Kichha Sudeep : ಬುಧವಾರ ನಟ ಸುದೀಪ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದ್ದರು. ಈ ಹೇಳಿಕೆಗೆ ಸಾಕಷ್ಟು ಜನರ ವಿರೋಧ ವ್ಯಕ್ತವಾಗಿದೆ. ಹೆಚ್ಚಾಗಿ ಸುದೀಪ್‌ ಅಭಿಮಾನಿಗಳಿಗೆ ಈ ವಿಚಾರವಾಗಿ ಬೇಸರ ಉಂಟಾಗಿರುವುದಂತೂ ನಿಜ. ಇನ್ನು ಸುದೀಪ್ ಬಿಜೆಪಿ ಪಕ್ಷ ಸೇರುವುದಿಲ್ಲ ಎನ್ನುವ ಭರವಸೆಯಲ್ಲಿದ್ದ ಪ್ರಕಾಶ್‌ ರಾಜ್‌ಗೂ ಇದು ಶಾಕ್ ತಂದಿತ್ತು. ಕೂಡಲೇ ಟ್ವೀಟ್‌ಗಳ ಮೂಲಕ ಇದಕ್ಕೆ ಬೇಸರ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎನ್ನುವ ಗುಸುಗುಸು ಕೇಳಿ ಬಂದಾಗ ಪ್ರಕಾಶ್ ರಾಜ್ ಅದೆಲ್ಲಾ ಸುಳ್ಳು, "ನಮ್ಮ ಕಿಚ್ಚ ಮಾರಿಕೊಳ್ಳುವವರು ಅಲ್ಲ" ಎಂದು ಟ್ವೀಟ್ ಮಾಡಿದ್ದರು. ಇದೀಗ ಕಿಚ್ಚ ಸುದೀಪ್‌ ನಡೆಯಿಂದಾಗಿ ಪ್ರಕಾಶ್‌ ರಾಜ್‌ ಸಾಲು ಸಾಲು ಟ್ವೀಟ್‌ಗಳ ಮೂಲಕ ಕಿಚ್ಚ ಸುದೀಪ್‌ ಅವರಿಗೆ ಟಾಂಗ್‌ ನೀಡುತ್ತಿದ್ದಾರೆ. ಮೊದಲಿಗೆ ಪ್ರಕಾಶ್‌ ರಾಜ್‌ "ಪ್ರೀತಿಯ ಸುದೀಪ್.. ಎಲ್ಲರೂ ಪ್ರೀತಿಸುವ ಕಲಾವಿದರಾಗಿ.. ನೀವು ಜನರ ಧ್ವನಿಯಾಗುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ನೀವು ರಾಜಕೀಯ ಪಕ್ಷದೊಂದಿಗೆ ಬಣ್ಣ ಹಚ್ಚಲು ಆಯ್ಕೆ ಮಾಡಿಕೊಂಡಿದ್ದೀರಿ..#justasking" ಎಂದು ಟ್ವೀಟ್‌ ಮಾಡಿದ್ದರು. 


ಇದನ್ನೂ ಓದಿ-ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣ : ಕಾರು ಚಾಲಕನ ಮೇಲೆ ಅನುಮಾನ!


ಬಿಜೆಪಿ ಬೆಂಬಲಿಸುತ್ತೇನೆಂಬ ಕಿಚ್ಚನ ಹೇಳಿಕೆಯಿಂದ ಬೇಸರಗೊಂಡ ಪ್ರಕಾಶ್‌ ರಾಜ್‌ ..!