Cricketer Ambati Rayudu: ಬಿಗ್ ಬಾಸ್ ಕಾಲಕಾಲಕ್ಕೆ ವಿಭಿನ್ನತೆಗಳೊಂದಿಗೆ ಬರುತ್ತದೆ. ಪ್ರತಿ ಸೀಸನ್ ಅನ್ನು ವಿಶೇಷವಾಗಿಸಲು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದರ ಭಾಗವಾಗಿ ಬಿಗ್‌ ಬಾಸ್‌ ತಂಡ ಹೊಸ ರೀತಿಯ ಸ್ಪರ್ಧಿಗಳು ವಿಭಿನ್ನ ಟಾಸ್ಕ್ ಗಳನ್ನು ಪ್ಲಾನ್ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಪರ್ಧಿಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಹುಡುಕಾಟ ನಡೆಯುತ್ತದೆ. ಯಾರೂ ಊಹಿಸದ ವ್ಯಕ್ತಿ ಸ್ಪರ್ಧಿಯಾಗಿ ಬರುವ ಸಾಧ್ಯತೆ ಹೆಚ್ಚು. ಈ ಬಾರಿ ಬಿಗ್ ಬಾಸ್ ನಲ್ಲಿ ಸ್ಟಾರ್ ಕ್ರಿಕೆಟಿಗರೊಬ್ಬರು ಸದ್ದು ಮಾಡಲಿದ್ದಾರಂತೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಆ ಸ್ಟಾರ್ ಕ್ರಿಕೆಟಿಗ ಯಾರು..?


COMMERCIAL BREAK
SCROLL TO CONTINUE READING

ಬಿಗ್ ಬಾಸ್ ತೆಲುಗು ಸೀಸನ್ 8 ಈಗಾಗಲೇ ಶುರುವಾಗಿದೆ. ದೊಡ್ಮನೆಗೆ ಸ್ಪರ್ಧಿಗಳು ಸಹ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ತಂಡವು ಅಚ್ಚರಿಯ ವ್ಯಕ್ತಿಗಳನ್ನು ಮನೆಗೆ ಕರೆತಂದಿದೆ. ಇದರ ನಡುವೆ ಸ್ಟಾರ್‌ ಕ್ರಿಕೆಟಿಗರೊಬ್ಬರು ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. 


ಸ್ಟಾರ್ ಕ್ರಿಕೆಟಿಗ ಅಂಬಾಟಿ ರಾಯುಡು ಬಿಗ್‌ ಬಾಸ್‌ ಮನೆಗೆ ಬರುತ್ತಾರೆ ಎಂಬ ವಿಚಾರ ಈ ಹಿಂದೆಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕ್ರಿಕೆಟ್ ಪ್ರೇಮಿಗಳನ್ನೂ ಬಿಗ್ ಬಾಸ್ ಕಡೆಗೆ ತಿರುಗಿಸುವ ರೀತಿಯಲ್ಲಿ ತೆಲುಗು ಸ್ಟಾರ್ ಕ್ರಿಕೆಟಿಗ ಕಮ್ ರಾಜಕಾರಣಿಯನ್ನು ಅಂಬಾಟಿ ರಾಯುಡು ಈ ಬಾರಿ ಬಿಗ್‌ ಬಾಸ್‌ಗೆ ಸೀಸನ್ ಬರುತ್ತಾರೆ ಎನ್ನಲಾಗಿತ್ತು. ಆದರೆ ಬರಲಿಲ್ಲ. ಇದೀಗ ಮತ್ತೆ ಈ ಸುದ್ದಿ ಮುನ್ನೆಲೆಗೆ ಬಂದಿದೆ. ವೈಲ್ಡ್‌ ಕಾರ್ಡ್‌ ಮೂಲಕ ಅಂಬಾಟಿ ರಾಯುಡು ಬಿಗ್‌ ಬಾಸ್‌ ಮನೆ ಸೇರುತ್ತಾರಾ ಎಂಬ ಅನುಮಾನ ವೀಕ್ಷಕರ ಮನದಲ್ಲಿ ಮೂಡಿದೆ.


ಇದನ್ನೂ ಓದಿ: ಆ ನಟನ ಜೊತೆ ಸಾಯಿ ಪಲ್ಲವಿ... ಈ ಸುದ್ದಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್‌ ಗೆ ಬಿಗ್‌ ಸರ್‌ಪ್ರೈಸ್


ಕ್ರಿಕೆಟ್ ಅಭಿಮಾನಿಗಳ ಜೊತೆಗೆ ಅಂಬಾಟಿ ಅಭಿಮಾನಿಗಳೂ ಬಿಗ್ ಬಾಸ್ ಕಡೆಗೆ ಆಕರ್ಷಿತರಾದಂತಿದೆ. ಭಾರತದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರನ್ನು ಬಿಗ್ ಬಾಸ್ ಸ್ಪರ್ಧಿಯನ್ನಾಗಿ ಕರೆತರಲು ಬಿಗ್ ಬಾಸ್ 8 ತಂಡ ತೀವ್ರ ಪ್ರಯತ್ನ ನಡೆಸುತ್ತಿದೆಯಂತೆ.


ಅಂಬಾಟಿ ರಾಯುಡು ಈಗ ಸ್ಟಾರ್ ಕ್ರಿಕೆಟರ್ ಮಾತ್ರವಲ್ಲ.. ರಾಜಕಾರಣಿಯೂ ಆಗಿದ್ದಾರೆ.. ರಾಯುಡು ತಮ್ಮ ಕ್ರಿಕೆಟ್ ಬದುಕಿಗೆ ಸಂಪೂರ್ಣವಾಗಿ ವಿದಾಯ ಹೇಳಿ ರಾಜಕೀಯ ಎಂಟ್ರಿ ಕೊಟ್ಟಿದ್ದಾರೆ. ಅಂಬಟಿ ರಾಯುಡು ಅವರನ್ನು ಬಿಗ್ ಬಾಸ್‌ಗೆ ಆಯ್ಕೆ ಮಾಡಲು ಕೆಲವು ಕಾರಣಗಳಿವೆ. ಆಟದಲ್ಲಿ ತುಂಬಾ ಆಕ್ರಮಣಕಾರಿ ಸ್ವಭಾವ.. ಅಷ್ಟೇ ಅಲ್ಲ ನೇರ ಮಾತು.. ಮುಖದ ಮೇಲೆ ಹೇಳುವ ಅಭ್ಯಾಸ. 


ಅಷ್ಟೇ ಅಲ್ಲ ರಾಯುಡು ಅವರಂತಹ ಅಗ್ರೆಸ್ಸಿವ್ ಮೆಂಬರ್ ಮನೆಯಲ್ಲಿದ್ದರೆ ಬಿಗ್ ಬಾಸ್ ಸೀಸನ್ 8 ರಸಭರಿತವಾಗಲಿದೆ ಎಂದು ತಂಡ ಭಾವಿಸಿದೆ. ಅದಕ್ಕಾಗಿಯೇ ಅಂಬಾಟಿಯವರಿಗೆ ಭಾರಿ ಸಂಭಾವನೆ ನೀಡಿ ಮನೆಗೆ ಬರಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಹಾಗೊಂದು ವೇಳೆ ಬಂದರೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೈಲ್ಡ್‌ ಕಾರ್ಡ್‌ಮೂಲಕ ಕ್ರಿಕೆಟರ್‌ ಬಿಗ್‌ ಬಾಸ್‌ ಮನೆ ಸೇರದಂತಾಗುತ್ತದೆ. ಬಿಗ್ ಬಾಸ್ ನ ದಾಳ ಎಷ್ಟರ ಮಟ್ಟಿಗೆ ಫಲ ನೀಡುತ್ತದೋ ಕಾದು ನೋಡೋಣ.


ಇದನ್ನೂ ಓದಿ: ಖಾಸಗಿ ಫೋಟೋ ಲೀಕ್‌ ಬಗ್ಗೆ ಕಣ್ಣೀರಿಡುತ್ತಲೇ ಸ್ಪಷ್ಟನೆ ನೀಡಿದ ನಟ ವರುಣ್‌ ಆರಾಧ್ಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.