ಬೆಂಗಳೂರು: ‘ಅಪ್ಪು’ ಬಗ್ಗೆ ಎಷ್ಟೂ ಮಾತಾಡಿದ್ರೂ, ಎಷ್ಟೂ ಬರೆದರೂ ಸಾಲಲ್ಲ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಯನದ ಕೊನೆಯ ಸಾಕ್ಷ್ಯಚಿತ್ರ ‘ಗಂಧದಗುಡಿ’ ಪ್ರಿ ರೀಲಿಸ್ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.


COMMERCIAL BREAK
SCROLL TO CONTINUE READING

ಈ ಕಾರ್ಯಕ್ರಮಕ್ಕೆ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡು ಸಾಕ್ಷಿಯಾಗಿದ್ದರು. ಈ ವೇಳೆ ‘ಅಪ್ಪು’ ಬಗ್ಗೆ ಮಾತನಾಡಿ ಸ್ಮರಿಸಿದ ಅನೇಕರು ಭಾವುಕರಾದರು. ‘ಅಪ್ಪು’ಗಾಗಿ ರಾಘವೇಂದ್ರ ಅವರು ರಾಜ್‍ಕುಮಾರ್ ‘ಬಾನ ದಾರಿಯಲ್ಲಿ ಜಾರಿ ಹೋದ’ ಹಾಡು ಹಾಡಿದರು. ಈ ಹಾಡನ್ನು ‘ಅಪ್ಪು’ಗೆ ಅಣ್ಣಾವ್ರು ಹೇಗೆ ಹಾಡಿಸಿದರು ಅನ್ನೋ ನೆನಪನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡರು.


ಇದನ್ನೂ ಓದಿ: Puneeth Parva: ‘ಪುನೀತ ಪರ್ವ’ದಲ್ಲಿ ಅಪ್ಪು ಡೈಲಾಗ್ ಹೊಡೆದ ನಟ ದೃವ ಸರ್ಜಾ ಹೇಳಿದ್ದೇನು?


ಇದೇ ವೇಳೆ ಶಿವಣ್ಣ 18ರ ಯುವಕನಂತೆ ವೇದಿಕೆ ಮೇಲೆ ಸೇಮ್ ಟು ಸೇಮ್ ‘ಅಪ್ಪು’ ತರ ನೃತ್ಯ ಮಾಡಿ ಎಲ್ಲರಿಗೂ ಖುಷಿ ಕೊಟ್ಟರು. ನಂತರ ಮಾತನಾಡಿದ ಅವರು, ‘1 ವರ್ಷ ಹೇಗೆ ಹೋಯಿತು ಅನ್ನೋದು ನೆಪಿಸಿಕೊಳ್ಳೋದೇ ಕಷ್ಟ. ನೋವಿನಲ್ಲೇ ವರ್ಷ ಕಳೆಯಿತು. ಎಲ್ಲಾ ಚಿತ್ರರಂಗದವರಿಗೆ, ಅಭಿಮಾನಿಗಳಿಗೆ ನೋವಿದೆ. ನಮ್ಮ ದುಃಖದಲ್ಲಿ ನೀವೆಲ್ಲಾ ಪಾಲ್ಗೊಂಡಿದ್ದು ನಮಗೆ ಧೈರ್ಯ ಮೂಡಿಸಿತು’ ಎಂದು ಹೇಳಿದರು.


ಅಪ್ಪಾಜಿ ಹಾಗೂ ನಾನು ‘ಗಂಧದಗುಡಿ’ ಸಿನಿಮಾ ಮಾಡಿದ್ದೇವು. ಇದೀಗ ‘ಅಪ್ಪು’ ಮಾಡಿದ್ದಾನೆ. ಕಾಡು ಎಷ್ಟು ಮುಖ್ಯ ಅಂತಾ ‘ಗಂಧದಗುಡಿ’ಯಲ್ಲಿ ನೀವೆಲ್ಲಾ ನೋಡಿ. ನನ್ನ ಡ್ಯಾನ್ಸ್ ಸೂಪರ್ ಎಂದು ಅಪ್ಪು ಹೇಳುತ್ತಿದ್ದ. ಆದರೆ ನಾನು ಅಪ್ಪು ಡ್ಯಾನ್ಸ್ ಫ್ಯಾನ್ ಎಂದು ಶಿವರಾಜ್ ಕುಮಾರ್ ಇದೇ ವೇಳೆ ಸ್ಮರಿಸಿದರು.


ಇದನ್ನೂ ಓದಿ: Puneeth Parva: ನನಗೆ ಡ್ಯಾನ್ಸ್ ಮಾಡೋಕೆ ಬರ್ತಿರಲಿಲ್ಲ, ಅಪ್ಪು ಹೇಳಿ ಕೊಡ್ತಾ ಇದ್ರು- ನಟಿ ರಮ್ಯಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ