ನವದೆಹಲಿ: ಕರೋನಾ ಅವಧಿಯಲ್ಲಿ ದೇಶವು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಕರೋನಾದ ಹೊರತಾಗಿ ದೇಶವು ನಿರಂತರವಾಗಿ ಬಿರುಗಾಳಿಗಳು ಮತ್ತು ಕೆಲವೊಮ್ಮೆ ಭೂಕಂಪ (Earthquake)ಗಳೊಂದಿಗೆ ಹೋರಾಡುತ್ತಿದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir) ದಲ್ಲಿ ಇಂದು 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದ ಕೇಂದ್ರ ಬಿಂದು ತಜಕಿಸ್ತಾನ್ ಎಂದು ಹೇಳಲಾಗಿದೆ.


ಇದಕ್ಕೂ ಮೊದಲು ಗುಜರಾತ್‌ನಲ್ಲಿ ಭೂಕಂಪದ ನಡುಕ ಅನುಭವವಾಗಿತ್ತು. ರಾಜ್‌ಕೋಟ್‌ನಲ್ಲಿ ನಿನ್ನೆ ಮಧ್ಯಾಹ್ನ 12.57 ಕ್ಕೆ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿನ ಭೂಕಂಪದ ಪ್ರಮಾಣವನ್ನು 4.4 ಎಂದು ಅಳೆಯಲಾಯಿತು. ಈ ಮಾಹಿತಿಯನ್ನು ಎನ್‌ಸಿಎಸ್ ನೀಡಿದೆ.


ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪದ ಆಘಾತ: ಎನ್‌ಸಿಎಸ್ ಹೇಳಿದ್ದೇನು?


ಕಳೆದ 2 ತಿಂಗಳಿನಿಂದ ದೆಹಲಿ-ಎನ್‌ಸಿಆರ್ (Delhi-NCR) ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಭಾನುವಾರ ಕೂಡ ಗುಜರಾತ್‌ನಲ್ಲಿ ಭೂಮಿ ನಡುಗುತ್ತಿತ್ತು. ಬಲವಾದ ಭೂಕಂಪದ ನಡುಕ ಇಲ್ಲಿ ಅನುಭವವಾಯಿತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 5.8 ಎಂದು ಹೇಳಲಾಗಿದೆ. ನಡುಕ ಎಷ್ಟು ವೇಗವಾಗಿತ್ತೆಂದರೆ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದಿದ್ದರು.


2 ತಿಂಗಳಲ್ಲಿ 13 ಬಾರಿ ಭೂಮಿಯ ಕಂಪನ ದೊಡ್ಡ ಭೂಕಂಪದ ಸಂಕೇತವೇ?


ಈ ದಿನಗಳಲ್ಲಿ ದೇಶವು ಕರೋನಾದೊಂದಿಗೆ ನೈಸರ್ಗಿಕ ವಿಪತ್ತುಗಳ ಮೂಲಕ ಸಾಗುತ್ತಿದೆ. ಇತ್ತೀಚೆಗೆ  ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅನ್ಫಾನ್ ಚಂಡಮಾರುತ ಹಾನಿಉಂಟು ಮಾಡಿತು. ಇದರ ನಂತರ, ನಿಸಾರ್ಗ್ ಚಂಡಮಾರುತವು ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೆಲವು ಪ್ರದೇಶಗಳಲ್ಲಿ ಹಾನಿಯುಂಟುಮಾಡಿತು. ಈಗ ದೇಶದ ಹಲವು ಭಾಗಗಳಲ್ಲಿ ಸಂಭವಿಸುತ್ತಿರುವ ಭೂಕಂಪವು ಜನರ ಆತಂಕವನ್ನು ಇನ್ನೂ ಹೆಚ್ಚಿಸಿದೆ.