ನವದೆಹಲಿ: ಸದ್ಯ ಅತ್ಯಂತ ಕಷ್ಟಕರ ಹಂತವನ್ನು ಎದುರಿಸುತ್ತಿರುವ ಖ್ಯಾತ ಸೀರಿಯಲ್ ನಟನ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಈ ನಟನಿಗೆ 4ನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಕೊನೆಯ ಹಂತದಲ್ಲಿರುವ ಈ ನಟನಿಗೆ ಚಿಕಿತ್ಸೆಗೆ ಹಣವಿಲ್ಲ. ಅನೇಕ ಕಿರುತೆರೆ ತಾರೆಯರು ಈ ನಟನಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಹೀಗಾಗಲೇ ಆ ಸ್ಟಾರ್‌ಗಳು ನಿಧಿ ಸಂಗ್ರಹ ಅಭಿಯಾನ ಸಹ ಪ್ರಾರಂಭಿಸಿದ್ದಾರೆ. ನಟನ ಸಾವಿರಾರು ಅಭಿಮಾನಿಗಳು ಸಹ ಸಹಾಯ ಮಾಡುತ್ತಿದ್ದಾರೆ. ಈ ಕಿರುತೆರೆ ನಟ ಉದ್ಯಮದ ಪ್ರಸಿದ್ಧ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಇವರ ಧಾರಾವಾಹಿಯನ್ನು ಲಕ್ಷಾಂತರ ಜನರು ಮೆಚ್ಚಿಕೊಂಡಿದ್ದಾರೆ. ಹಾಗಾದ್ರೆ ಈ ನಟ ಯಾರು? ಮತ್ತು ಯಾವ ಕಿರುತೆರೆ ತಾರೆಯರು ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Veda OTT Release : ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ! ಈ ದಿನ ZEE5 ನಲ್ಲಿ ನಲ್ಲಿ ರಿಲೀಸ್


ಪ್ರಸಿದ್ಧ ನಟನಿಗೆ 4ನೇ ಹಂತದ ಕ್ಯಾನ್ಸರ್  


‘ನಿಶಾ ಔರ್ ಉಸ್ಕೆ ಕಸಿನ್ಸ್’ ಟಿವಿ ಧಾರಾವಾಹಿ ಖ್ಯಾತಿಯ ನಟ ವಿಭು ರಾಘವೆ ಅಥವಾ ವೈಭವ್ ರಾಘವೆ ಅವರಿಗೆ 4ನೇ ಹಂತದ ಕ್ಯಾನ್ಸರ್ ಅಟ್ಯಾಕ್ ಆಗಿದೆ. ವಿಭುಗೆ ಅಪರೂಪದ ರೀತಿಯ ಕ್ಯಾನ್ಸರ್ ಪತ್ತೆಯಾಗಿದ್ದು, ಇದು ಸಣ್ಣ ಜೀವಕೋಶದ ಕ್ಯಾನ್ಸರ್ ಆಗಿದೆ. ಈ ಕ್ಯಾನ್ಸರ್‌ನ ಹೆಸರು ನ್ಯೂರೋಎಂಡೋಕ್ರೈನ್ ಕಾರ್ಸಿನೋಮ ಎಂದು.


ಚಿಕಿತ್ಸೆಗೆ ಹಣವಿಲ್ಲ, ಅಭಿಮಾನಿಗಳ ಸಹಾಯ ಕೋರಿದ ಸ್ಟಾರ್‍ಗಳು


ಈ ಅಪಾಯಕಾರಿ ಮತ್ತು ಮಾರಣಾಂತಿಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ವಿಭು ಬಳಿ ಹಣವಿಲ್ಲ. ನಟ ಮೋಹಿತ್ ಮಲಿಕ್ ಮತ್ತು ಅವರ ಪತ್ನಿ ಅದಿತಿ ಮಲಿಕ್ ತಮ್ಮ ಆಪ್ತ ಸ್ನೇಹಿತ ವಿಭುಗಾಗಿ ಹಣ ದೇಣಿಗೆ ನೀಡುವಂತೆ ಅಭಿಮಾನಿಗಳ ಬಳಿ ವಿನಂತಿಸಿದ್ದಾರೆ. ‘ನಿಶಾ ಔರ್ ಉಸ್ಕೆ ಕಸಿನ್ಸ್’ ಚಿತ್ರದ ನಟಿ ಸಿಂಪಲ್ ಕೌಲ್ ಮತ್ತು ವಿಭುರವರ ಸಹನಟ ಮೊಹ್ಸಿನ್ ಖಾನ್ ಕೂಡ ತಮ್ಮ ಸ್ನೇಹಿತನಿಗೆ ಸಹಾಯ ಮಾಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಸಂದೇಶವನ್ನು ಬರೆದಿದ್ದಾರೆ. 


ಇದನ್ನೂ ಓದಿ: Kangana Ranaut: ಕಂಗನಾ ವಾಟ್ಸಪ್​ ಮೆಸೇಜ್​ ಲೀಕ್.! ಬಯಲಾಯ್ತು ಇಷ್ಟೆಲ್ಲಾ ಸೀಕ್ರೇಟ್‌?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.