ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhas Chandra Bose) ಅವರ 124 ನೇ ಜನ್ಮ ದಿನಾಚರಣೆಯಂದು ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ 'ಜೈ ಶ್ರೀ ರಾಮ್ ಪಠಣಗಳೊಂದಿಗೆ ಅಡ್ಡಿಪಡಿಸಿದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೋಲ್ಕತಾವನ್ನು ಪರ್ಯಾಯ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಬೇಕು - Mamata Banerjee


ಶನಿವಾರ ಸಂಜೆ ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ Narendra Modi) , ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಕೂಡ ಉಪಸ್ಥಿತರಿದ್ದರು.


Mamata Banerjee: ದೀದಿ ಸೋಲಿಸದೇ ಇದ್ರೆ ರಾಜಕೀಯವನ್ನೇ ತ್ಯಜೀಸುವೆ: ಬಿಜೆಪಿ ನಾಯಕ!


ಮಮತಾ ಬ್ಯಾನರ್ಜಿ (Mamata Banerjee) ಮಾತನಾಡುವ ಮೊದಲು ಪ್ರೇಕ್ಷಕರು ಕೂಗುತ್ತಿರುವ ದೃಶ್ಯಗಳನ್ನು ದೃಶ್ಯಗಳು ತೋರಿಸಿದವು, ಸಂಘಟಕರು ಪದೇ ಪದೇ ಶಾಂತವಾಗಿರಲು ಒತ್ತಾಯಿಸಿದರು.ಅವರು ಅಂತಿಮವಾಗಿ ಮಾತನಾಡಲು ಬಂದಾಗ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ಘನತೆಯನ್ನು ಪ್ರದರ್ಶಿಸುವಂತೆ ಒತ್ತಾಯಿಸಿದರು.ನಂತರ ಅವರು ಕಾರ್ಯಕ್ರಮಕ್ಕೆ ಹಾಜರಾದ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿ ವೇದಿಕೆಯಿಂದ ಹೊರನಡೆದರು. 


ಸ್ವಲ್ಪ ಸಮಯದ ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಯನ್ನು "ಬೆಹೆನ್ (ಸಹೋದರಿ) ಮಮತಾ" ಎಂದು ಉಲ್ಲೇಖಿಸುವ ಮೂಲಕ ಪ್ರಾರಂಭಿಸಿದರು.ಅವರು ಮಾತನಾಡುವಾಗ, "ಭಾರತ್ ಮಾತಾ ಕಿ ಜೈ" ಯ ಪಠಣಗಳು ಕೇಳಿಬಂದವು, ಆದರೆ "ಜೈ ಶ್ರೀ ರಾಮ್" ಘೋಷಣೆ ಕೇಳಿ ಬರಲಿಲ್ಲ.


ಇದನ್ನೂ ಓದಿ: ದೆಹಲಿ ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.