ಬೆಂಗಳೂರು : ಏನೇ ಹೇಳಿ ಇತ್ತೀಚಿಗೆ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದೆ.‌ ಸಿಗ್ನಲ್ ನಲ್ಲಿ ಹಣ ಕೇಳುತ್ತಿದ್ದವರು, ಮನೆಗೆ ಬಂದು ಹಣ ಕೇಳುವುದಕ್ಕೆ ಶುರು ಮಾಡಿದ್ದರು.‌ ಸದ್ಯ ಕೆಲವರು ರಾಬರಿಗೂ ನಿಂತುಬಿಟ್ಟಿದ್ದಾರೆ.  ಹೀಗೆ ಬೆಳ್ಳಂಬೆಳಗ್ಗೆ ಸುಲಿಗೆಗಿಳಿತಿದ್ದ ಮಂಗಳಮುಖಿಯರ ಗ್ಯಾಂಗ್ ಕಂಬಿ ಹಿಂದೆ ಸೇರಿದೆ.


COMMERCIAL BREAK
SCROLL TO CONTINUE READING

ಮಂಗಳಮುಖಿಯರನ್ನು ಕುಟುಂಬಸ್ಥರು ನಿರಾಕರಿಸುತ್ತಾರೆ. ಅವರಿಗೆ ಸರಿಯಾಗಿ ಕೆಲಸ ಸಿಗಲ್ಲ. ಸಮಾಜದಲ್ಲಿ ಬದುಕೋಕೆ ಕಷ್ಟ ಅಂತಾ ಕೇಳ್ದಾಗ ಜನ ಅವ್ರಿಗೆ ಹಣ ಕೊಡೋದಲ್ದೆ ಆಶೀರ್ವಾದನೂ ಪಡೀತಾರೆ. ಆದರೆ ಕೇಳಿ ಪಡೆಯೋದನ್ನ ಬಿಟ್ಟು ಕೆಲ ಮಂಗಳಮುಖಿಯರು ಸುಲಿಗೆ ಮಾಡೋಕೆ ಮುಂದಾಗಿದ್ದಾರೆ. ಹೀಗೆ ನಗರದಲ್ಲಿ ಸುಲಿಗೆ ಮಾಡುತಿದ್ದ ಮೂವರು ಮಂಗಳಮುಖಿಯರು, ಓರ್ವ ಅಟೋ ಡ್ರೈವರ್ ಸೇರಿ ನಾಲ್ವರನ್ನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ : ಜೈನ್ ಮುನಿ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಲಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ


ಸ್ನೇಹಾ, ಅವಿಷ್ಕಾ, ದೀಪಿಕಾ ಆಟೋ ಡ್ರೈವರ್ ಪ್ರಕಾಶ್ ಬಂಧಿತರು. ನಾಲ್ವರೂ ಬಾಪೂಜಿ ನಗರದಲ್ಲಿ ವಾಸವಿದ್ದರು.‌ ಮಾರತ್ತಹಳ್ಳಿ, ಸಂಪಿಗೇಹಳ್ಳಿ, ಕೊಡಿಗೇಹಳ್ಳಿ, ಸಹಕಾರ ನಗರ ಹೀಗೆ ಬೇರೆ ಬೇರೆ ಕಡೆ ಹೋಗಿ ಸುಲಿಗೆ ಮಾಡುತ್ತಿದ್ದರು.‌ ಮುಂಜಾನೆ ಐದು ಗಂಟೆಗೆ ಆಟೋದಲ್ಲಿ ಫಿಲ್ಡಿಗಿಳಿತಿದ್ದ ನಾಲ್ವರು ಟೆಕ್ಕಿಗಳನ್ನ ಟಾರ್ಗೆಟ್ ಮಾಡುತ್ತಿದ್ದರು.‌


ಐಟಿಬಿಟಿ ಕಂಪನಿಗಳ ಅಕ್ಕಪಕ್ಕದ ರಸ್ತೆ, ಬಸ್ ಸ್ಟ್ಯಾಂಡ್ ಗಳ ಬಳಿ ಓಡಾಡ್ತಿದ್ದವರ ಬಳಿ ಹಣ ಕೇಳೋ ನೆಪದಲ್ಲಿ ಹೋಗ್ತಿದ್ದ ಮಂಗಳಮುಖಿಯರು, ಹಣ ಕೊಟ್ರೂನೂ ಅವ್ರ ಬಳಿ ಇದ್ದ ಪರ್ಸ್, ಮೊಬೈಲ್, ಲ್ಯಾಪ್ ಟಾಪ್ ಚಿನ್ನಾಭರಣ ಏನೇ ಇದ್ರೂ ಕಿತ್ತಕೊಂಡು ಎಸ್ಕೇಪ್ ಆಗುತ್ತಿದ್ದರು. ನಗರದ ಹಲವೆಡೆ ಇದೆ ರೀತಿ ಕೃತ್ಯ ಎಸಗಿದ್ರೂ ಸಹ ಆರೋಪಿಗಳು ಸಿಕ್ಕಿ ಬಿದ್ದಿರಲಿಲ್ಲ.


ಇದನ್ನೂ ಓದಿ :  ಉಚಿತವಾಗಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ವಿತರಣೆ: ಬಡ ರೈತಾಪಿ ಜನರಿಗೆ ಅನುಕೂಲ


ಇತ್ತೀಚಿಗೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಸುಲಿಗೆ ಮಾಡೋವಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.‌ ಸುಲಿಗೆ ಮಾಡಿ ಸೂಪರ್ ಲೈಫ್ ಲೀಡ್ ಮಾಡೋಕೆ ಮುಂದಾಗ್ತಿದ್ದ ಮಂಗಳಮುಖಿಯರನ್ನ ಸದ್ಯ ಪೊಲೀಸರು ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.