ಬೆಂಗಳೂರು: ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟ ಚಂದನ್ ಕುಮಾರ್ ಇಂದು ಸಡನ್ ಆಗಿ ಸುದ್ದಿಯಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ತೆಲುಗಿನ ಧಾರವಾಹಿಯ ಶೂಟಿಂಗ್ ‌ನಲ್ಲಿರುವ ಚಂದನ್ ಶೂಟಿಂಗ್ ವೇಳೆ ಕ್ಯಾಮರ ಸಹಾಯಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಶ್ರೀಮತಿ ಶ್ರೀನಿವಾಸ್ ಧಾರವಾಹಿಯ ತಂತ್ರಜ್ಞ ನಟ ಚಂದನ್ ಕಪಾಳಕ್ಕೆ ಬಾರಿಸಿರೋ ವಿಡಿಯೋ ವೈರಲ್ ಆಗಿದೆ..ಅಷ್ಟಕ್ಕೂ ಶೂಟಿಂಗ್ ವೇಳೆ ನಡೆದ ಗಲಾಟೆಯಾದ್ರು ಏನು..ಚಂದನ್ ಮೇಲೆ ಹಲ್ಲೆ ಮಾಡಿದಾದ್ರು ಯಾಕೆ..? ಈ ಘಟನೆ ಬಗ್ಗೆ ಚಂದನ್ ಏನ್ ಹೇಳಿದ್ರು ಅಂತ ನೋಡೊಣ ಬನ್ನಿ.


ಲಕ್ಷ್ಮಿ ಬಾರಮ್ಮ ಧಾರವಾಹಿ ಖ್ಯಾತಿಯ ಚಂದನ್ ಕುಮಾರ್ ಕನ್ನಡ ಕಿರುತೆರೆ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ತೆಲಗಿನ ಹಿಟ್ ಧಾರವಾಹಿಗಳಲ್ಲಿ ಲೀಡ್ ರೋಲ್ ಪ್ಲೇ ಮಾಡುವ ಮೂಲಕ ತೆಲುಗು ನಾಡಲ್ಲೂ ಅಪರ ಅಭಿಮಾನಿಗಳ ಹೊಂದಿರುವ ಚಂದನ್ ಗೆ ಶೂಟಿಂಗ್ ವೇಳೆ ಅವರಿಗೆ ಕಪಾಳ ಮೋಕ್ಷ ಮಾಡಿರುವುದು ಈಗ ಸಾಕಷ್ಟು ವಿವಾದಕ್ಕೆ ಒಳಗಾಗಿದೆ.


ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?


ಹೌದು, ಜುಲೈ 31 ಅಂದ್ರೆ ನಿನ್ನೆ ಚಂದನ್, ಶ್ರೀಮತಿ ಶ್ರೀನಿವಾಸ್ ಧಾರವಾಹಿಯ ಶೂಟಿಂಗ್ ನಲ್ಲಿ ಭಾಗಿ ಯಾಗಿದ್ರು..ಅದ್ರೆ ಶೂಟಿಂಗ್ ವೇಳೆ ಸಣ್ಣ ಕಿರಿಕ್ ಆಗಿದ್ದು, ಆ ಗಲಾಟೆ ಬಗ್ಗೆ  ಸೀರಿಯಲ್ ಟೀಮ್ ಜೊತೆ ಮಾತನಾಡುವ ವೇಳೆ ಏಕಾಏಕಿ ಶ್ರೀ ಮತಿ ಶ್ರೀನಿವಾಸ ಧಾರಾವಾಹಿಯ ತಂತ್ರಜ್ಞ ಚಂದನ್ ಕಪಾಳಕ್ಕೆ ಬಾರಿಸಿದ್ದಾನೆ.. ಅಷ್ಟಕ್ಕೂ ಚಂದನ್ ಮೇಲೆ ಆತ ಹಲ್ಲೆ ಮಾಡೋಕೆ ಕಾರಣ ಏನಪ್ಪ ಅಂದ್ರೆ ಚಂದನ್ ಶೂಟಿಂಗ್ ವೇಳೆ ಕ್ಯಾಮರಮ್ಯಾನ್  ಅಸಿಸ್ಟೆಂಟ್ ಗೆ ಹೊಡಿದಿದ್ರು..ಅಲ್ಲದೆ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿದ್ದಾರೆ ಎಂದು ಧಾರವಾಹಿ ತಂಡ ಆರೋಪಿಸಿದೆ.ಹೈದರಾಬಾದ್‌ಗೆ ಶೂಟಿಂಗ್‌ಗೆ ಬಂದಿದ್ದೆ. ಆದರೆ ಇಲ್ಲಿ ಸರಿಯಾಗಿ ಶೂಟಿಂಗ್ ಕೂಡ ನಡೆದಿರಲಿಲ್ಲ. ತಲೆ ನೋವು ಬೇರೆ ಇತ್ತು. ಹಾಗಾಗಿ, ಸೆಟ್‌ನಲ್ಲಿದ್ದವರಿಗೆ ಹೇಳಿಯೇ ಮಲಗಿದ್ದೆ. ಅಸಿಸ್ಟೆಂಟ್ ಡೈರೆಕ್ಟರ್ ಸ್ವಲ್ಪ ತರಲೆ. ಹತ್ತು ನಿಮಿಷಕ್ಕೊಮ್ಮೆ ಬಂದು ಕರೀತಾ ಇದ್ದ. ಬಂದೆ ಬಂದೆ ಅಂತ ಹೇಳ್ತಾನೇ ಇದ್ದೆ. ಆದರೆ ಅವನು, ಐದು ನಿಮಿಷ ಅಂತ 30 ನಿಮಿಷ ಆಯ್ತು ಎಬ್ಬಿಸೋ ಅವ್ನ ಅಂತ ಜೋರಾಗಿ ಹೇಳಿದ. ನನಗೆ ಅದು ಕೇಳಿಸ್ತು. ಆಗ ಯಾಕಪ್ಪ ಹೀಗೆಲ್ಲ ಏಕವಚನದಲ್ಲಿ ಮಾತಾಡ್ತಿಯಾ' ಅಂತ ಸ್ವಲ್ಪ ತಳ್ಳಿದೆ ಅಷ್ಟೇ. ಅದನ್ನೇ ಡೈರೆಕ್ಟರ್ ಬಳಿ ನಂಗೆ ಹೊಡೆದ..' ಅಂತ ಅವನು ಹೇಳಿದ. ಯಾರ್ ಯಾರನ್ನೋ ಕರೆಸಿ, ಗಲಾಟೆ ಮಾಡಿಸಿದ. ಅದು ಏನೇನೋ ಆಯ್ತು. ನನ್ನ ಮೇಲೆಯೂ ಅವನು ಹಲ್ಲೆ ಮಾಡಿದ. ನನ್ನ ಜೊತೆಗೆ ತಮ್ಮನ ಥರ ಇದ್ದ. ತುಂಬ ಸಲುಗೆಯಿಂದ ಇದ್ದ ಅವನು. ಈ ಥರ ಮಾಡಿದ್ದು ನನಗೂ ಬೇಜಾರು ಆಯಿತು ಎಂದು ಚಂದನ್ ಹೇಳಿದ್ದಾರೆ.


ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ನಟ ಚಂದನ್‌ಗೆ ಕಪಾಳ ಮೋಕ್ಷ..!


ನಂಗೆ ರೆಸ್ಟ್ ಬೇಕು ಅಂತ ನಾನು ಮಲಗಿದ್ದೆ. ಆ ಸಂದರ್ಭದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಐದು ನಿಮಿಷ ಮಲಗ್ತೀನಿ ಅಂತಾ ಹೇಳಿ30 ನಿಮಿಷ ಮಲಗಿದ್ದೀಯಾ ಎಂದು ಜೋರಾಗಿ ಕೂಗಾಡಿದ.ನಾನು ಅದನ್ನ ಕೇಳಿಸಿಕೊಂಡು ಆತನನ್ನ ಕರೆದು ಸಲುಗೆಯಿಂದಲೇ ಆಮೇಲೆ ಬರ್ತೀನಿ ಅಂತ ತಳ್ಳಿದ್ದೀನಿ.ಅದನ್ನೇ ಆತ ದೊಡ್ಡ ಮಟ್ಟದಲ್ಲಿ ಕ್ರಿಯೇಟ್ ಮಾಡಿ ಅಮ್ಮನಿಗೆ ಬೈದೆ ಅಂತ ಹಬ್ಬಿಸಿ ತೊಂದರೆ ಕೊಟ್ರು ಎಂದು ಕಿರುತೆರೆ ನಟ ಚಂದನ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಬೇಕು ಅಂತಲೇ ಇದನ್ನೆಲ್ಲಾ ಕ್ರಿಯೇಟ್ ಮಾಡಿ ಕನ್ನಡದ ನಟನಾದ ನನಗೆ ಅವಮಾನ ಮಾಡಿದ್ದಾರೆ.ನಾನು ಬೆಳೆಯುತ್ತಿದ್ದೀನಿ ಅಂತ ಹೀಗೆ ಮಾಡಿದ್ದಾರೆ.


ನಾನು ಆ ಹುಡುಗನ ಜೊತೆ ಪಾರ್ಟಿ ಮಾಡಿದ್ದೀನಿ ತುಂಬಾ ಕ್ಲೋಸ್ ಕೂಡ ಇದ್ದೆ.ಯಾಕೆ ಆತ ನನಗೆ ಹೀಗೆ ಮಾಡಿದ ಅನ್ನೋದು ಗೊತ್ತಿಲ್ಲ.25 ನಿಮಿಷದ ವಿಡಿಯೋನ 2 ನಿಮಿಷ ಮಾಡಿ ಅದನ್ನ ಬೇಕು ಅಂತಲೇ ವೈರಲ್ ಮಾಡಿದ್ದಾರೆ.ನನ್ನನ್ನ ಅವರೆಲ್ಲಾ ಸುತ್ತುವರೆದು ತುಂಬಾ ಕೆಟ್ಟದಾಗಿ ಮಾತನ್ನಾಡಿದ್ದಾರೆ.ನಾನು ಕ್ಷಮೆ ಕೇಳಿದ್ದೀನಿ.ಈಗ ಅವರು ಕೂಡ ಕೇಳಲಿ, ಉದ್ದೇಶಪೂರ್ವಕವಾಗಿ ಕನ್ನಡದ ನಟನ ಮೇಲೆ ಟಾರ್ಗೆಟ್ ಮಾಡಿ ಅವಮಾನಿಸಿದ್ದಾರೆ, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಯಿದೆ ಎಂದು ಚಂದನ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.