ಬೆಳಗಾವಿ: ಖಾನಾಪುರದಲ್ಲಿ ಬಿಜೆಪಿ ಪಕ್ಷದ ಸಂಘಟನೆಯು ಒಳ್ಳೆಯದಾಗಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದ್ರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ ಎಂದು ಖಾನಾಪುರ ಮತ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ. ಸೋನಾಲಿ ಸರ್ನೋಬತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ಈ ಲಿಂಕ್ ಮೂಲಕ ರಿಸಲ್ಟ್ ತಿಳಿಯಿರಿ


ನಾನು ಟಿಕೆಟ್ ಆಕಾಂಕ್ಷಿ, ನಾನು ಟಿಕೆಟ್ ಕೆಳಿದ್ದೇನೆ. ಆದರೆ ಈ ಬಗ್ಗೆ ಬಿಜೆಪಿ ವರಿಷ್ಠರು ವಿಚಾರ ಮಾಡುತ್ತಾರೆ. ಟಿಕೆಟ್ ಸಲುವಾಗಿ ನಾನು ಯಾರಿಗೂ ಭೇಟಿ ಆಗಿಲ್ಲ. ನಾವು ಗ್ರೌಂಡ್ ಲೇವಲನಲ್ಲಿ ಕೆಲಸ ಮಾಡಿದ್ದೇವೆ.ಲಕ್ಷ್ಮಣ ಸವದಿ ಅವರು ಅರವಿಂದ ಪಾಟೀಲ ಅವರಿಗೆ ಟಿಕೆಟ್ ಕೊಡಿಸಲು ಓಡಾಡುತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಾ. ಸೋನಾಲಿ ಅವರು, ಅದರ ಬಗ್ಗೆ ನಮಗೆ ಮಾಹಿತಿ‌ ಇಲ್ಲ.‌ ಲಕ್ಷ್ಮಣ ಸವದಿ ಅವರು ಅರವಿಂದ ಪಾಟೀಲ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಬೆಂಬಲ ನೀಡಲಿ. ಟಿಕೆಟ್ ನೀಡುವುದು ಹೈಕಮಾಂಡ, ಪಕ್ಷದ ವರಿಷ್ಠರು ನಮ್ಮ ಕೆಲಸ, ನಮಗೆ ಇರುವ ಜನ ಬೆಂಬಲ ನೋಡಿ ಟಿಕೆಟ್ ಕೊಡುತ್ತಾರೆ. ನಮ್ಮಲ್ಲಿ ಟಿಕೆಟ್ ಯಾರಿಗೂ ನಿಡಿದ್ರು ಎಲ್ಲರೂ ಬೆಂಬಲ ನೀಡುತ್ತೇವೆ ಬಂಡಾಯ ಯಾರು ಏಳುವುದಿಲ್ಲ ಎಂದು ಹೇಳಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.