ಕಲಬುರ್ಗಿ : ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಯುವರತ್ನ ಬಿಡುಗಡೆಗೆ ಎಲ್ಲಾ ಸಿದ್ಧತೆ ನಡೆದಿದೆ. ಇದೀಗ ಚಿತ್ರ ತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ರಾಜ್ಯಾದ್ಯಂತ ಚಿತ್ರದ ಪ್ರಚಾರ ನಡೆಸಲು ನಿರ್ಧರಿಸಿರುವ ತಂಡ ಇಂದಿನಿಂದ ಪ್ರಚಾರ ಆರಂಭಿಸಿದೆ. ಕಲಬುರ್ಗಿಯಿಂದ ಚಿತ್ರ ತಂಡ ತನ್ನ ಪ್ರಚಾರ ಯಾತ್ರೆ ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಯುವರತ್ನ (Yuvaratnaa) ಚಿತ್ರದ ಪ್ರಚಾರಕ್ಕಾಗಿ ಇಂದು ಬೆಳಗ್ಗೆ ಕಲಬುರಗಿಗೆ ವಿಶೇಷ ವಿಮಾನದಲ್ಲಿ  ಚಿತ್ರತಂಡ ಆಗಮಿಸಿತ್ತು. ಚಿತ್ರ ತಂಡಕ್ಕೆ ನಗರದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಆಗಮಿಸುತ್ತಿದ್ದಂತೆ ಅಭಿಮಾನಿಗಳ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.ತಮ್ಮ ನೆಚ್ಚಿಯ ನಟ ಅಪ್ಪುವನ್ನು ನೋಡಲು ಜನ  ನೋಡಲು ಮುಗಿ ಬಿದ್ದ ಘಟನೆಯು ನಡೆಯಿತು.  


Yuvarathnaa Trailer: YouTube ನಲ್ಲಿ ಧೂಳೆಬ್ಬಿಸಿದ ಪವರ್ ಫುಲ್ ಯುವರತ್ನ ಟ್ರೈಲರ್


ಕಲಬುರ್ಗಿಯ (Kalburgi) ಶರಣ ಬಸವೇಶ್ವರ ದೇವಸ್ಥಾನಕ್ಕೆ ಬಂದ ಪುನೀತ್ ರಾಜ್ ಕುಮಾರ್ ಅವರನ್ನು ಪುಷ್ಪ ವೃಷ್ಟಿ ಮೂಲಕ ಬರಮಾಡಿಕೊಳ್ಳ ಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಪುನೀತ್ ರಾಜ್ ಕುಮಾರ್,  ಕಲಬುರ್ಗಿ ಜನರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದರು. ಅಲ್ಲದೆ, ಕಲಬುರ್ಗಿಯಲ್ಲಿ cinema ಚಿತ್ರೀಕರಿಸುವ ಬಗ್ಗೆಯೂ ಮಾಹಿತಿ ನೀಡಿದರು. ಆದರೆ ಯಾವ ಚಿತ್ರ ಎಂಬುದರ  ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. 


ಇದನ್ನೂ  ಓದಿ : ವಿಶೇಷ ವಿಮಾನದ ಮೂಲಕ ನಟ ಸೋನು ಸೂದ್ ಗೆ ಗೌರವ ಸೂಚಿಸಿದ ಏರ್ ಲೈನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.