ಬೆಂಗಳೂರು: ಅಪ್ಪು ಕನಸಿನ ಕೂಸು ಗಂಧದಗುಡಿ ಸಿನಿಮಾ ಅಕ್ಟೋಬರ್ 28ಕ್ಕೆ ಎಲ್ಲೆಡೆ ರಿಲೀಸ್ ಆಗುತ್ತಿದೆ. ಅಪ್ಪು ಅವರನ್ನು ತೆರೆ ಮೇಲೆ ಮತ್ತೊಮ್ಮೆ ಡಿಫರೆಂಟ್ ಆಗಿ ನೋಡೋ ಮೂಲಕ ನಾವು ಖುಷಿಪಡೋ ಕಾಲ ತುಂಬಾ ಹತ್ತಿರದಲ್ಲಿದೆ. ಅಪ್ಪು ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಅವರನ್ನ ಪ್ರೀತಿ ಮಾಡದೇ ಇರೋರು ಈ ಭೂಮಿ ಮೇಲೆ ಯಾರೂ ಇಲ್ಲ ಬಿಡಿ. ಅಂತೆಯೇ ಪವರ್ ಸ್ಟಾರ್ ಡಾ ಪುನೀತ್ ರಾಜಕುಮಾರ್ ಅಂದ್ರೆ ನಂಗೆ ಸರ್ವಸ್ವ ಅನ್ನೋ ಯುವನಟ ಶ್ರೇಯಸ್ ಕೆ ಮಂಜು ಅಪ್ಪು ಸರ್ ನೆನೆದು ಭಾವುಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ಅಪ್ಪು ಸರ್ ನಮ್ಮನ್ನ ಬಿಟ್ಟು ಹೋಗೋ ಹಿಂದಿನ ದಿನ ನಾನು ಅವರನ್ನ ಭೇಟಿಯಾಗಿದ್ದೆ. ಆದ್ರೆ ವಿಧಿಯಾಟ ನೆಕ್ಸ್ಟ್ ಡೇ ಅವರು ನಮ್ಮನ್ನ ಬಿಟ್ಟು ಹೊರಟೇ ಹೋದ್ರು. ನನ್ನ ನೋಡಿ ಕೆ.ಮಂಜು ಮಗ ತುಂಬಾ ಚೆನ್ನಾಗಿದ್ದಾರೆ ಅಂತ ಹೇಳಿದ್ರು ಅನ್ನೋದನ್ನ ನೆನೆದು ನೋವಿನಿಂದಲೇ ಮಾತನಾಡಿದ್ರು ಯುವನಟ ಶ್ರೇಯಸ್ ಕೆ ಮಂಜು.


ಇದನ್ನೂ ಓದಿ- ಹನ್ಸಿಕಾ ಮೊಟ್ವಾನಿ ಮದುವೆ ಫಿಕ್ಸ್‌ : ರಾಜಸ್ಥಾನದ ಕೋಟೆಯಲ್ಲಿ ʼಬಿಂದಾಸ್‌ʼ ಬೆಡಗಿ ವಿವಾಹ..!


ಇದೀಗ ಶ್ರೇಯಸ್ ಕೆ ಮಂಜು ನಟನೆಯ 'ರಾಣಾ' ಸಿನಿಮಾದ ಟ್ರೀಲರ್ ತುಣುಕೊಂದು ಗಂಧದಗುಡಿ ಸಿನಿಮಾ ರಿಲೀಸ್ ಆದ ದಿನ ಥೀಯೇಟರ್ ಗಳಲ್ಲಿ ಪ್ಲೇ ಆಗೋ ಮೂಲಕ ಸದ್ದು ಮಾಡಲು ತಯಾರಾಗಿದೆ. ದೀಪಾವಳಿ ದಿನದಂದು "ರಾಣಾ" ಸಿನಿಮಾ ರಿಲೀಸ್ ಪಕ್ಕಾ ಡೇಟ್ ಅನೌನ್ಸ್ ಆಗೋ ಸಾಧ್ಯತೆಯಿದೆ. 


ಇದನ್ನೂ ಓದಿ- Kantara box office: 16ನೇ ದಿನಕ್ಕೆ ಐತಿಹಾಸಿಕ ದಾಖಲೆ! ₹100 ಕೋಟಿ ಕ್ಲಬ್‌ನತ್ತ ಕಾಂತಾರ


ಇದೀಗ ರಾಣಾ ಸಿನಿಮಾದ ಗಲ್ಲಿ ಬಾಯ್ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು ಅಬ್ಬಬ್ಬಾ ಅನ್ನೋ ಲೆವೆಲ್ಲಿಗೆ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ ಶ್ರೇಯಸ್ ಕೆ ಮಂಜು. ಇವರ ನಟನೆ ಮತ್ತು ನೃತ್ಯ ಡೈಲಾಗ್ ಡೆಲಿವರಿ ಸ್ಟೈಲ್ ನೋಡ್ತಾ ಇದ್ರೆ ಶ್ರೇಯಸ್ ಕೆ ಮಂಜು ಪಕ್ಕಾ ಈ ಸಿನಿಮಾ ಮೂಲಕ ಮ್ಯಾಜಿಕ್ ಮಾಡೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ.  ಸೋ ಭರವಸೆ ಹುಟ್ಟಿಸಿರೋ ರಾಣಾ ಸಿನಿಮಾನ ಥೀಯೇಟರ್ ಗೆ ಹೋಗಿ ಕಣ್ತುಂಬಿಕೊಂಡು ಆಶೀರ್ವಾದ ಮಾಡೋ ಜವಾಬ್ದಾರಿ ಇದೀಗ ಸಿನಿರಸಿಕರ ಹೆಗಲಮೇಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.