Bigg Boss Kannada Season 9 :  ಬಿಗ್‌ ಬಾಸ್‌ ಹೌಸ್‌ ಅಂದ್ರೆ ಅದೊಂದ ಥರಾ ನವರಸಗಳ ಪಾಕದಂತೆ. ಅಲ್ಲಿ ನಗು, ಅಳು, ಜಗಳ, ಪ್ರೀತಿ ಎಲ್ಲವೂ ಇರುತ್ತದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಆರಂಭವಾಗಿ ಒಂದು ವಾರ ಕಳೆದಿದ್ದು, ಕಿಚ್ಚನ ಪಂಚಾಯ್ತಿ ಕೂಡ ಮುಗಿದಿದೆ. ವಾರದ ಕೊನೆಯಲ್ಲಿ ಬರುವ ಕಾರ್ಯಕ್ರಮದ ಹೋಸ್ಟ್‌ ಕಿಚ್ಚ ಸುದೀಪ್‌ ಒಂದು ವಾರ ಸ್ಪರ್ಧಿಗಳು ಆಡಿದ ಆಟದ ಬಗ್ಗೆ ಚರ್ಚಿಸುತ್ತಾರೆ. ಅಲ್ಲದೇ, ಒಂದಷ್ಟು ಸಲಹೆ, ಸೂಚನೆ ಜೊತೆಗೆ ಮೆಚ್ಚುಗೆಯನ್ನು ಸಹ ನೀಡುತ್ತಾರೆ. ಬಿಗ್‌ ಬಾಸ್‌ ಕಾರ್ಯಕ್ರಮದ ವೀಕೆಂಟ್‌ ಹೈಲೈಟ್ಸ್‌ ಅಂದ್ರೆ ಅದು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ. ವಾರ ಪೂರ್ತಿ ಸೂಪರ್‌ ಆಗಿ ಆಟ ಆಡುವ ಸ್ಪರ್ಧಿಗೆ ಇದು ಸಿಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ :  ಸಂಬರ್ಗಿ ನೋಡಿದಾಗಲೆಲ್ಲ ನನಗೆ ʼವಜ್ರಮುನಿʼಯವರು ನೆನಪಾಗ್ತಾರೆ..!


ನಿನ್ನೆ ಮೊದಲ ವಾರದ ಸೂಪರ್‌ ಸಂಡೇ ವಿತ್‌ ಸುದೀಪ್‌ ಮುಗಿದಿದ್ದು, ಒಬ್ಬರನ್ನು ಮನೆಯಿಂದ ಹೊರಗೆ ಕಳುಹಿಸಿ ಒಂದಷ್ಟು ಬುದ್ಧಿವಾದದ ಜೊತೆಗೆ ಮೆಚ್ಚುಗೆಯನ್ನು ಸುದೀಪ್‌ ನೀಡಿದ್ದಾರೆ. ಈ ವಾರ 12 ಜನ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದರು. ಅವರಲ್ಲಿ ಶನಿವಾರ 3 ಜನ ಸೇವ್‌ ಆಗಿದ್ದರು. ಬಳಿಕ ಉಳಿದ 9 ಜನರಲ್ಲಿ 8 ಜನರು ಸೇವ್‌ ಆಗಿದ್ದು, ಐಶ್ವರ್ಯ ಪಿಸ್ಸೆ ದೊಡ್ಮನೆಯಿಂದ ಹೊರಬಂದಿದ್ದಾರೆ. 


ಈ ವಾರ ಪೂರ್ತಿ ಸಂಬರ್ಗಿ ಅವರ ಜೊತೆ ಜೋಡಿಯಾಗಿ ಎಲ್ಲರನ್ನೂ ರಂಜಿಸಿ, ಬೇಕಾದಲ್ಲಿ ಅಗತ್ಯ ಬಿದ್ದಷ್ಟು ಮಾತನಾಡಿ ಅತ್ಯುತ್ತಮವಾಗಿ ಟಾಸ್ಕ್‌ ಆಡಿ ಮನೆಯ ಮೊದಲ ಕ್ಯಾಪ್ಟನ್‌ ಆಗಿರುವ ವಿನೋದ್‌ ಗೊಬ್ಬರಗಾಲ ಅವರು ಈ ವಾರದ ಕಿಚ್ಚ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದಾರೆ. 


ಇದನ್ನೂ ಓದಿ :  BBK 9 : ಬಿಗ್‌ಬಾಸ್‌ ಮನೆಯಿಂದ ಮೊದಲ ವಾರವೇ ಐಶ್ವರ್ಯ ಪಿಸ್ಸೆ ಔಟ್.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.