Nani on Venkatesh maha : ಕನ್ನಡದ ಕೆಜಿಎಫ್‌ ಸಿನಿಮಾದ ಬಗ್ಗೆ ಇತೀಚಿಗೆ ಸಾಕಷ್ಟು ನಿರ್ದೇಶಕರು ಹಾಸ್ಯವಾಗಿ ಮಾತನಾಡಿದ್ದರು. ತೆಲುಗು ನಿರ್ದೇಶಕ ವೆಂಕಟೇಶ್‌ ಮಹಾ ಕೂಡ ಕೆಲುವು ಅವಹೇಳನ ಪದಗಳನ್ನು ಬಳಸಿ ತೀರಾ ಕೆಳಮಟ್ಟಕ್ಕಿಳಿದು ಮಾತನಾಡಿದ್ದರು. ಇದಕ್ಕೆ ಕೆಜಿಎಫ್‌ ಮತ್ತು ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಮಹಾ ವಿರುದ್ಧ ಗುಡುಗಿದ್ದರು. ಇದೀಗ ನ್ಯಾಚುರಲ್‌ ಸ್ಟಾರ್‌ ನಾನಿ ಸಹ ಡೈರೆಕ್ಟರ್‌ ಮಹಾ ಸೇರಿದಂತೆ ಅಂದು ನಕ್ಕಿದ್ದ ಎಲ್ಲಾ ನಿರ್ದೇಶಕರ ಕುರಿತು ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ತಮ್ಮ ಮುಂಬರುವ ಸಿನಿಮಾ ದಸರಾ ಕುರಿತು ಸಂದರ್ಶನ ನೀಡಿದ ಅವರು, ಈ ವೇಳೆ ಅವರು ಕೆಜಿಎಫ್‌ ಕುರಿತು ಹಾಸ್ಯ ಮಾಡಿದ್ದ ನಿರ್ದೇಶಕರ ಕುರಿತು ಮಾತನಾಡಿದರು. ಐವರು ನಿರ್ದೇಶಕರ ಪೈಕಿ ನಾಲ್ವರು ನನ್ನ ನಿರ್ದೇಶಕರು, ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ ಆದರೆ ಹಾಗೆ ಮಾತನಾಡುವುದು ತಪ್ಪು.. ಅವರು ನಿರ್ದೇಶಕರಂತೆ ಮಾತನಾಡಬೇಕಿತ್ತು. ಅದು ಬಿಟ್ಟು ಥಿಯೇಟರ್ ಹೊರಗೆ ಜನ ಮಾತನಾಡುವಂತೆ ಮಾತನಾಡಿದ್ದಾರೆ. ಅದು ಸರಿಯಲ್ಲ ಎಂದು ಹೇಳಿದರು.


Aman Dhaliwal : ನಟನ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ..! ರಕ್ತ ಸುರಿಯುತ್ತಿದ್ದರೂ ಶತ್ರುವನ್ನು ಬಿಡಲಿಲ್ಲ


ಸದ್ಯ ನಟ ಸ್ಟಾರ್‌ ನಾನಿ ತಮ್ಮ ಮುಂಬರುವ ಸಿನಿಮಾ ದಸರಾ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಈ ಕುರಿತು ಫೋಟೋಸ್‌ ವೈರಲ್‌ ಆಗಿದ್ದವು. ಮಾರ್ಚ್ 30ರಂದು ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ತೆರೆಗೆ ಅಪ್ಪಳಿಸಲಿದೆ. ʼದಸರಾʼ ಸಿನಿಮಾದಲ್ಲಿ ನಾನಿ ಜೊತೆ ಕೀರ್ತಿ ಸುರೇಶ್ ನಟಿಸಿದ್ದಾರೆ.  


ಈಗಾಗಲೇ ದಸರಾ ಚಿತ್ರದ ಸಾಂಗ್‌ಗಳು ಬಿಡುಗಡೆಯಾಗಿ ಹಿಟ್‌ ಆಗಿವೆ. ಈ ಚಿತ್ರದಲ್ಲಿ ನಾನಿ ಸಖತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್‌ ಕೂಡ ಹಳ್ಳಿಯ ಹುಡುಗಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ದಸರಾದಲ್ಲಿ ಕನ್ನಡದ ʼದಿಯಾʼ ಸಿನಿಮಾದ ನಟ ದೀಕ್ಷಿತ್ ಶೆಟ್ಟಿ ಕೂಡ ನಟಿಸಿದ್ದಾರೆ. 'ದಸರಾ' ಸಿನಿಮಾವು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.