ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ ರವರಿಗೆ ಯುವಕರು ಮಾತ್ರವಲ್ಲದೇ ಎಲ್ಲಾ ವರ್ಗದ ಜನರಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ʼಡಿ ಬಾಸ್‌ʼ ಮೇಲೆ ವಿಭಿನ್ನ ರೀತಿಯಲ್ಲಿ ಅಭಿಮಾನ ತೋರುವುದನ್ನು ನಾವು ನೋಡಬಹುದು.


COMMERCIAL BREAK
SCROLL TO CONTINUE READING

ಇಂದಿಗೂ ಅವರ ಭೇಟಿಗಾಗಿ ಅದೆಷ್ಟೂ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ 14 ವರ್ಷದಿಂದ ನಟ ದರ್ಶನ್‌ ಭೇಟಿಗಾಗಿ ಕಾದು ಪರಿತಪಿಸಿ ಖಿನ್ನತೆಗೆ ಜಾರಿದ್ದ ಅಭಿಮಾನಿಗೆ ಕೊನೆಗೂ ದಾಸನ ಭೇಟಿಯಾಗಿರುವ ಕಥೆ ಇಲ್ಲಿದೆ.


ಇದನ್ನೂ ಓದಿ: Hit Songs: ಇಲ್ಲಿವೆ ನೋಡಿ ಮಳೆಗಾಲದಲ್ಲಿ ಮನಸ್ಸಿಗೆ ಮುದ ನೀಡುವ ಹಾಡುಗಳು; ಆಲಿಸಿ .. ಆನಂದಿಸಿ..!


ಡಿ ಬಾಸ್‌ ಎಂದರೆ ಒಂದು ಕ್ರೇಜ್‌. ಅಪಾರ ಅಭಿಮಾನಿ ಬಳಗ ಹೊಂದಿರುವ ಇವರಿಗೆ  ಶಿವಮೊಗ್ಗ ಹೊಸಪೇಟೆಯ ರಿಪ್ಪನ್ ಪೇಟೆಯ ಸುದೀಪ್ ಕೂಡ ಬ್ಬರು. ಅಭಿಮಾನಿ ಸುದೀಪ್‌ ತಾನು ಆರನೇ ತರಗತಿಯಿಂದ ಡಿ ಬಾಸ್ ಸಿನಿಮಾಗಳನ್ನು ನೋಡಿ ಅವರ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅಭಿಮಾನ ಮಾತ್ರವಲ್ಲ ತನ್ನ ನೆಚ್ಚನ ನಟನನ್ನು ನೋಡಲೇಬೆಕೆಂದು ಆಸೆ ಹೊತ್ತಿದ್ದ ಅಭಿಮಾನಿ ಖಿನ್ನತೆಗೆ ಜಾರಿದ್ದರು. 


ಅದೆಷ್ಟೋ ಸಾರಿ ಅಭಿಮಾನಿ ಸುದೀಪ್ ಆರಾಧ್ಯ ದೈವ ದರ್ಶನಕ್ಕಾಗಿ, ನೋಡೊಕೆ ಹೋಗ್ತೀನಿ ಎಂದು ಹೇಳಿ ಬಟ್ಟೆ ತಗೊಂಡು ಮನೆ ಬಿಟ್ಟು ಹೊರಟುಬಿಡುತ್ತಿದ್ದನಂತೆ. ಬಸ್ಸು, ರೈಲು ಏರಿ ಬೆಂಗಳೂರಿಗೆ ಬರುತ್ತಿದ್ದಂತೆ. ಮನೆಯ ಬಳಿ , ಚಿತ್ರಿಕರಣ ಸ್ಥಳದ ಬಳಿ ಹೋದಾಗ ಅವರನ್ನು ಭೇಟಿ ಮಾಡುವ ಅವಕಾಶವೇ ಸಿಕ್ಕುತ್ತಿರಲಿಲ್ಲವೆಂದು ಕುಗ್ಗಿ ಹೋಗಿದ್ದರು.


Hamsalekha Birthday: ಸ್ಯಾಂಡಲ್ವುಡ್‌ ಗೆ ʼನಾದ ಬ್ರಹ್ಮʼ ಹಂಸಲೇಖರವರ ಕೊಡುಗೆ ಅಪಾರ; ಇಲ್ಲಿದೆ ನೋಡಿ ವಿವರ..!


ಕೊನೆಗೂ ಭೇಟಿಯ ಸಂತಸದ ಕ್ಷಣ ಬಂದಿದೆ. ಹೌದು, ಇತ್ತಿಚೇಗೆ ಮಡಿಕೇರಿ, ನಾಗರಹೊಳೆ, ಮೈಸೂರು ಪ್ರವಾಸ ವೇಳೆ 14 ವರ್ಷದಿಂದ ಕಾಯುತ್ತಿದ್ದ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಸದ್ಯ ಡಿ ಬಾಸ್ ಅಭಿಮಾನಿ ಸುದೀಪ್‌ ರವರಿಗೆ ಆರಾಧ್ಯ ದೈವನನ್ನು ನೇರವಾಗಿ ಮಾತಾನಾಡಿಸಿರುವ ಖುಷಿಗೆ ಪಾರವೇ ಇಲ್ಲದಂದಾಗಿದೆ. 
 https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.