ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ, ವಿವಿಧ ರಾಜ್ಯಗಳಲ್ಲಿಸಿಲುಕಿದ್ದ ಕಾರ್ಮಿಕರಿಗಾಗಿ ಆರಂಭಿಸಲಾಗಿದ್ದ ಕಾರ್ಮಿಕರ ವಿಶೇಷ ರೈಲುಗಳ ಬೇಡಿಕೆ ಈಗ ನಿರಂತರವಾಗಿ ಕಡಿಮೆಯಾಗುತ್ತಿದೆ. ಏತನ್ಮಧ್ಯೆ ಎರಡು ರಾಜ್ಯಗಳು ಈಗಾಗಲೇ ಈ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಿವೆ ಎಂಬ ವರದಿಗಳಿವೆ. ಭಾರತದಾದ್ಯಂತ ಈ ರೈಲುಗಳ ಬೇಡಿಕೆ ಶೇಕಡಾ 90 ರಷ್ಟು ಕಡಿಮೆಯಾಗಿದೆ.


COMMERCIAL BREAK
SCROLL TO CONTINUE READING

ಶ್ರಮಿಕ್ ರೈಲು ಸೇವೆ ಸ್ಥಗಿತಗೊಳಿಸಲಿರುವ ದೆಹಲಿ ಮತ್ತು ಗುಜರಾತ್: 
ದೆಹಲಿ ಸರ್ಕಾರದಿಂದ ಹೆಚ್ಚಿನ ಕಾರ್ಮಿಕ-ನಿರ್ದಿಷ್ಟ ರೈಲುಗಳ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ರೈಲುಗಳ ಕಾರ್ಯಾಚರಣೆಯನ್ನು ರಾಷ್ಟ್ರ ರಾಜಧಾನಿಯಿಂದ ನಿಲ್ಲಿಸಲಾಗಿದೆ. ದೆಹಲಿ (Delhi)ಯ ಕೊನೆಯ ರೈಲು ಮೇ 31 ರಂದು ಓಡಿತು. ದೆಹಲಿಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಕ್ಕೆ ಕರೆದೊಯ್ಯಲು ರೈಲ್ವೆ ಮೇ 1 ರಿಂದ 242 ರೈಲುಗಳನ್ನು ಓಡಿಸಿದೆ. ಅದೇ ದಿನ ಗುಜರಾತ್ (Gujrat) ಕಾರ್ಮಿಕ ಸಚಿವಾಲಯವು ಎಲ್ಲಾ ವಲಸೆ ರೈಲುಗಳ ಕಾರ್ಯಾಚರಣೆ ಸ್ಥಗಿತಗೊಳಿಸುವುದನ್ನು ಪ್ರಕಟಿಸಿದೆ.


ನಿರಂತರವಾಗಿ ಕಡಿಮೆಯಾಗುತ್ತಿರುವ ವಿಶೇಷ ರೈಲುಗಳ ಬೇಡಿಕೆ:
ರಾಜ್ಯ ಸರ್ಕಾರಗಳಿಂದ ಬೇಡಿಕೆ ಕಡಿಮೆಯಾದ ಕಾರಣ ಕಾರ್ಮಿಕ-ನಿರ್ದಿಷ್ಟ ರೈಲುಗಳ ಕಾರ್ಯಾಚರಣೆಯ ಸಂಖ್ಯೆ ದಿನಕ್ಕೆ ಕೇವಲ 50ಕ್ಕೆ ಇಳಿದಿದೆ, ಅದು ಒಂದು ಸಮಯದಲ್ಲಿ 250 ರಷ್ಟಿತ್ತು. ಈ ವಿಷಯವನ್ನು ಬುಧವಾರ ಅಧಿಕೃತ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಲಾಗಿದೆ. ಭಾರತೀಯ ರೈಲ್ವೆಯ(Indian Railways) ಅಂಕಿಅಂಶಗಳ ಪ್ರಕಾರ ಕಳೆದ ಮೂರು ದಿನಗಳಲ್ಲಿ ರೈಲ್ವೆ ಭಾನುವಾರ 69, ಸೋಮವಾರ 46 ಮತ್ತು ಮಂಗಳವಾರ 41 ರೈಲುಗಳನ್ನು ಓಡಿಸಿದೆ. ಅದೇ ಸಮಯದಲ್ಲಿ ಬುಧವಾರ ಸುಮಾರು 30 ರೈಲುಗಳನ್ನು ಓಡಿಸಲಾಗುವುದು.


ಮೇ 1 ರಿಂದ ರೈಲ್ವೆ 4,197 ಕಾರ್ಮಿಕರ ರೈಲು ಚಲಾಯಿಸುತ್ತಿದ್ದು, ಈ ಕಾರಣದಿಂದಾಗಿ 58 ಲಕ್ಷ ವಲಸೆ ಕಾರ್ಮಿಕರು (Migrant Workers) ತಮ್ಮ ಮನೆಗಳನ್ನು ತಲುಪಿದ್ದಾರೆ.