ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ 2020 ಕ್ಕೆ ಶನಿವಾರ ನಡೆದ ಮತದಾನದ ವೇಳೆ, ಈಶಾನ್ಯ ದೆಹಲಿಯ ಮತದಾನ ಕೇಂದ್ರದಲ್ಲಿ ಪೋಸ್ಟ್ ಮಾಡಲಾಗಿದ್ದ ಮತಗಟ್ಟೆ ಅಧಿಕಾರಿ ಇದ್ದಕ್ಕಿದ್ದಂತೆ ನಿಧನರಾದರು. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅಧಿಕಾರಿಯನ್ನು ಜಿಟಿಬಿಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು.


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ, ಮತದಾನ ಅಧಿಕಾರಿ ಉಧಮ್ ಸಿಂಗ್ ಅವರು ಬೆಳಿಗ್ಗೆ 6.30 ರ ಸುಮಾರಿಗೆ ಬಾಬರ್ಪುರದ ಮತದಾನ ಕೇಂದ್ರವೊಂದರಲ್ಲಿ ಎದೆ ನೋವು ಮತ್ತು ಅಸ್ವಸ್ಥತೆ ಬಗ್ಗೆ ದೂರು ನೀಡಿದ್ದಾರೆ. ಶಿಕ್ಷಾಮ್ ಉದಮ್ ಸಿಂಗ್ ಅವರನ್ನು ಬಾಬರ್ಪುರದ ಎಂಸಿಡಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಅಧಿಕಾರಿಯಾಗಿ ನೇಮಿಸಲಾಯಿತು. ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದರಿಂದ ಅವರನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಇಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದರು.


ಪೊಲೀಸರು ಇದನ್ನು ನೈಸರ್ಗಿಕ ಸಾವಿನ ಪ್ರಕರಣವೆಂದು ಪರಿಗಣಿಸುತ್ತಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಮೋರ್ಚೇರಿಗೆ ಕಳುಹಿಸಲಾಗಿದೆ.