Sandalwood comedian Mandeep Roy : ನೂರಾರು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ಹಾಸ್ಯನಟ ಮನ್‌ದೀಪ್ ರಾಯ್ (73) ಭಾನುವಾರ ಮುಂಜಾನೆ ಕಾವಲ್ ಬೈರಸಂದ್ರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹಿರಿಯ ನಟ ಮಂದೀಪ್ ರಾಯ್ ಅವರು ಕನ್ನಡ ಚಲನಚಿತ್ರಗಳಲ್ಲಿ ಅತ್ಯುತ್ತಮ ಕಾಮಿಕ್ ಟೈಮಿಂಗ್‌ಗಾಗಿ ಹೆಚ್ಚು ಜನಪ್ರಿಯರಾಗಿದ್ದರು. ಹಿರಿಯ ನಟ ಮನ್‌ದೀಪ್ ರಾಯ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರಾತ್ರಿ 1.45ರ ಸುಮಾರಿಗೆ ಹೃದಯಾಘಾತವಾಗಿದ್ದು, ಇಹಲೋಕ ತ್ಯಜಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video: ರೊಟ್ಟಿ ಮಾಡುತ್ತಾ ಹೀಗೊಂದು ಹಾಡು ಹಾಡಿದ ಮಹಿಳೆ, ಬಿಗ್ ಆಫರ್ ಕೊಟ್ಟ ನಟ ಸೋನು ಸೂದ್!


ಮನ್‌ದೀಪ್ ರಾಯ್ ಕನ್ನಡ ಚಿತ್ರರಂಗಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರು 1981 ರಲ್ಲಿ ಮಿಂಚಿನ ಓಟ ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. 25 ವರ್ಷಗಳ ಕಾಲ ತನ್ನ ಸುಪ್ರಸಿದ್ಧ ವೃತ್ತಿಜೀವನ ನಡೆಸಿದರು. ಕನ್ನಡ ಸಿನಿತಾರೆ ಶಂಕರ್ ನಾಗ್, ರಾಜ್ ಕುಮಾರ್ ಮತ್ತು ಅನಂತ್ ನಾಗ್ ಅವರಂತಹ ಗಮನಾರ್ಹ ಸೂಪರ್‌ಸ್ಟಾರ್‌ಗಳೊಂದಿಗೆ 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 


ಅವರು ಶಾಲಿನಿ, ಬೆಳ್ಳಿಯಪ್ಪ ಬಂಗಾರಪ್ಪ, ಮತ್ತು ಪಕ್ಕಾ ಚುಕ್ಕ ಮುಂತಾದ ಚಿತ್ರಗಳಲ್ಲಿ ತಮ್ಮ ಹಾಸ್ಯನಟನೆಯ ಮೂಲಕ ಜನರನ್ನು ರಂಜಿಸಿದ್ದಾರೆ. ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಸ್ಯಾಂಡಲ್‌ವುಡ್‌ ಹಿರಿಯ ಹಾಸ್ಯನಟ ಮನ್‌ದೀಪ್ ರಾಯ್ ಇಂದು ವಿಧಿವಶರಾಗಿದ್ದಾರೆ. 


ಇದನ್ನೂ ಓದಿ : Malaika Arora: “ಸಲ್ಮಾನ್ ನನ್ನನ್ನು ರೆಡಿ ಮಾಡಿಲ್ಲ..” ಸಲ್ಲು ಹೆಸರು ಕೇಳುತ್ತಿದ್ದಂತೆ ಮಲೈಕಾ ಕೋಪದಿಂದ ಹೇಳಿದ್ದೇನು ಗೊತ್ತಾ..!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.