ನವದೆಹಲಿ: ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟದಲ್ಲಿ ಲಾಕ್ ಡೌನ್ ವಿಚಾರವಾಗಿ ನಿರ್ಣಾಯಕ ಸಭೆ ಭಾನುವಾರ (ಏಪ್ರಿಲ್ 4, 2021) ರಂದು ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದಾರೆ, ಇದರಲ್ಲಿ ಜಿಮ್ ಮಾಲೀಕರು,ರಂಗಮಂದಿರ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು, ಪತ್ರಿಕೆಯ ಸಂಪಾದಕರು ಸೇರಿದ್ದಾರೆ.ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ವಿರೋಧ ಪಕ್ಷದ ನಾಯಕ ರಾಜ್ ಠಾಕ್ರೆ ಅವರನ್ನು ಕರೆದು ಈ ವಿಷಯವನ್ನು ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Corona ನಿಯಂತ್ರಣ ಹೇಗೆ? ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ


ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 49,447 ಹೊಸ ಸೋಂಕು (Coronavirus) ಪ್ರಕರಣಗಳು ಮತ್ತು 277 ಸಾವುಗಳು ಸಂಭವಿಸಿವೆ.ರಾಜ್ಯದಲ್ಲಿ ಪ್ರಸ್ತುತ 4,01,172 ಸಕ್ರಿಯ ಪ್ರಕರಣಗಳಿವೆ, ಅದರಲ್ಲಿ 9,090 ಪ್ರಕರಣಗಳು ಮುಂಬೈನಿಂದ ವರದಿಯಾಗಿವೆ, ಇದು ಒಟ್ಟು 62,187 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.


ಭಾರತವು ಕಳೆದ 24 ಗಂಟೆಗಳಲ್ಲಿ 93,249 ಪ್ರಕರಣಗಳನ್ನು ದಾಖಲಿಸಿದ್ದು, ಆರೋಗ್ಯ ಸಚಿವಾಲಯದ ಪ್ರಕಾರ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಡ್, ಕೇರಳ ಮತ್ತು ಪಂಜಾಬ್ ದೇಶದ ಶೇಕಡಾ 76.41 ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿವೆ.


ಓದಿ: Akshay Kumar ಗೆ ಕೊರೊನಾ ಸೋಂಕು, ಟ್ವೀಟ್ ಕಂಡ ಅಭಿಮಾನಿಗಳಲ್ಲಿ ಆತಂಕ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.