ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಧಾನ ಸೂತ್ರವನ್ನು ಡಿಕೆಶಿ ಒಪ್ಪಿಕೊಂಡಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಬಿಗಿಪಟ್ಟು ಹಿಡಿದಿದ್ದಾರೆ. ಮಾಡುವುದಾದರೆ ನನ್ನನ್ನು ಸಿಎಂ ಮಾಡಿ, ನನಗೆ ಡಿಸಿಎಂ ಬೇಡವೆಂದು ಡಿಕೆಶಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುವುದು ನನಗೆ ಒಪ್ಪಿಗೆ ಇಲ್ಲವೆಂದು ರಾಹುಲ್ ಗಾಂಧಿ ಎದುರು ಡಿಕೆಶಿ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂತ್ರವನ್ನು ಡಿಕೆಶಿ ಒಪ್ಪದ ಹಿನ್ನೆಲೆ ಸಿಎಂ ಆಯ್ಕೆ ಇನ್ನಷ್ಟು ವಿಳಂಬವಾಗುತ್ತಿದೆ. ಖುದ್ದು ರಾಹುಲ್ ಗಾಂಧಿ ಭರವಸೆ ನೀಡಿದ್ರೂ ಡಿಕೆಶಿ ಒಪ್ಪಿಕೊಂಡಿಲ್ಲವಂತೆ. ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 4 ದಿನವಾದರೂ ಮುಖ್ಯಮಂತ್ರಿ ಆಯ್ಕೆ ಫೈನಲ್ ಆಗಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಸಿಎಂ ಆಯ್ಕೆ ಹೈಡ್ರಾಮಾ ಮುಂದುವರೆದಿದೆ.


ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನ ಕುರಿತು ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ಫೋಟಕ ಹೇಳಿಕೆ


ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರು ಅಂತಾ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಪಟ್ಟಕ್ಕಾಗಿ ಫೈಟ್ ನಡೆಯುತ್ತಿದೆ. ಆದರೆ ಯಾರಿಗೆ ಸಿಎಂ ಪಟ್ಟ ಒಲಿಯುತ್ತೆ ಅನ್ನೋ ತೀವ್ರ ಕುತೂಹಲ ಮೂಡಿದೆ.


ನನಗೂ ಬೇಡ, ಸಿದ್ದರಾಮಯ್ಯಗೂ ಬೇಡ ಹಿರಿಯ ದಲಿತ ನಾಯಕನನ್ನು ಸಿಎಂ ಮಾಡಿ ಎಂದು ಡಿಕೆಶಿ, ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರಂತೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆಯವರನ್ನು ಸಿಎಂ ಮಾಡಬೇಕೆಂದು ಡಿಕೆಶಿ ಒತ್ತಾಯಿಸಿದ್ದಾರೆ. ನನಗೆ ಕೊಟ್ಟರೆ ಸಿಎಂ ಹುದ್ದೆ ಕೊಡಿ, ನನಗೆ ಡಿಸಿಎಂ ಹುದ್ದೆ ಬೇಡವೇ ಬೇಡ. ಖರ್ಗೆಯವರನ್ನು ಸಿಎಂ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.  


ಇದನ್ನೂ ಓದಿ: ಸಿದ್ದು ಜಗ್ಗುತ್ತಿಲ್ಲ, ಡಿಕೆಶಿ ಬಗ್ಗುತ್ತಿಲ್ಲ ಯಾರಿಗೆ ಒಲಿಯುವುದು ಸಿಎಂ ಪಟ್ಟ! ಹನ್ನೊಂದು ಗಂಟೆಗೆ ಫೈನಲ್ ಮೀಟಿಂಗ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.