಡರು.

Written by - Chetana Devarmani | Last Updated : Aug 7, 2022, 11:51 AM IST
  • ಬಿಗ್ ಬಾಸ್ ಕನ್ನಡ ಒಟಿಟಿ ಆರಂಭ
  • ಈ ಬಾರಿ ಬಿಗ್ ಬಾಸ್ ವಿನ್ನರ್‌ ಯಾರು?
  • ಮೊದಲ ದಿನವೇ ಆರ್ಯವರ್ಧನ್​ ಗುರೂಜಿ ಭವಿಷ್ಯ
Bigg Boss OTT: ಈ ಬಾರಿ ಬಿಗ್ ಬಾಸ್ ವಿನ್ನರ್‌ ಯಾರು? ಮೊದಲ ದಿನವೇ ಆರ್ಯವರ್ಧನ್​ ಗುರೂಜಿ ಭವಿಷ್ಯ  title=
ಆರ್ಯವರ್ಧನ್​ ಗುರೂಜಿ

Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆಯಿಂದ  ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್‌ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಅವರು ಈ ಶೋಅನ್ನು ನಡೆಸಿಕೊಡುತ್ತಿದ್ದಾರೆ. ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್ 1 ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಕಷ್ಟು ಕಾಂಟ್ರವರ್ಸಿ ಜೊತೆ ತಮ್ಮ ಜೋತಿಷ್ಯದ ಮೂಲಕ ಚಿರಪರಿಚಿತರಾದ ಆರ್ಯವರ್ಧನ್ ಗುರೂಜಿ‌ ಈಗ ಬಿಗ್‌ಬಾಸ್ ಕನ್ನಡ ಒಟಿಟಿ ಮೊದಲ ಸ್ಪರ್ಧಿಯಾಗಿದ್ದಾರೆ. ಆರ್ಯವರ್ಧನ್ ಗುರೂಜಿ‌ಯವರನ್ನು ಸ್ಟೇಜ್‌ ಮೇಲೆ ಬರಮಾಡಿಕೊಂಡ ನಟ ಸುದೀಪ್ ಅವರು, ಕೆಲಕಾಲ ಮಾತನಾಡಿದರು. ಈ ವೇಳೆ ಮಾತನಾಡೋದಕ್ಕೆ ತುಂಬಾ ಚಡಪಡಿಸುತ್ತಿದ್ದ ಆರ್ಯವರ್ಧನ್ ಅವರಿಗೆ ಕಿಚ್ಚ ಸುದೀಪ್‌ ಧೈರ್ಯ ಹೇಳಿದರು. 'ಖಷಿಯಾಗಿ ಮಾತನಾಡಿ ಸರ್‌' ಅಂತಾ ಆತ್ಮವಿಶ್ವಾಸ ತುಂಬಿದರು. 

ಇದನ್ನೂ ಓದಿ: Bigg Boss OTT: ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ್ ಗೌಡ ‘ಕಿಚ್ಚ’ನಿಗೆ ಹೇಳಿದ್ದೇನು?

ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿ, ಐಪಿಎಲ್ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಯಾವ ತಂಡ ಗೆಲ್ಲುತ್ತೆ? ಯಾವ ತಂಡ ಸೋಲುತ್ತೇ ಎಂಬುದನ್ನು ಪ್ರಿಡಿಕ್ಟ್‌ ಮಾಡುತ್ತಿದ್ದರು. ಅವರ ಊಹೆಗಳು ಅನೇಕ ಬಾರಿ ತಪ್ಪಾಗಿವೆ. ಇದೇ ವಿಚಾರಕ್ಕೆ ಅವರು ಅನೇಕ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಕೂಡ ಆಗಿದ್ದಾರೆ. ಇದೀಗ ಅವರು ಬಿಗ್‌ ಬಾಸ್‌ ಕನ್ನಡ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುತ್ತಲೇ ತಮ್ಮ ಸಂಖ್ಯಾಶಾಸ್ತ್ರದ ಮೂಲಕ ಬಿಗ್‌ ಬಾಸ್‌ ಒಟಿಟಿ ವಿನ್ನರ್‌ ಯಾರಾಗಬಹುದೆಂದು ಊಹಿಸಿದ್ದಾರೆ. 

ಮೊದಲ ಸ್ಪರ್ಧಿಯಾಗಿ ಬಿಗ್​ ಬಾಸ್​ ಒಟಿಟಿಗೆ ಎಂಟ್ರಿ ಕೊಟ್ಟ ಆರ್ಯವರ್ಧನ್, ಸುದೀಪ್​ ಜತೆ ಬಿಗ್​​ ಬಾಸ್ ವೇದಿಕೆ ಮೇಲೆ ಆರ್ಯವರ್ಧನ್​ ಅವರು, ಹಲವು ವಿಚಾರ ಹಂಚಿಕೊಂಡರು. ಇದೇ ವೇಳೆ "ನನ್ನ ಸಂಖ್ಯಾಶಾಸ್ತ್ರ ಎಂದಿಗೂ ತಪ್ಪಾಗುವುದಿಲ್ಲ. ನಾನು ಹೇಳಿದ್ದನ್ನೇ ಮಾಡುತ್ತೇನೆ, ಮಾಡಿದ್ದನ್ನೇ ಹೇಳುತ್ತೇನೆ. ನಾನು ಗೌಡ" ಎಂದರು. "ನನ್ನ ಹಾಗೆ ಬಿರಿಯಾನಿ ಯಾರ ಬಳಿಯೂ ಮಾಡೋಕೆ ಸಾಧ್ಯವಿಲ್ಲ" ಎಂದು ಹೇಳಿದರು. ಈ ವೇಳೆ ಈ ಬಾರಿ ಬಿಗ್​ ಬಾಸ್ ಯಾರು ಗೆಲ್ಲಲಿದ್ದಾರೆ? ಎಂಬ ಸುದೀಪ್ ಅವರ ಪ್ರಶ್ನೆಗೆ ಆರ್ಯವರ್ಧನ್​, "ನನ್ನ ಸಂಖ್ಯಾಶಾಸ್ತ್ರ ಎಂದಿಗೂ ತಪ್ಪಾಗಿಲ್ಲ. 6 ನೇ ಸ್ಪರ್ಧಿಯಾಗಿ ಬಿಗ್ ಬಾಸ್​​ ಮನೆ ಪ್ರವೇಶಿಸುವ ವ್ಯಕ್ತಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ 3, 5 ನೇ ಕಂಟೆಸ್ಟಂಟ್‌ ಸಹ ವಿನ್ನರ್‌ ಆಗಬಹುದು" ಎಂದಿದ್ದಾರೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿ ಮಾಲಾಶ್ರೀ ಮಗಳು ಚಿತ್ರರಂಗಕ್ಕೆ ಎಂಟ್ರಿ!

ಇನ್ನು ಸ್ಟೇಜ್‌ ಮೇಲೆ ಮಾತನಾಡಲು ತಡವರಿಸುತ್ತಿದ್ದ ಆರ್ಯವರ್ಧನ್ ಗುರೂಜಿ‌ ಅವರಿಗೆ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಕುರಿತು ಮಾತನಾಡಿಸಿದರು. ಬಿಗ್‌ ಬಾಸ್‌ ಮನೆಯ ಒಳಗೆ ಹೋಗುವ ಬಗ್ಗೆ ಮಾತನಾಡಿದಾಗ ಮಗಳನ್ನು ಅಪ್ಪಿಕೊಳ್ಳುವ ಆಸೆ ಹಂಚಿಕೊಂಡರು ಗುರೂಜಿ. ಅಪ್ಪ ಕರೆದ ಕೂಡಲೇ ಆರ್ಯವರ್ಧನ್ ಗುರೂಜಿ‌ಯ ಪುಟಾಣಿ ಪುತ್ರಿ ಸ್ಟೇಜ್‌ ಮೇಲೆ ಓಡೋಡಿ ಬಂದು ಅಪ್ಪನಿಗೆ ಅಪ್ಪುಗೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News