ಇಂಫಾಲ್: ಕರೋನಾವೈರಸ್ ಕೋವಿಡ್ -19 (COVID-19)  ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮಣಿಪುರ (Manipur) ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್  ಭಾನುವಾರ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಲಾಕ್‌ಡೌನ್ ಅನ್ನು  ಜುಲೈ 1 ರಿಂದ 15 ರವರೆಗೆ ವಿಸ್ತರಿಸಲಾಗಿದೆ. ವಾಸ್ತವವಾಗಿ ಮಣಿಪುರದಲ್ಲಿ ಇದುವರೆಗೆ ಒಟ್ಟು 1,092 ಕೊರೊನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ ಇದಕ್ಕೂ ಮುನ್ನ ಜೂನ್ 30 ರಂದು ಲಾಕ್‌ಡೌನ್ ಅನ್ನು ತೆಗೆದುಹಾಕುವ ನಿರೀಕ್ಷೆಯಿದೆ.


ಸಿಎಂ ಎನ್. ಬಿರೆನ್ ಸಿಂಗ್ ಲಾಕ್‌ಡೌನ್ (Lockdown) ಹೊರತಾಗಿಯೂ ಜುಲೈ 1 ರಿಂದ 15 ರವರೆಗೆ ಅಂತರ ಜಿಲ್ಲಾ ಬಸ್ ಸೇವೆಯ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ಈ ಸಮಯದಲ್ಲಿ COVID-19 ಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದು ಬಿರೆನ್ ಸಿಂಗ್ ಘೋಷಿಸಿದರು. ಆದಾಗ್ಯೂ ಈ ಸಮಯದಲ್ಲಿ ಬೇರೆ ಯಾವುದೇ ಸಾರ್ವಜನಿಕ ಸಾರಿಗೆಯನ್ನು ಅನುಮತಿಸಲಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.


ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 5,493 ಹೊಸ Covid-19 ಪ್ರಕರಣ ದಾಖಲು, ಬೇರೆ ರಾಜ್ಯಗಳ ಸ್ಥಿತಿಗತಿ...


ಇದಕ್ಕೂ ಮೊದಲು  ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾವೈರಸ್ (Coronavirus)  ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜಾರ್ಖಂಡ್ ಸರ್ಕಾರ ಜುಲೈ 31ರವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಿಸಲು ನಿರ್ಧರಿಸಿದೆ. ಇಲ್ಲಿ ಲಾಕ್‌ಡೌನ್ ನಿಯಮಗಳ ಅನುಸರಣೆ ಮೊದಲಿನಂತೆ ಕಟ್ಟುನಿಟ್ಟಾಗಿ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳಿದೆ.


ಈ ಕುರಿತಂತೆ ಜಾರ್ಖಂಡ್ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಉನ್ನತ ಮಟ್ಟದ ಸಭೆಯ ನಂತರ ಕೋವಿಡ್ -19 ವ್ಯವಹಾರಗಳ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮತ್ತು ಜಾರ್ಖಂಡ್‌ನ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರು ಈ ನಿರ್ದೇಶನವನ್ನು ನೀಡಿದ್ದಾರೆ.


ಹಿಂದಿನ ನಿರ್ಧಾರದ ಪ್ರಕಾರ, ಎಲ್ಲಾ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರಗಳು, ಮಾಲ್‌ಗಳು, ಸಲೂನ್‌ಗಳು, ಸ್ಪಾಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧರ್ಮಶಾಲಾ, ಬಾರ್‌ಗಳು, ಅಂತರರಾಜ್ಯ ಬಸ್ ಸೇವೆ, ಈಜುಕೊಳ, ಮನರಂಜನಾ ಉದ್ಯಾನ, ಜಿಮ್, ದೇವಾಲಯಗಳು, ಮಸೀದಿಗಳು, ಚರ್ಚುಗಳು ಸೇರಿದಂತೆ ರಾಜ್ಯದಲ್ಲಿ ತರಬೇತಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ ಮತ್ತು ಲಾಕ್‌ಡೌನ್ ನಿಯಮಗಳ ಅನುಸರಣೆ ಕಟ್ಟುನಿಟ್ಟಾಗಿ ಮುಂದುವರಿಯುತ್ತದೆ.