ಬೆಂಗಳೂರು : ಈರುಳ್ಳಿಯನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಅಡುಗೆಯಲ್ಲಿಯೂ ಬಳಸಲಾಗುತ್ತದೆ. ಈರುಳ್ಳಿ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಪಾಕ ಪದ್ದತಿಯಿಂದ ಹಿಡಿದು ಜಂಕ್ ಫುಡ್ ವರೆಗೆ ಈರುಳ್ಳಿಯನ್ನು ಬಳಸಲಾಗುತ್ತದೆ. ಈರುಳ್ಳಿಯಲ್ಲಿರುವ ಔಷಧೀಯ ಗುಣಗಳಿಂದಾಗಿ ಇದನ್ನು  ಶತಮಾನಗಳಿಂದಲೂ ಬಳಸಲಾಗುತ್ತಿದೆ. ಈರುಳ್ಳಿಯು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಹೇಗೆ ಪ್ರಯೋಜನಕಾರಿಯಾಗಿದೆ ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.  


COMMERCIAL BREAK
SCROLL TO CONTINUE READING

ಈರುಳ್ಳಿ ರಕ್ತದ ಸಕ್ಕರೆಯ ಮಟ್ಟವನ್ನು ಹೇಗೆ ನಿಯಂತ್ರಿಸುತ್ತದೆ? :
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಂಯುಕ್ತಗಳನ್ನು ಈರುಳ್ಳಿ  ಒಳಗೊಂಡಿದೆ. ಅದರಲ್ಲಿ ಮುಖ್ಯವಾದುದು  ಕ್ವೆರ್ಸೆಟಿನ್. ಕ್ವೆರ್ಸೆಟಿನ್ ಒಂದು  ಫ್ಲೇವನಾಯ್ಡ್  ಆಗಿದ್ದು, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.  ಹಾಗಾಗಿ  ಕ್ವೆರ್ಸೆಟಿನ್ ಇನ್ಸುಲಿನ್ ಅನ್ನು  ಸುಧಾರಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು  ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿ ಫೈಬರ್ ಅಂಶ ಕೂಡಾ ಅಧಿಕವಾಗಿರುತ್ತದೆ. ಇದು ಗ್ಲೂಕೋಸ್ ಹೀರಿಕೊಳ್ಳುವ ಪ್ರಕ್ರಿಯೆಯನ್ನು  ನಿಧಾನಗೊಳಿಸುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿಡುವುದು  ಸಾಧ್ಯವಾಗುತ್ತದೆ.


ಇದನ್ನೂ ಓದಿ : ಈ ನಾಲ್ಕು ಸಂದರ್ಭಗಳಲ್ಲಿ ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಸೇವಿಸಬಾರದು


ಈರುಳ್ಳಿಯ ಪ್ರಯೋಜನಗಳು :
ಈರುಳ್ಳಿ ಪೌಷ್ಟಿಕಾಂಶವನ್ನು ಒಳಗೊಂಡಿರುವ ತರಕಾರಿಯಾಗಿದ್ದು, ಇದು    ವ್ಯಾಪಕ ಶ್ರೇಣಿಯ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ಕೆಲವು ಪ್ರಮುಖ ಪೋಷಕಾಂಶಗಳು  ಹೀಗಿವೆ. 


•ವಿಟಮಿನ್ ಸಿ: ಈರುಳ್ಳಿಯು ವಿಟಮಿನ್ ಸಿಯ ಸಮೃದ್ಧ ಮೂಲವಾಗಿದೆ.  ಇದು ಉತ್ಕರ್ಷಣ ನಿರೋಧಕವಾಗಿದ್ದು ಅದು ದೇಹವನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
•ಫೋಲೇಟ್ : ಈರುಳ್ಳಿ ಫೋಲೇಟ್‌ ಬಿ ವಿಟಮಿನಿನ ಉತ್ತಮ ಮೂಲವಾಗಿದೆ. ಜೀವಕೋಶದ ಬೆಳವಣಿಗೆಗೆ ಇದು ಅತ್ಯಗತ್ಯವಾಗಿದೆ. 
•ಪೊಟ್ಯಾಸಿಯಮ್ : ಈರುಳ್ಳಿ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ದೇಹದಲ್ಲಿ ಸರಿಯಾದ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅಗತ್ಯವಾದ ಖನಿಜವಾಗಿದೆ.
•ಕ್ರೋಮಿಯಂ: ಈರುಳ್ಳಿ ಕ್ರೋಮಿಯಂನ ಉತ್ತಮ ಮೂಲ ಕೂಡಾ ಹೌದು. ದೇಹವು ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬನ್ನು ಚಯಾಪಚಯಗೊಳಿಸಲು ಸಹಾಯ ಮಾಡುವ ಖನಿಜವಾಗಿದೆ.


ಆಹಾರದಲ್ಲಿ ಈರುಳ್ಳಿಯನ್ನು ಸೇರಿಸಬಹುದಾದ ಕೆಲವು ವಿಧಾನಗಳು:
•ಸೂಪ್‌, ಸಲಾಡ್ ಗಳಲ್ಲಿ ಈರುಳ್ಳಿಯನ್ನು ಬಳಸುವುದು.  
•ಈರುಳ್ಳಿಯನ್ನು ಹುರಿದು ಅದನ್ನು ಆಮ್ಲೆಟ್ ಅಥವಾ  ಮೊಟ್ಟೆ ಬುರ್ಜಿಗಳಲ್ಲಿ ಬಳಸುವುದು. 
•ಸ್ಯಾಂಡ್‌ವಿಚ್‌ಗಳು ಮತ್ತು  ರೋಲ್ ಗಳಲ್ಲಿ ಕತ್ತರಿಸಿದ ಈರುಳ್ಳಿಯನ್ನು ಸೇರಿಸುವುದು
•ಈರುಳ್ಳಿಯನ್ನು ಹುರಿದು ಎಲ್ಲಾ ರೀತಿಯ ಸಾಂಬಾರ್, ಪಲ್ಯಗಳಲ್ಲಿ ಬಳಸಬಹುದು. ಈರುಳ್ಳಿ ಚಟ್ನಿಯನ್ನು ಕೂಡಾ ಮಾಡಬಹುದು. 


ಇದನ್ನೂ ಓದಿ :  Summer Drink: ಬೇಸಿಗೆಯಲ್ಲಿ ಪ್ರತಿನಿತ್ಯ ಮಜ್ಜಿಗೆ ಸೇವಿಸಿದ್ರೆ ಇಷ್ಟೊಂದು ಆರೋಗ್ಯ ಪ್ರಯೋಜನಗಳಿವೆ


ಮಧುಮೇಹಕ್ಕೆ ನೈಸರ್ಗಿಕ ಪರಿಹಾರವಾಗಿ ಈರುಳ್ಳಿ :
ಶತಮಾನಗಳಿಂದಲೂ ಈರುಳ್ಳಿಯನ್ನು ಮಧುಮೇಹಕ್ಕೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಈರುಳ್ಳಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಸಾಧ್ಯವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಎಂಟು ವಾರಗಳವರೆಗೆ ದಿನಕ್ಕೆ 100 ಗ್ರಾಂ ಹಸಿ ಈರುಳ್ಳಿಯನ್ನು ಸೇವಿಸಿದ ಟೈಪ್ 2 ಡಯಾಬಿಟಿಸ್‌ ರೋಗಿಯ fasting blood sugar levelನಲ್ಲಿ ಗಮನಾರ್ಹವಾದ ಇಳಿಕೆ ಕಂಡು ಬಂದಿದೆ. 


ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕಾಗಿ ಈರುಳ್ಳಿ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು :
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಈರುಳ್ಳಿ  ಪ್ರಮುಖ ಪಾತ್ರ ವಹಿಸುತ್ತದೆಯಾದರೂ ಅದನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. 


•ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೀವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಈರುಳ್ಳಿಯನ್ನು ಸೇವಿಸುವ ಮೊದಲು  ವೈದ್ಯರೊಂದಿಗೆ ಮಾತನಾಡಿ. 
• ಈರುಳ್ಳಿಯನ್ನು ಸೇವಿಸುವಾಗ ನೀವು ದಿನಕ್ಕೆ ಎಷ್ಟು ಈರುಳ್ಳಿ ಸೇವಿಸುತ್ತಿದ್ದೀರಿ ಎನ್ನುವ ಬಗ್ಗೆ ಗಮನವಿರಲಿ. ಯಾಕೆಂದರೆ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು  ಅಧಿಕವಾಗಿರುತ್ತವೆ. 
•ಈರುಳ್ಳಿಯನ್ನು ಸೇವಿಸಿದ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್‌ನಂತಹ ಲಕ್ಷಣಗಳು ಕಂಡು ಬಂದರೆ ಈರುಳ್ಳಿ ಸೇವನೆಯನ್ನು ನಿಲ್ಲಿಸಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.