ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಮನೆಮಾಡಿದೆ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮುದ್ದು ಮಗನ ನಾಮಕರಣ ಶಾಸ್ತ್ರ ಇಂದು ನೆರವೇರಿತು. ದೊಡ್ಡ ಗೌಡರ ಮರಿ ಮೊಮ್ಮಗನಿಗೆ ಆವ್ಯನ್ ದೇವ್ ಎಂದು ಹೆಸರಿಡಲಾಗಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಜನಿಕಾಂತ್‌ ಜೊತೆ ತೆರೆ ಹಂಚಿಕೊಳ್ಳಲಿರುವ ಶಿವರಾಜ್‌ಕುಮಾರ್! ಯಾವ ಸಿನಿಮಾ? ಇಲ್ಲಿದೆ ನೋಡಿ...


ನಾಮಕರಣ ಶಾಸ್ತ್ರದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅಜ್ಜಿ-ತಾತನ ಕನಕಭಿಷೇಕ ನಡೆಯಿತು. ಮುತ್ತಾತನ ಜೊತೆ ನನ್ನ ಮಗನ ನಾಮಕರಣ ನೆರವೇರಿದ್ದು ಸಂತಸ ತಂದಿದೆ. ಆವ್ಯನ್ ಅಂದ್ರೆ ಗಣೇಶ ಮತ್ತು ವಿಷ್ಣುವಿನ ಹೆಸರು. ಹೆಸರನ್ನು ಫೈನಲ್ ಮಾಡಿದ್ದು ನನ್ನ ಪತ್ನಿ ರೇವತಿ. ನನ್ನ ಮಗ ಒಳ್ಳೆ ಪ್ರಜೆ ಆಗಲಿ. ಇಷ್ಟು ದಿನ ಜನರಿಗೆ ಮಗನ ಮುಖ ತೋರಿಸಿರಲಿಲ್ಲ. ಇವತ್ತು 9 ನೇ ತಿಂಗಳು, ಎಲ್ಲರು ಇಂದು ಆತನನ್ನು ನೋಡುತ್ತಿದ್ದಾರೆ. ಮಗನ ಇಚ್ಛೆ ಏನಿದೆ ಅದೇ ಆಗಲಿ ಎಂದು ಹೇಳಿದರು. 


ನಂತರ ಮಾತನಾಡಿದ ನಿಖಿಲ್‌ ಪತ್ನಿ ರೇವತಿ, ತುಂಬಾ ಖುಷಿ ಇದೆ. ಡ್ರೀಮ್ ಅಂತ ಏನಿಲ್ಲ, ಅವನ ಇಷ್ಟ. ತುಂಬಾ ಆಕ್ಟಿವ್ ಆಗಿರುತ್ತಾನೆ. ನನ್ನ ಮಗ ಚೆನ್ನಾಗಿ ಓದಲಿ ಅನ್ನೋದೆ ನಮ್ಮ ಆಸೆ ಎಂದು ಹೇಳಿದರು. 


ಇದನ್ನೂ ಓದಿ: 777 ಚಾರ್ಲಿ.. ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಪ್ರೀಮಿಯರ್‌ ಶೋ! 


ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ನಡೆಯಿತು. ನಾಮಕರಣಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ವಿವಿಧ ಹೂಗಳಿಂದ ಬೆಳ್ಳಿ ತೊಟ್ಟಿಲನ್ನು ಸಿಂಗರಿಸಲಾಗಿತ್ತು. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಜರುಗಿತು. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿಸಲಾಯಿತು. 


ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 9 ತಿಂಗಳು ತುಂಬಿರುವ ಹಿನ್ನೆಲೆ ನಿಖಿಲ್‌ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲಾಯಿತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.