Tapori Sathya : ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ.. ಸ್ಯಾಂಡಲ್ವುಡ್ ನಟ, ಟಪೋರಿ ಸತ್ಯ ನಿಧನ!
Sandalwood: ನಿನ್ನೆಯಷ್ಟೇ ಸಿನಿಮಾ ನಟ ಸಂಪತ್ ಜಯರಾಂ ಸಾವಿನ ಸುದ್ದಿ ಬೆಚ್ಚಿಬೀಳಿಸಿದ ಬೆನ್ನಲೇ ನಿರ್ದೇಶಕ ಟಪೋರಿ ಸತ್ಯ ಸಾವು ಕನ್ನಡ ಚಿತ್ರರಂಗವನ್ನು ಆಘಾತವನ್ನುಂಟು ಮಾಡಿದೆ.
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ ನಿಧನ ಹೊಂದಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಅನುಭವಿಸುತ್ತಿದ್ದ ಟಪೋರಿ ಸತ್ಯ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆ ಕೊನೆಯುಸಿರೆಳೆದಿದ್ದಾರೆ.
ಕೆಲ ತಿಂಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಟಪೋರಿ ಸತ್ಯ ಅವರಿಗೆ 46 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ: Dr Rajkumar: ಕರುನಾಡ ಮುತ್ತುರತ್ನ ಡಾ. ರಾಜ್ಕುಮಾರ್ ಅದೊಂದೇ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವಂತೆ !
ನಂದ ಲವ್ಸ್ ನಂದಿತಾ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟಪೋರಿ ಸತ್ಯ ನಟಿಸಿದ್ದರು. ನಟನೆ ಮಾತ್ರವಲ್ಲದೇ ಮೇಳ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲವು ತಿಂಗಳಿಂದ ಸಾಲು ಸಾಲು ಆಘಾತವನ್ನುಂಟು ಮಾಡುತ್ತಿದೆ. ನಿನ್ನೆಯಷ್ಟೇ ಸಿನಿಮಾ ನಟ ಸಂಪತ್ ಜಯರಾಂ ಸಾವಿನ ಸುದ್ದಿ ಬೆಚ್ಚಿಬೀಸಿದ ಬೆನ್ನಲೇ ಟಪೋರಿ ಸತ್ಯ ಸಾವು ಸಂಕಟಕ್ಕೆ ಈಡು ಮಾಡಿದೆ.
ಇದನ್ನೂ ಓದಿ: Yash - Hardik Pandya: ರಾಕಿ ಭಾಯ್ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ ಹಾರ್ದಿಕ್ ಪಾಂಡ್ಯ... ಫ್ಯಾನ್ಸ್ ಫುಲ್ ಫಿದಾ!
ಲೂಸ್ ಮಾದ ಯೋಗಿ ಅಭಿನಯದ 'ನಂದ ಲವ್ಸ್ ನಂದಿತಾ' ಸಿನಿಮಾ ಸೇರಿಂದಂತೆ 30 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಬಹುತೇಕ ಪೋಷಕ ಪಾತ್ರಗಳಲ್ಲಿಯೇ ನಟಿಸಿದ್ದರು.
ಸತ್ಯ ಹೊಸ ಸಿನಿಮಾವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದರು. ಅಷ್ಟರಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಸದ್ಯ ಸತ್ಯ ಅವರ ಪಾರ್ಥೀವ ಶರೀರವನ್ನು ಬನಶಂಕರಿ ಸಮೀಪದ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.