Causes of High Blood Pressure: ಬಿಡುವಿಲ್ಲದ ಜೀವನಶೈಲಿಯ ಕಾರಣ ಹಲವಾರು ರೀತಿಯ ಕಾಯಿಲೆಗಳು ಜನರನ್ನು ಆವರಿಸಿಕೊಳ್ಳುತ್ತಿವೆ. ಅಧಿಕ ರಕ್ತದೊತ್ತಡ ಅಂದರೆ ಅಧಿಕ ಬಿಪಿ ಕೂಡ ಅದರಲ್ಲಿ ಒಂದು, ಇದು ನಿಧಾನವಾಗಿ ದೇಹವನ್ನು ಪ್ರವೇಶಿಸುತ್ತದೆ ಮತ್ತು ಮೂತ್ರಪಿಂಡದ ಹಾನಿ, ಬುದ್ಧಿಮಾಂದ್ಯತೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ವೈದ್ಯರ ಪ್ರಕಾರ, ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡ ಗರಿಷ್ಠ 120/80 mmHg ವರೆಗೆ ಇರಬೇಕು. ರಕ್ತದೊತ್ತಡವು ಇದಕ್ಕಿಂತ ಹೆಚ್ಚಾದರೆ, ಒಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡವನ್ನು ಹೊಂದಿರುವ ಸಾಧ್ಯತೆ ಹೆಚ್ಚಾಗಿತ್ತದೆ. ರಕ್ತದೊತ್ತಡ ಹೆಚ್ಚಾಗುವ ಅಪಾಯವನ್ನುಂಟು ಮಾಡುವ 5 ಸಂಗತಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

ನೋವು ನಿವಾರಕ ಔಷಧಗಳ ಅತಿಯಾದ ಬಳಕೆ
ವೈದ್ಯಕೀಯ ತಜ್ಞರ ಪ್ರಕಾರ, ಅನೇಕ ಜನರು ಸಣ್ಣ ಸೊಂವಿಗೂ ಕೂಡ ನೋವು ನಿವಾರಕಗಳನ್ನು ಮಾತ್ರೆಗಳನ್ನು ನುಂಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಇಂತಹ ಔಷಧಿಯನ್ನು ಸಾಂದರ್ಭಿಕವಾಗಿ ತೆಗೆದುಕೊಳ್ಳುವುದರಿಂದ ಯಾವುದೇ ತೊಂದರೆಯಿಲ್ಲ, ಆದರೆ ನೀವು ಅದನ್ನು ಅಭ್ಯಾಸ ಮಾಡಿಕೊಂಡರೆ, ಅದು ನಿಮ್ಮ ಮೂತ್ರಪಿಂಡದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ, ಇದರಿಂದಾಗಿ ನಿಮ್ಮ ರಕ್ತದೊತ್ತಡವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೀಗಾಗಿ, ನೀವು ಪೆನ್ ಕಿಲ್ಲರ್ ಬಳಕೆಯನ್ನು ಸಮಯ ಇರುವಾಗಲೇ ಕಡಿಮೆ ಮಾಡಿದರೆ, ಅದು ಉತ್ತಮ.


ಪ್ಯಾಕ್ ಮಾಡಿದ ಆಹಾರದ ಅತಿಯಾದ ಬಳಕೆ
ಅನೇಕ ಜನರು ತಮ್ಮ ಕಛೇರಿಗಳಲ್ಲಿ ಬಹಳ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಮೂಲಕ ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರವನ್ನು ಆರ್ಡರ್ ಮಾಡುತ್ತಾರೆ. ಈ ರೀತಿಯ ಆಹಾರವು ಹೆಚ್ಚಿನ ಪ್ರಮಾಣದ ಉಪ್ಪು ಅಂದರೆ ಸೋಡಿಯಂ ಅನ್ನು ಹೊಂದಿರುತ್ತದೆ, ಇದು ನೇರವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನ ಕಾರಣ, ಅದು ದೇಹದಿಂದ ನೀರನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತದೆ, ಇದು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರವನ್ನೇ ಸೇವಿಸಿ.


ದೇಹದಲ್ಲಿ ವಿಟಮಿನ್ ಡಿ ಕೊರತೆ
ದೇಹದಲ್ಲಿ ವಿಟಮಿನ್ ಡಿ ಕೊರತೆಯು ಕೂದಲು ಉದುರುವಿಕೆ ಮತ್ತು ಮೂಳೆಗಳ ದುರ್ಬಲತೆಗೆ ಕಾರಣವಾಗುತ್ತದೆ. ಆದರೆ, ವಿಟಮಿನ್ ಡಿ ಕೊರತೆಯು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧಯನವೊಂದು ಪತ್ತೆಹಚ್ಚಿದೆ. ಹೀಗಾಗಿ , ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಮತ್ತು ಹೃದಯಾಘಾತದ ಅಪಾಯವನ್ನು ತಪ್ಪಿಸಲು, ಇಂದಿನಿಂದಲೇ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಪ್ರಾರಂಭಿಸಿ.


ಸಮಾಜದಿಂದ ಪ್ರತ್ಯೇಕವಾಗಿ ವಾಸಿಸುವುದು
ಸಮಾಜದಲ್ಲಿ ಹೆಚ್ಚುತ್ತಿರುವ ಒಂಟಿತನದಿಂದ ಜನರಲ್ಲಿ ಸಿಡುಕು ಮತ್ತು ಅಧಿಕ ರಕ್ತದೊತ್ತಡವೂ ಹೆಚ್ಚಾಗುತ್ತದೆ. ಇದು ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಒಬ್ಬಂಟಿಯಾಗಿರುವ ಕಾರಣ, ಒಬ್ಬ ವ್ಯಕ್ತಿಯು ಖಿನ್ನತೆಗೆ ಒಳಗಾಗುತ್ತಾನೆ ಮತ್ತು ಕ್ರಮೇಣ ಹತಾಶೆಯ ಮನೋಭಾವದಲ್ಲಿ ಮುಳುಗುತ್ತಾನೆ. ಆದ್ದರಿಂದ ಇಂದಿನಿಂದಲೇ ನಿಮ್ಮನ್ನು ನೀವು ಸಾಮಾಜಿಕವಾಗಿರಿಸಲು ಪ್ರಯತ್ನಗಳನ್ನು ಆರಂಭಿಸಿ.


ಇದನ್ನೂ ಓದಿ-Weight Loss Tips: ಈ ಹಳದಿ ಬಣ್ಣದ ಪದಾರ್ಥಗಳಲ್ಲಿ ಅದ್ಭುತ ಗುಣಗಳಿವೆ, ತೂಕ ಇಳಿಕೆಗೆ ರಾಮಬಾಣ


ದಿನಕ್ಕೆ 7-8 ಗಂಟೆಗಳಿಗಿಂತ ಕಡಿಮೆ ನಿದ್ರೆ
ದೇಹದ ಫಿಟ್ ನೆಸ್ ಗೆ ಪ್ರತಿನಿತ್ಯ 7-8 ಗಂಟೆಗಳ ಕಾಲ ಗಾಢ ನಿದ್ದೆ ಮಾಡುವುದು ಬಹಳ ಮುಖ್ಯ. ಇದಕ್ಕಿಂತ ಕಡಿಮೆ ನಿದ್ದೆ ಮಾಡಿದರೆ ಅದು ಕಾಯಿಲೆಗಳಿಗೆ ನೇರ ಆಹ್ವಾನ ನೀಡಿದಂತಾಗುತ್ತದೆ. ನಿದ್ರೆಯ ತಜ್ಞರು ಹೇಳುವ ಪ್ರಕಾರ, ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ, ದೇಹದ ವಿವಿಧ ಭಾಗಗಳಿಗೆ ರಕ್ತದ ಪೂರೈಕೆಯಲ್ಲಿ ಹಠಾತ್ ಕುಸಿಯುತ್ತದೆ, ಇದು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-ನಿಮಗೆ ಅಜೀರ್ಣ ಸಮಸ್ಯೆಯೇ? ಹಾಗಿದ್ದಲ್ಲಿ ಇಲ್ಲಿದೆ ಇದಕ್ಕೆ ಮನೆ ಮದ್ದು...!


(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನಮದ್ದು ಮಾಹಿತಿಯನ್ನು ಆದಹರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ