Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಐದನೇ ವಾರ ಮುಗಿಯಲು ಬಂದಿದೆ. ಈ ಬಾಋಿಯ ಬಿಗ್‌ ಬಾಸ್‌ ನಲ್ಲಿ ನಗು, ಮೋಜಿಗಿಂತ ಹೆಚ್ಚು ಜಗಳ, ಮನಸ್ತಾಪಗಳೇ ಕಾಣುತ್ತಿವೆ. ಇದರ ಮಧ್ಯೆ ಈ ವಾರದ ಎಲಿಮಿನೇಷನ್‌ ವೇಳೆ ಬಿಗ್‌ ಟ್ವಿಸ್ಟ್‌ ಒಂದು ನಡೆದಿದೆ ಎನ್ನಲಾಗಿದೆ. ಮನೆಯಿಂದ ಹೊರಹೋಗಬೇಕಾದ ಸ್ಪರ್ಧಿ ಬದಲಿಗೆ ಬೇರೆಯವರು ಹೊರ ನಡೆದಿದ್ದಾರೆ ಎನ್ನಲಾಗ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬಿಗ್‌ ಬಾಸ್ ಮನೆಯಲ್ಲಿ‌ ಮಗಳ ಸರಸ.. ಬೇಸತ್ತ ಪೋಷಕರು 'ಶೋ ನಿಂದ ಹೊರಹಾಕಿ' ಅಂದ್ರು!


ಕೆಲವು ವರದಿಗಳ ಪ್ರಕಾರ, ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ನಡೆದಿದ್ದ ಒಂದು ಘಟನೆ, ಈ ಬಾರಿ ಮರುಕಳಿಸಿದೆ ಎಂದು ಹೇಳಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ನಟಿ ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಅವರಿಗೆ ಬಿಗ್ ಬಾಸ್‌ನಲ್ಲಿ ಇರಲು ಸಾಧ್ಯವಾಗದ ಕಾರಣ ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದರು. ಆ ವಾರ ಎಲಿಮಿನೇಟ್ ಶಮಂತ್ ಬ್ರೋ ಗೌಡ ಎಲಿನಿಮಿನೇಟ್‌ ಆಗಬೇಕಿತ್ತು. ಆದರೆ ಅವರ ಬದಲಿಗೆ ವೈಜಯಂತಿ ತಾವು ಹೊರ ಹೋಗುವುದಾಗಿ ಬಿಗ್‌ ಬಾಸ್‌ ಬಳಿ ಮನವಿ ಮಾಡಿದ್ದರು. ಈ ಮೂಲಕ ಶಮಂತ್ ಉಳಿದುಕೊಂಡರು. ವೈಜಯಂತಿ ಮನೆಯಿಂದ ಎಲಿಮಿನೇಟ್‌ ಆದರು. 


ಇಂಥದ್ದೇ ಒಂದು ಅಚ್ಚರಿಯ ಎಲಿಮಿನೇಷನ್‌ ಈ ವಾರ ಬಿಗ್‌ ಬಾಸ್‌ ನಲ್ಲಿ ನಡೆದಿದೆಯಂತೆ. ಈ ವಾರ ನೀತು ವನಜಾಕ್ಷಿ ಎಲಿಮಿನೇಟ್ ಆಗಿದ್ದಾರೆ. ಆದರೆ ವರ್ತೂರ್‌ ಸಂತೋಷ್ ಅವರು ನೀತು ಬದಲು ತಾವು ಮನೆಯಿಂದ ಹೊರ ಹೋಗುವುದಾಗಿ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಹಾಗೊಂದು ವೇಳೆ ಇದು ನಿಜವಾಗಿಯೂ ನಡೆದಿದ್ದರೆ ನೀತು ಉಳಿದುಕೊಳ್ಳುತ್ತಾರೆ ಮತ್ತು ವರ್ತೂರ್‌ ಸಂತೋಷ್‌ ಎಲಿಮಿನೇಟ್‌ ಆಗುತ್ತಾರೆ. ಈ ಎಲಿಮಿನೇಷನ್‌ ಬಗ್ಗೆ ವಾಹಿನಿಯಾಗಲಿ ಅಥವಾ ಸ್ಪರ್ಧಿಗಳಿಗೆ ಸಂಬಂಧಪಟ್ಟವರಾಗಲಿ ಸ್ಪಷ್ಟನೆ ನೀಡಿಲ್ಲ. ಇಂಥದ್ದೊಂದು ಊಹಾಪೋಹ ಕೇಳಿ ಬರುತ್ತಿದ್ದು, ಇಂದಿನ ಎಪಿಸೋಡ್​ ನೋಡಿದ ಬಳಿಕವೇ ಏನಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ. (ಈ ಸುದ್ದಿಯನ್ನು ಜೀ ಕನ್ನಡ ನ್ಯೂಸ್‌ ಖಚಿತ ಪಡಿಸುವುದಿಲ್ಲ.)


ಇದನ್ನೂ ಓದಿ : ಸಂಗೀತಾ ಶೃಂಗೇರಿ ಜೊತೆ ಸ್ನೇಹಿತ್ ಮದುವೆ‌ ಫಿಕ್ಸ್‌.. ಇದು ಕುಟುಂಬದವರ ನಿರ್ಧಾರವಂತೆ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.