Puneeth Rajkumar Tweet : ಅಪ್ಪು ಈ ಹೆಸರು ಕನ್ನಡಿಗರಿಗೆ ಅಚ್ಚುಮೆಚ್ಚು. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಪುನೀತ್‌ ಅಂದ್ರೆ ಇಷ್ಟ. ಆದರೆ ಒಂದು ವರ್ಷದ ಹಿಂದೆ ಈ ಯುವರತ್ನ ಎಲ್ಲರನ್ನೂ ಅಗಲಿದರು. ಆ ನೋವು ಇಂದಿಗೂ ಕಾಡುತ್ತಿದೆ. ಇದೀಗ ಪುನೀತ್ ಅವರ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಡಾಕ್ಯುಮೆಂಟರಿ ನಾಳೆ ಬಿಡುಗಡೆಯಾಗಲಿದೆ. ಈ ಸಾಕ್ಷ್ಯಚಿತ್ರ ವೀಕ್ಷಿಸಲು ಎಲ್ಲರೂ ಕಾದು ಕುಳಿತಿದ್ದಾರೆ. ಇಂದು ಹಲವು ಕಡೆಗಳಲ್ಲಿ ಗಂಧದ ಗುಡಿ ಪ್ರೀಮಿಯರ್ ​ಶೋಗಳನ್ನು ಆಯೋಜಿಸಲಾಗಿದ್ದು, ಟಿಕೆಟ್‌ಗಳು ಸಹ ಸೋಲ್ಡ್​ಔಟ್ ಆಗಿವೆ. ಈ ಎಲ್ಲದರ ಮಧ್ಯೆ ಪುನೀತ್ ರಾಜ್‌ ಕುಮಾರ್‌ ಮಾಡಿದ್ದ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ.. ತೆಲುಗು ನಿರ್ದೇಶಕನ ಸಿನಿಮಾಗೆ ಗ್ರೀನ್ ಸಿಗ್ನಲ್!


ಪುನೀತ್ ರಾಜ್‌ ಕುಮಾರ್ ಕೇವಲ ನಟನೆ ಮಾತ್ರವಲ್ಲದೆ ಅನೇಕ ಸಿನಿಮಾಗಳನ್ನು ನಿರ್ಮಾಣ ಸಹ ಮಾಡುತ್ತಿದ್ದರು. ಹಲವು ಸಿನಿಮಾಗಳು ಇವರ ಪಿಆರ್‌ಕೆ ಬ್ಯಾನರ್‌ ಅಡಿ ನಿರ್ಮಾಣವಾಗಿವೆ. ಕೇವಲ ಸಿನಿರಂಗ ಮಾತ್ರವಲ್ಲದೇ ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನೆ, ಮನದೊಳಗೆ ನೆಲೆಸಿದವರು. ನಾಡು, ನುಡಿ ಮೇಲೆ ಅಪಾರ ಅಭಿಮಾನ ಹೊಂದಿದ್ದ ಪುನೀತ್‌ ಕರುನಾಡ ವನ್ಯಜೀವಿಗಳ ಬಗ್ಗೆ ಇಡೀ ಜಗತ್ತಿಗೆ ತಿಳಿಸುವ ಮಹತ್ವದ ಪ್ರಾಜೆಕ್ಟ್‌ ಒಂದಕ್ಕೆ ಕೈ ಹಾಕಿದ್ದರು. ಅದೇ ಗಂಧದ ಗುಡಿ. ಕಳೆದ ವರ್ಷ ಇದೇ ದಿನ ಅಂದರೆ ಅಕ್ಟೋಬರ್ 27, 2021 ರಂದು ಪುನೀತ್‌ ಈ ಬಗ್ಗೆ ಟ್ವಿಟರ್‌ನಲ್ಲಿ ಒಂದು ಅಪ್​ಡೇಟ್ ನೀಡಿದ್ದರು. ಇದೀಗ ಆ ಟ್ವೀಟ್‌ ಎಲ್ಲೆಡೆ ವೈರಲ್‌ ಆಗುತ್ತಿದೆ. 


"ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. " ಎಂದು ಪುನೀತ್‌ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. 


 


Gandhadagudi: ‘ಗಂಧದ ಗುಡಿ’ ಪ್ರೀ ಬುಕಿಂಗ್ ಆರಂಭ, ಇಂದೇ ಟಿಕೆಟ್ ಬುಕ್ ಮಾಡಿ


ನವೆಂಬರ್ 1 ರಂದು ವಿಶೇಷ ಘೋಷಣೆ ಮಾಡುವ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ವಿಧಿಯಾಟ ಎಂಬಂತೆ ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದಾಗಿ ನಮ್ಮೆಲ್ಲರನ್ನೂ ಅಗಲಿದರು. ಮನೆಯ ಮಗನನ್ನು ಕಳೆದುಕೊಂಡ ಚಿತ್ರರಂಗ ಬಡವಾಯಿತು. ಆದರೆ ಇದೀಗ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ನಾಳೆ ರಿಲೀಸ್ ಆಗುತ್ತಿದೆ. ಅಪ್ಪುವನ್ನು ಬೆಳ್ಳಿ ಪರದೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.