ನವದೆಹಲಿ: ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಯ ಬಿರುಗಾಳಿಯನ್ನು ಎಬ್ಬಿಸಿರುವ ಮೂರು ಕೃಷಿ ವಲಯದ ಮಸೂದೆಗಳ ಬಗ್ಗೆ ಪ್ರತಿಕ್ರಿಯಿಸಿದ ಅಕಾಲಿ ದಳದ ನರೇಶ್ ಗುಜ್ರಾಲ್ 'ಪಂಜಾಬ್‌ನ ರೈತರು ದುರ್ಬಲರು ಎಂದು ಭಾವಿಸಬೇಡಿ' ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆರಂಭದಲ್ಲಿ ಮಸೂದೆಗಳನ್ನು ಬೆಂಬಲಿಸಿದ ಅಕಾಲಿ ದಳವು ಈ ವಿಷಯದ ಬಗ್ಗೆ ರೈತರ ಅಸಮಾಧಾನದ ಆಳವನ್ನು ಅರಿತುಕೊಂಡ ನಂತರ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿತು. ಕಳೆದ ವಾರ, ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಏಕೈಕ ಅಕಾಲಿ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಅವರು ತ್ಯಜಿಸಿದ್ದರು. ಮಸೂದೆಯನ್ನು ತೆರವುಗೊಳಿಸಿದ ಸಂಪುಟದ ಭಾಗವಾಗಿದ್ದ ಸಚಿವರು ರಾಜ್ಯದಲ್ಲಿ ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದರು.


ಪಂಜಾಬ್ ಸಿಎಂರಿಂದ ಅಕಾಲಿದಳದ ಮುಖ್ಯಸ್ಥರಿಗೆ ಹಿಟ್ಲರನ ‘ಮೇನ್ ಕ್ಯಾಂಪ್' ಗಿಫ್ಟ್ ...!


ಪಕ್ಷವು ಆರಂಭದಲ್ಲಿ ಸರ್ಕಾರಕ್ಕೆ ಹೊರಗಿನ ಬೆಂಬಲವನ್ನು ನೀಡುವುದಾಗಿ ಹೇಳಿದ್ದರೂ, ರೈತರು ಮತ್ತು ಕಾಂಗ್ರೆಸ್‌ನ ನಿರಂತರ ಒತ್ತಡದ ನಂತರ, ಬಿಜೆಪಿಯ ಹಳೆಯ ಮಿತ್ರರು ಸಹಭಾಗಿತ್ವವನ್ನು ಪರಿಶೀಲಿಸುವುದಾಗಿ ಹೇಳಿದರು.ಇಂದು ಬೆಳಿಗ್ಗೆ ಮೂರು ಸಭೆಗಳಲ್ಲಿ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದರಿಂದ, ಅಕಾಲಿ ದಳದ ನರೇಶ್ ಗುಜ್ರಾಲ್ ಅವರು "ಎಲ್ಲ ಪಾಲುದಾರರನ್ನು ಆಲಿಸಲು ಆಯ್ಕೆ ಸಮಿತಿಯೊಂದನ್ನು ಒತ್ತಾಯಿಸಿದರು.


ಆರಂಭದಲ್ಲಿ, ರೈತರ ಕಳವಳವನ್ನು ಪರಿಹರಿಸುವವರೆಗೆ ಮಸೂದೆಗಳನ್ನು ತಡೆಹಿಡಿಯಬೇಕೆಂದು ಅಕಾಲಿ ದಳ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸಲು ಬಿಜೆಪಿ ನಿರ್ಧರಿಸಿದ್ದರಿಂದ, ಅಕಾಲಿಗಳು ಇದರ ವಿರುದ್ಧ ಮತ ಚಲಾಯಿಸಿದ್ದರು.ಅಕಾಲಿ ದಳವು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುಂದುವರಿಸುತ್ತದೆಯೇ? ಎಂದು ಕೇಳಿದಾಗ, ಬಾದಲ್ ಎ"ನೋಡಿ ನಾವು ಎನ್‌ಡಿಎ ಸ್ಥಾಪಕ ಸದಸ್ಯರು. ಆದರೆ ನಾವು ಪರಿಸ್ಥಿತಿಯನ್ನು ನೋಡುತ್ತೇವೆ. ಆಗ ನಮ್ಮ ಪಕ್ಷದಲ್ಲಿನ ಸಮಿತಿ ಮೂಲಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.