ಕನ್ನಡ ಚಿತ್ರರಂಗ ಕಂಡ ಅಸಾಧಾರಣ ಪ್ರತಿಭೆ, ಕರುನಾಡಿನ ನಮ್ಮೆಲ್ಲರ ಪ್ರೀತಿಯ ನಟ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷ ಸಮೀಪವಾಗುತ್ತಿದೆ. ದಿನಗಳು ಉರುಳಿದರೂ ಅಪ್ಪು ನೆನಪು ಮಾತ್ರ ಮರೆಯಾಗುತ್ತಿಲ್ಲ. ಕೇವಲ ಕರುನಾಡು ಮಾತ್ರವಲ್ಲ, ದೇಶದ ಮೂಲೆ ಮೂಲೆಯಲ್ಲಿರುವ ಜನರು ಅಪ್ಪು ನೆನೆದು ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ಅವರ ಸಾಧನೆಗಳ ಮೂಲಕ, ಸಾಮಾಜಿಕ ಕಾರ್ಯಗಳನ್ನು ಮುಂದುವರೆಸುವ ಮೂಲಕ ಅಪ್ಪು ಅಭಿಮಾನಿಗಳು ಮತ್ತೆ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Filmfare Awards South 2022: ಫಿಲ್ಮ್‌ ಫೇರ್ ಅವಾರ್ಡ್ಸ್‌ಗೆ ನಾಮಿನೇಟ್‌ ಆದ ಕನ್ನಡ ಸಿನಿಮಾಗಳಿವು..


ಇದೀಗ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ತಮ್ಮ ಕಚೇರಿಯಲ್ಲಿ ಅಪ್ಪು ಅವರ ಪುತ್ಥಳಿಯನ್ನು ಇಟ್ಟಿದ್ದಾರೆ. ಪುನೀತ್ ಅವರು ಸ್ನೇಹ ಜೀವಿ ಎಂಬುದನ್ನು ಮತ್ತೆ ಮತ್ತೆ ಉಲ್ಲೇಖಿಸುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ಬಾಳಿ ಬದುಕಿದ ರೀತಿಯೇ ಅಂತಹದ್ದು. ಪರಭಾಷೆಯಾಗಲಿ, ಯಾರೇ ಆಗಲಿ ಬಳಿ ಬಂದವರನ್ನು ಆದರದಿಂದ ಪ್ರೀತಿಸುವ ಗುಣ ಅಪ್ಪು ಅವರದ್ದು.


ʼಸೂತ್ರಧಾರಿʼಯಾಗಲು 12 ಕೆಜಿ ತೂಕ ಇಳಿಸಿದ ಚಂದನ್ ಶೆಟ್ಟಿ...!


ನಟ ರಾಣಾ ಫೋಟೋ ಹಂಚಿಕೊಂಡಿದ್ದನ್ನು ನೋಡಿದ ಅಪ್ಪು ಅಭಿಮಾನಿಗಳು ಮತ್ತು ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಅಪ್ಪು ಕನಸಿನ ಕೂಸು ‘ಗಂಧಧ ಗುಡಿ’ ಸಾಕ್ಷ್ಯ ಚಿತ್ರ ಅಕ್ಟೋಬರ್ 28 ರಿಂದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳ ಕುರಿತಾದ ಈ ಡಾಕ್ಯುಮೆಂಟರಿ ಥಿಯೆಟರ್ ಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ