ನವದೆಹಲಿ:  ಪ್ರತಿ ವರ್ಷ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ಅಂಗಡಿಗಳಲ್ಲಿ ಅಥವಾ ಫುಟ್ ಪಾತ್ ಗಳಲ್ಲಿ ತ್ರಿವರ್ಣ ಧ್ವಜಗಳ ಮಾರಾಟವನ್ನು ನಾವು ನೋಡುತ್ತೇವೆ. ಧ್ವಜಗಳನ್ನು ನೋಡಿದೊಡನೆ ದೇಶಭಕ್ತಿಯ ಭಾವನೆಯೂ ಬರುತ್ತದೆ.


COMMERCIAL BREAK
SCROLL TO CONTINUE READING

ಪರಿಸರಕ್ಕೆ ಹಾನಿ:
ಆದರೆ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ಮಾರಾಟ ಮಾಡಲಾಗುವ  ಪ್ಲಾಸ್ಟಿಕ್ ಧ್ವಜಗಳನ್ನು ಖರೀದಿಸುವ ಮೂಲಕ, ನಾವು ದೇಶಭಕ್ತಿಯ ಪಾಲುದಾರರಾಗುತ್ತೇವೆ ಆದರೆ ಪರಿಸರಕ್ಕೆ ಹಾನಿಯಾಗುತ್ತೇವೆ ಎಂದು ನಮ್ಮಲ್ಲಿ ಕೆಲವರಿಗಷ್ಟೇ ತಿಳಿದಿದೆ. ಈ ವರ್ಷ ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು (Independence @75) ಪೂರೈಸುತ್ತಿದೆ. ಈಗ ನಾವು ಪ್ಲಾಸ್ಟಿಕ್ ಧ್ವಜಗಳಿಗೆ 'ಬೈ-ಬೈ' ಹೇಳುವ ಮೂಲಕ ಬಟ್ಟೆ ಅಥವಾ ಕಾಗದದಿಂದ ಮಾಡಿದ ಧ್ವಜಗಳನ್ನು ಖರೀದಿಸುವುದು ಎಲ್ಲಾ ದೇಶವಾಸಿಗಳ ಜವಾಬ್ದಾರಿಯಾಗುತ್ತದೆ. ಈ ಧ್ವಜಗಳು ಪರಿಸರಕ್ಕೆ ಹಾನಿ ಮಾಡುವುದಿಲ್ಲ ಮತ್ತು ಅವುಗಳನ್ನು ಸುಲಭವಾಗಿ ಮರುಬಳಕೆ ಮಾಡಬಹುದು.


ಇದನ್ನೂ ಓದಿ- Liquor Consumption - ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನಿಗಳಿದ್ದಾರೆ ಗೊತ್ತಾ?


ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ:
ಈ ಬಾರಿ ಜನರು ಪ್ಲಾಸ್ಟಿಕ್ ಧ್ವಜಗಳನ್ನು (Plastic Flags) ಖರೀದಿಸದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲಹೆ ನೀಡಿದೆ. ತ್ರಿವರ್ಣವು ನಮ್ಮ ದೇಶದ ಹೆಮ್ಮೆ ಎಂದು ಸರ್ಕಾರ ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ಲಾಸ್ಟಿಕ್ ಧ್ವಜ ಹಾಳಾದಾಗ, ಅದನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅದರಿಂದಾಗಿ ದೇಶದ ಗೌರವಕ್ಕೆ ಹಾನಿಯಾಗುವುದರ ಜೊತೆಗೆ ಪರಿಸರಕ್ಕೂ ಹಾನಿಯಾಗುತ್ತದೆ.


ಇದನ್ನೂ ಓದಿ- ಈಗ EMI ನಲ್ಲಿ ಸಿಗುತ್ತಿದೆ ಸಗಣಿ ಭರಣಿ, ಈ ವೆಬ್ ಸೈಟ್ ಮೂಲಕ ಖರೀದಿಸಬಹುದು


ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ:
ಪ್ಲಾಸ್ಟಿಕ್ ಧ್ವಜಗಳನ್ನು ಬಳಸಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರಿಗೆ ಮನವಿ ಮಾಡಿದರು. ಈ ಬಗ್ಗೆ ಕೂ ಆಪ್‌ನಲ್ಲಿ  ಮನವಿ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್, ನಮ್ಮ ಸುಂದರ ವಸುಧಾ, ಪೋಷಕ ಪ್ರಕೃತಿ ಮತ್ತು ಪರಿಸರದ ರಕ್ಷಣೆಗಾಗಿ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು. ಸ್ವಾತಂತ್ರ್ಯ ದಿನದಂದು ಪ್ಲಾಸ್ಟಿಕ್ ತ್ರಿವರ್ಣವನ್ನು ಎಂದಿಗೂ ಬಳಸಬೇಡಿ ಎಂದು ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ