ನವದೆಹಲಿ: ಚೀನಾಗೆ ಅದರ ಧಾಟಿಯಲ್ಲಿಯೇ ಉತ್ತರಿಸಳು ಭಾರತ ರಣತಂತ್ರ ರೂಪಿಸಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿಯೆಟ್ನಾಂನ ರಕ್ಷಣಾ ಸಚಿವ ಜನರಲ್ ಜುವಾನ್ ಲಿಚ್ ನಡುವೆ ವರ್ಚ್ಯುವಲ್ ಸಭೆ ನಡೆದಿದೆ. ಈ ವೇಳೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಮತ್ತು ದ್ವಿಪಕ್ಷೀಯ ವಿನಿಮಯವನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Coronavirus: Lockdown ಅವಧಿಯಲ್ಲಿ ಉಚಿತ ಅಕ್ಕಿ ವಿತರಣೆಗೆ ಬಂದ್ವು 'Rice ATM'


ವಿಯೆಟ್ನಾಂನ ರಕ್ಷಣಾ ಸಿಬ್ಬಂಧಿಗಳಿಗೆ ಭಾರತ ತರಬೇತಿ ನೀಡುತ್ತದೆ
ರಕ್ಷಣಾ ವಿಷಯಗಳಲ್ಲಿ, ಉಭಯ ದೇಶಗಳು ಪಾಲುದಾರಿಕೆಯನ್ನು ಬಹಳವಾಗಿ ಹೆಚ್ಚಿಸಿವೆ. ಅನೇಕ ವಿಯೆಟ್ನಾಮೀಸ್ ರಕ್ಷಣಾ ಸಿಬ್ಬಂದಿಗೆ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಅಥವಾ ಐಟಿಇಸಿ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, 2019 ರ ಅಕ್ಟೋಬರ್‌ನಲ್ಲಿ ಚಿನ್ ಮಿನ್ಹ್ ನಗರದಲ್ಲಿ ರಕ್ಷಣಾ ಕಾರ್ಯದರ್ಶಿ ಮಟ್ಟದಲ್ಲಿ 12 ನೇ ವಾರ್ಷಿಕ ಭದ್ರತಾ ಮಾತುಕತೆ ನಡೆದಿತ್ತು. ಭಾರತವು 11 ದೇಶಗಳಲ್ಲಿ ಮೊಬೈಲ್ ತರಬೇತಿ ತಂಡಗಳನ್ನು ನಿಯೋಜಿಸಿದೆ, ಅವುಗಳಲ್ಲಿ ವಿಯೆಟ್ನಾಂ  (Vietnam) ಕೂಡ ಒಂದು.


ಇದನ್ನು ಓದಿ- ಲಡಾಖ್ ನಲ್ಲಿ ಭಾರತೀಯ ಸೈನಿಕರಿಗಾಗಿ ನಿರ್ಮಾಣಗೊಂಡ ವಿಶೇಷ ಮನೆಗಳು, -40 ಡಿಗ್ರಿ ತಾಪಮಾನ ಕೂಡ ಪರಿಣಾಮ ಬೀರಲ್ಲ


ಒಂದುಗೂಡಿ ಜೀನಾ ವಿರುದ್ಧ ಹೋರಾಟ
ರಕ್ಷಣಾ ಕೈಗಾರಿಕಾ ಸಹಕಾರವು ಉಭಯ ದೇಶಗಳ ನಡುವಿನ ಹೊಸ ಚರ್ಚಾ ಕೇಂದ್ರವಾಗಿದೆ. ವಿಯೆಟ್ನಾಂನ ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸಲು ಭಾರತ ಈಗಾಗಲೇ ಯುಎಸ್ $ 600 ಮಿಲಿಯನ್ ರಕ್ಷಣಾ ವ್ಯವಸ್ಥೆಯನ್ನು ವಿಸ್ತರಿಸಿದೆ. ಭಾರತ ಮತ್ತು ವಿಯೆಟ್ನಾಂ ಎರಡೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಆಕ್ರಮಣಕ್ಕೆ ವಿರುದ್ಧವಾಗಿ ಪೂರ್ವ ಲಡಾಕ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಕಾರ್ಯನಿರ್ವಹಿಸುತ್ತಿವೆ. ಚೀನಾದ ಹಡಗುಗಳು ದೇಶದ ಆರ್ಥಿಕ ವಲಯಕ್ಕೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ಚೀನಾಕ್ಕೆ ಎರಡೂ ದೇಶಗಳು ಒಟ್ಟಾಗಿ ಉತ್ತರಿಸುತ್ತಿವೆ.


ಇದನ್ನು ಓದಿ- ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ


ಈ ಕಾರ್ಯತಂತ್ರ ರೂಪಿಸಲಾಗಿದೆ
ಲಡಾಖ್ ಉದ್ವಿಗ್ನತೆಯ ನಂತರ ಪಾಕಿಸ್ತಾನದ ಭಯೋತ್ಪಾದನೆಯ ಉಸ್ತುವಾರಿ ವಹಿಸಿಕೊಂಡಿದ್ದ ಚೀನಾ ಬಗ್ಗೆ ಭಾರತದ ವರ್ತನೆ ಬದಲಾಗಿದೆ. ಪ್ರಪಂಚದ ದೃಷ್ಟಿಗೆ ಬರದಂತೆ ಇದೀಗ ಭಾರತ ಕೂಡ ಮಾಡುವ ಕೃತ್ಯಗಳ ಧಾಟಿಯಲ್ಲೇ ಚೀನಾಗೆ ಉತ್ತರ ನೀಡಲು ಆರಂಭಿಸಿದೆ. ಇದರಿಂದಾಗಿ ಚೀನಾಗೆ ಭಾರತವನ್ನು ವಿರೋಧಿಸಲು ಕೂಡ ಆಗುತ್ತಿಲ್ಲ  ಅಥವಾ ಯಾವುದೇ ಪ್ರತಿ-ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ. ತನ್ನ ಇದೆ  ಕಾರ್ಯತಂತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತವು ಇದೀಗ ಚೀನಾದ ನೆರೆಯ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸುತ್ತಿದೆ.