ನನಗೂ ಬೇಡ, ಸಿದ್ದರಾಮಯ್ಯಗೂ ಬೇಡ; ದಲಿತ ಕಾರ್ಡ್ ಪ್ರಯೋಗಿಸಿದ ಡಿಕೆಶಿ!

Karnataka CM Decision: ನೀವು ಸಿಎಂ ಆದರೆ ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಂತಾಗಲಿದೆ. ದಲಿರೊಬ್ಬರನ್ನು ರಾಜ್ಯದ ಸಿಎಂ ಮಾಡಿಸಿದ ಪುಣ್ಯ ನನಗೂ ಬರಲಿದೆ, ಪಕ್ಷಕ್ಕೂ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Written by - Puttaraj K Alur | Last Updated : May 17, 2023, 04:46 PM IST
  • ಸಿಎಂ ಸ್ಥಾನಕ್ಕಾಗಿ ಡಿಕೆಶಿ ಪಟ್ಟು ಹಿಡಿದಿದ್ದು, ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿದೆ
  • ಸಮಾನ ಅಧಿಕಾರ ಹಂಚಿಕೆ ಒಪ್ಪದ ಡಿಕೆಶಿಯಿಂದ ದಲಿತ ಕಾರ್ಡ್ ಪ್ರಯೋಗ
  • ಸಿಎಂ ಪಟ್ಟ ನನಗೂ ಬೇಡ, ಸಿದ್ದರಾಮಯ್ಯಗೂ ಬೇಡ, ನೀವೇ ಆಗಿ ಎಂದು ದಲಿತ ನಾಯಕನಿಗೆ ಮನವಿ
ನನಗೂ ಬೇಡ, ಸಿದ್ದರಾಮಯ್ಯಗೂ ಬೇಡ; ದಲಿತ ಕಾರ್ಡ್ ಪ್ರಯೋಗಿಸಿದ ಡಿಕೆಶಿ!  title=
ಡಿಕೆಶಿಯಿಂದ ದಲಿತ ಕಾರ್ಡ್ ಪ್ರಯೋಗ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಿಕ್ಕರೂ ಕಾಂಗ್ರೆಸ್‍ನಲ್ಲಿ ಸಿಎಂ ಆಯ್ಕೆ ವಿಚಾರ ಇನ್ನೂ ಕಗ್ಗಂಟಾಗಿದೆ. ಸಿದ್ದರಾಮಯ್ಯನವರೇ  ಮುಂದಿನ ಮುಖ್ಯಮಂತ್ರಿ ಎಂಬುದು ಬಹುತೇಕ ಖಚಿತವಾಗಿದೆ. ಆದರೆ ‘ಕೈ’ ಹೈಕಮಾಂಡ್‍ಗೆ ಸಿಎಂ ಆಯ್ಕೆ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಸಿಎಂ ಆಗುವುದಕ್ಕೆ ಒಪ್ಪದ ಡಿಕೆಶಿ ನನಗೆ ಕೊಟ್ಟರೆ ಸಿಎಂ ಸ್ಥಾನವನ್ನೇ ಕೊಡಿ ಇಲ್ಲದಿದ್ದರೆ ಏನೂ ಬೇಡವೆಂದು ಹೇಳಿದ್ದಾರೆ.

ಸಿಎಂ ಸ್ಥಾನಕ್ಕಾಗಿ ಡಿಕೆಶಿ ಪಟ್ಟು ಹಿಡಿದಿದ್ದು, ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿದೆ. ಈಗಾಗಲೇ ಕರ್ನಾಟಕದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಆದರೆ ಅಧಿಕೃತವಾಗಿ ಯಾರು ಸಿಎಂ ಆಗ್ತಾರೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ.   

ಇದನ್ನೂ ಓದಿ: ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸರ್ಕಾರ ರಚಿಸುತ್ತಿಲ್ಲ. ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌

ಡಿಕೆಶಿ ದಲಿತ ಕಾರ್ಡ್ ಪ್ರಯೋಗ

ಸಮಾನ ಅಧಿಕಾರ ಹಂಚಿಕೆ ಒಪ್ಪದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ದಲಿತ ಕಾರ್ಡ್ ಪ್ರಯೋಗ ಮಾಡಿದ್ದಾರೆ. ಸಿಎಂ ಪಟ್ಟ ನನಗೂ ಬೇಡ, ಸಿದ್ದರಾಮಯ್ಯಗೂ ಬೇಡ, ನೀವೇ ಆಗಿ ಅಂತಾ ದಲಿತ ನಾಯಕರೊಬ್ಬರಿಗೆ ಹೇಳಿದ್ದಾರೆ.

ನೀವು ಸಿಎಂ ಆದರೆ ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಂತಾಗಲಿದೆ. ದಲಿರೊಬ್ಬರನ್ನು ರಾಜ್ಯದ ಸಿಎಂ ಮಾಡಿಸಿದ ಪುಣ್ಯ ನನಗೂ ಬರಲಿದೆ, ಪಕ್ಷಕ್ಕೂ ಬರಲಿದೆ. ನೀವು ಸಿಎಂ ಆಗ್ತೀರಾ ಅಂದ್ರೆ ಎಲ್ಲಾ ಶಾಸಕರು ಬೆನ್ನಿಗೆ ನಿಲ್ತಾರೆ. ನಿಮ್ಮ 50 ವರ್ಷದ ನಿರಂತರ ಸೇವೆಗೆ ಗೌರವ ಬಂದಂತಾಗಲಿದೆ ಎಂದು ಡಿಕೆಶಿ ಹೇಳಿದ್ದಾರೆ. 

ಇದನ್ನೂ ಓದಿ: Karnataka CM Decision: ಕೊಟ್ಟರೆ ಸಿಎಂ ಸ್ಥಾನ ಕೊಡಿ ಇಲ್ಲದಿದ್ದರೆ ಏನು ಬೇಡವೆಂದ ಡಿಕೆಶಿ!

ಡಿಕೆಶಿ ದಲಿತ ಕಾರ್ಡ್ ಪ್ರಯೋಗದಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಈ ದಿಢೀರ್ ಬೆಳವಣಿಗೆ ನಡೆದಿದೆ. ಡಿಕೆಶಿ ದಲಿತ ದಾಳದ ಬಗ್ಗೆ ಸಿದ್ದು ಆಪ್ತರ ಜೊತೆ ಸಮಾಲೋಚನೆ ನಡೆಸಲಾಗಿದೆ. ರಾಹುಲ್ ಗಾಂಧಿ ಬಳಿಯೂ ಇದೇ ಮಾತನ್ನು ಡಿಕೆಶಿ ಹೇಳಿದ್ದಾರೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News