ಮುಂಬೈ: ಲತಾ ಮಂಗೇಶ್ಕರ್ (Lata Mangeshkar) ಅವರ ಅಂತ್ಯಕ್ರಿಯೆಗೆ ಆಗಮಿಸಿದ ಶಾರುಖ್ ಖಾನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ವಾಸ್ತವವಾಗಿ, ಶಾರುಖ್ ಖಾನ್ ಅವರು ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ಫತೇಹ್ ಓದಿದರು. ಬಳಿಕ ಮಾಸ್ಕ್ ತೆಗೆದು ಪ್ರಾರ್ಥಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಾರ್ಥನೆಯನ್ನು 'ಉಗುಳಿದ್ದಾರೆ' ಎಂದು ಕರೆಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಬಾಲಿವುಡ್ ನಟನ ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಬಿಜೆಪಿ ನಾಯಕ ಅರುಣ್ ಯಾದವ್ ಅವರು ಶಾರುಖ್ ಖಾನ್ (Shahrukh Khan) ನಿಜವಾಗಿಯೂ ಉಗುಳಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.


 


ಕಾಶ್ಮೀರದ ಕುರಿತು ಪಾಕಿಸ್ತಾನಿ ಡೀಲರ್‌ನ ವಿವಾದಾತ್ಮಕ ಪೋಸ್ಟ್‌... 'ಭಾರತ ನಮ್ಮ ಎರಡನೇ ಮನೆ' ಎಂದ Hyundai


ಹರಿಯಾಣ ಬಿಜೆಪಿಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅರುಣ್ ಯಾದವ್ ಅವರು ಶಾರುಖ್ ಅವರ ಈ ವಿಡಿಯೋ (Viral Video) ಬಗ್ಗೆ ಟ್ವೀಟ್ ಮಾಡಿದ್ದು, ಅದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಅನೇಕ ಜನರು ಶಾರುಖ್ ಅವರನ್ನು ಟೀಕಿಸಿದ್ದಾರೆ.  


ರಾಜಕೀಯವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತೀರಿ?


ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ (Congress) ನಾಯಕ ಶ್ರೀನಿವಾಸ್, "ಬಿಜೆಪಿಯಲ್ಲಿರುವ ಎಲ್ಲಾ ನಾಯಕರೇ, ನಿಮ್ಮಲ್ಲಿ ಆತ್ಮಸಾಕ್ಷಿಯ ಧ್ವನಿ ಜೀವಂತವಾಗಿದೆಯೇ ಅಥವಾ ಅಡಮಾನವಿಟ್ಟು ಬಂದಿದ್ದೀರಾ? ಅಂತ್ಯಕ್ರಿಯೆಯಲ್ಲಿ ತೆಗೆದ ಮಾನವೀಯತೆಯ ಈ ಅತ್ಯಂತ ಸುಂದರವಾದ ಚಿತ್ರದ ಕುರಿತು ವಿಷಪೂರಿತ ವ್ಯಂಗ್ಯವನ್ನು ಬೆಂಬಲಿಸುವ ಮೂಲಕ ನೀವು ರಾಜಕೀಯವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತೀರಿ?" ಎಂದಿದ್ದಾರೆ.


 


7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ! ಘೋಷಣೆ ಯಾವಾಗ?


ವಿಡಿಯೋವನ್ನು ಹೊರತುಪಡಿಸಿ, ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ (Pooja Dadlani) ಅವರ ಚಿತ್ರವು ಸಹ ಸಾಕಷ್ಟು ವೈರಲ್ ಆಗುತ್ತಿದೆ. ಚಿತ್ರದಲ್ಲಿ, ಶಾರುಖ್ ಖಾನ್ ಪ್ರಾರ್ಥನೆ ಮಾಡುತ್ತಿರುವಾಗ ಪೂಜಾ ಕೈಮುಗಿದು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.