Darshan Kaatera movie : ಸ್ಯಾಂಡಲ್‌ವುಡ್‌ ನಟ ದರ್ಶನ್ ಅಭಿನಯದ ʼಕಾಟೇರʼ ಸಿನಿಮಾಗೆ ರಿಲೀಸ್‌ಗೂ ಮುನ್ನವೇ ವಿಘ್ನ ಎದುರಾಗಿದೆ.. ನಿನ್ನೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಈಗ ವಿವಾದಕ್ಕೆ ಸಿಲುಕಿದೆ.. ಟ್ರೇಲರ್‌ನಲ್ಲಿ "ಆ" ಒಂದು ಡೈಲಾಗ್ ಉರಗ ತಜ್ಞರನ್ನ ಸಿಡಿದೇಳುವಂತೆ ಮಾಡಿದೆ. 


COMMERCIAL BREAK
SCROLL TO CONTINUE READING

ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು ಎಂಬ ಡೈಲಾಗ್ ವನ್ಯ ಜೀವಿಗಳ ಉಳಿವಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಕಿಡಿಕಾರಿದೆ.. ಈ ಡೈಲಾಗ್ ಅಪಕ್ವ ಸಂಭಾಷಣೆ ಎಂದು ಟ್ರೈಲರ್ ನಲ್ಲಿ ಇರುವ ಸಂಭಾಷಣೆ ಬಗ್ಗೆ ಅಸಾಮಾಧಾನ ಹೊರ ಹಾಕಿದ್ದಾರೆ.


ಇದನ್ನೂ ಓದಿ: ಈ ಪೋಟೋದಲ್ಲಿರುವ ಬಾಲಕ ಯಾರು ಗೊತ್ತಾ? ಕನ್ನಡ ಚಿತ್ರರಂಗದ ಅಭಿಮಾನಿಗಳ ಹೃದಯ ಸಿಂಹಾಸನದ ಯಜಮಾನ ಇವರು!


ಈ ಹೇಳಿಕೆ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ.. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು ಕೊಲ್ಲೋಕೆ ಪ್ರಚೋದನೆ ನೀಡಬಾರದು.. ಈ ಹಿನ್ನೆಲೆ ನಮ್ಮ ಒಕ್ಕೂಟ ರಾಜ್ಯಪಾಲರಿಗೆ ಹಾಗೂ ಸಿಎಂ ಸಿದ್ದುಗೆ ಮೇಲ್ ಮೂಲಕ ದೂರು ನೀಡಿದ್ದೇವೆ ಎಂದು ಮಾಹಿತಿ‌ಕೊಟ್ಟಿದ್ದಾರೆ.


ಒಟ್ಟಿನಲ್ಲಿ ಈ ತಜ್ಞರಿಗೆ ಹೀರೋಗಳ ಡೈಲಾಗ್ ಕೇಳಿ ಪ್ರಚೋದನೆಗೊಳ್ಳುವ ಅಭಿಮಾನಿಗಳ ಮೇಲೆ ಭಯ ಹೆಚ್ಚಾಗಿ ಕಂಪ್ಲೀಟ್ ಕೊಟ್ಟಿದ್ದಾರೆ.. ಸದ್ಯ ಈ ಡೈಲಾಗ್ ದರ್ಶನ್ ಹೇಳಿಲ್ಲ.. ವಿಲನ್ ಪಾತ್ರದಾರಿ ಹೇಳಿದ್ದಾರೆ.. ಈ ಡೈಲಾಗ್ ಸಿನಿಮಾದಲ್ಲಿ ತೆಗೆದ್ರೆ ಮಾತ್ರ ಸಿನಿಮಾ ರಿಲೀಸ್ ಗೆ ಯಾವುದೇ ಅಡ್ಡಿ ನಾವು ಮಾಡಲ್ಲ.. ಆದ್ರೆ ಆ ಡೈಲಾಗ್ ತೆಗೆಬೇಕು ಎಂಬುದು ಈ ಒಕ್ಕೂಟದ ವಾದವಾಗಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.